ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣಾ ಸಾಹೆಬ್ರೇ..? ಡಿಸಿ ಬಳಿ ಕಣ್ಣೀರಿಟ್ಟ ರೈತ ಮಹಿಳೆ

Feb 13, 2021, 1:22 PM IST

ಬೆಳಗಾವಿ (ಫೆ. 13): ಹಲಗಾ- ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇರೋ 3 ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಕಾಮಗಾರಿ ಮಾಡ್ತಿದ್ದಾರೆ. ಫಲವತ್ತಾದ ಜಮೀನು ಕೊಟ್ಟು ನಾವೆಲ್ಲಿಗೆ ಹೋಗೋಣ.? ಎಂದು ಡಿಸಿ ಹಿರೇಮಠ ಬಳಿ ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ.  ಕಾಮಗಾರಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ರೈತರ ಮೇಲೆ ಲಾಠಿ ಚಾರ್ಜ್ ನಡೆದಿದೆ ಎಂದು ಡಿಸಿಗೆ ಸ್ಥಳೀಯರು ದೂರು ನೀಡಿದ್ದಾರೆ.