ಬೆಳಗಾವಿ: ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ, 23ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

ಬೆಳಗಾವಿ: ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ, 23ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

Published : Aug 27, 2022, 12:36 PM IST

ಬೆಳಗಾವಿ ಇಲ್ಲಿನ ಗಾಲ್ಫ್ ಕೋರ್ಸ್‌ ಮೈದಾನಕ್ಕೆ ನುಸುಳಿರುವ ಚಿರತೆ 23 ದಿನ ಕಳೆದರೂ ಪತ್ತೆಯಾಗಿಲ್ಲ. ಶುಕ್ರವಾರ ನಡೆಸಿದ ಗಜಪಡೆಯ ಕಾರ್ಯಾಚರಣೆ ಸಂಜೆಗೆ ಮುಕ್ತಾಯಗೊಂಡಿದ್ದು, ಇದು ಯಾವುದೇ ಫಲ ಕೂಡ ನೀಡಿಲ್ಲ.

ಬೆಳಗಾವಿ (ಆ.27): ಇಲ್ಲಿನ ಗಾಲ್ಫ್ ಕೋರ್ಸ್‌ ಮೈದಾನಕ್ಕೆ ನುಸುಳಿರುವ ಚಿರತೆ 23 ದಿನ ಕಳೆದರೂ ಪತ್ತೆಯಾಗಿಲ್ಲ. ಗಜಪಡೆಯ ಕಾರ್ಯಾಚರಣೆ ಯಾವುದೇ ಫಲ ಕೂಡ ನೀಡಿಲ್ಲ. ಹೀಗಾಗಿ ಈಗ ಮತ್ತೊಂದು ಅಸ್ತ್ರವನ್ನು ಬಳಸಿಕೊಂಡಿರುವ ಅರಣ್ಯ ಇಲಾಖೆ, ಚಿರತೆ ಸೆರೆಗೆ ಆಪರೇಷನ್‌ ಹನಿಟ್ರ್ಯಾಪ್‌ಗೆ ಮೊರೆ ಹೋಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆಯನ್ನು ನೋಡಿದರೆ ಅದು ಗಂಡು ಚಿರತೆ ಎಂಬ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಿದೆ. ಹಾಗಾಗಿ ಚಿರತೆ ಸೆರೆಗೆ ಇಡಲಾಗಿರುವ 9 ಬೋನ್‌ಗಳಲ್ಲಿ ಹೆಣ್ಣು ಚಿರತೆಯ ಮೂತ್ರವನ್ನು ತಂದು ಸಿಂಪಡಿಸಲಾಗಿದೆ. ಭೂತರಾಮನಹಟ್ಟಿಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರವನ್ನು ತರಲಾಗಿದೆ ಎಂದು ಎಸಿಎಫ್‌ ಮಲ್ಲಿನಾಥ ಕುಸ್ನಾಳ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಚಿರತೆ ಸೆರೆಗೆ ನಿತ್ಯ 2.5 ಲಕ್ಷ ವೆಚ್ಚ!
ಚಿರತೆ ಶೋಧಕ್ಕೆ ಈವರೆಗೂ ಅರಣ್ಯ ಇಲಾಖೆಯಿಂದ ಒಟ್ಟು ಅಂದಾಜು .40 ಲಕ್ಷ ವೆಚ್ಚ ಮಾಡಲಾಗಿದೆ. ಇದೀಗ ಇಲಾಖೆಯ ಬಳಿ ಇರುವ ವಿಶೇಷ ಅನುದಾನ ಬಳಕೆ ಮಾಡಲಾಗುತ್ತಿದೆ. ನಿತ್ಯ ಅಂದಾಜು .2.50 ಲಕ್ಷ ವೆಚ್ಚವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗದ ಸಕ್ರೆಬೈಲ್‌ ಬಿಡಾರದಿಂದ ಬಂದಿರುವ ಗಜಪಡೆ, ನೂರಾರು ಸಿಬ್ಬಂದಿ ಊಟ, ವಸತಿ ವ್ಯವಸ್ಥೆಗೆ ನಿತ್ಯ ಲಕ್ಷ ಲಕ್ಷ ರು. ವೆಚ್ಚವಾಗುತ್ತಿದೆ.

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more