Corona Effect: ಮನೆ ಮಂದಿ ಕೂಡಿ ದುಡಿದ್ರೂ ಬಾಗಲಕೋಟೆ ನೇಕಾರರಿಗೆ ಸಿಗುತ್ತಿಲ್ಲ ಕೂಲಿ

Corona Effect: ಮನೆ ಮಂದಿ ಕೂಡಿ ದುಡಿದ್ರೂ ಬಾಗಲಕೋಟೆ ನೇಕಾರರಿಗೆ ಸಿಗುತ್ತಿಲ್ಲ ಕೂಲಿ

Suvarna News   | Asianet News
Published : Nov 26, 2021, 09:56 AM ISTUpdated : Nov 26, 2021, 10:21 AM IST

*  ಕೈಮಗ್ಗ ನೇಕಾರರ ಮೇಲೆ ಕೊರೋನಾ ಎಫೆಕ್ಟ್
*  ಮಹಾರಾಷ್ಟ್ರಕ್ಕೆ ನೇಕಾರರ ಉತ್ಪನ್ನಗಳ ರಫ್ತು ಬಂದ್
*  ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಮನವಿ 
 

ಬಾಗಲಕೋಟೆ(ನ.26):  ಅವರೆಲ್ಲಾ ಬಡನೇಕಾರರು, ಮನೆಮಂದಿಯೆಲ್ಲಾ ಸೇರಿ ದುಡಿದ್ರೂ ಸೂಕ್ತ ಸಂಬಳ ಸಿಗೋದಿಲ್ಲ, ಇವುಗಳ ಮಧ್ಯೆಯೇ ಕಳೆದ ಎರಡು ವರ್ಷಗಳಿಂದ ಕೊರೋನಾ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಇವುಗಳ ಮಧ್ಯೆ ಮಹಾರಾಷ್ಟ್ರಕ್ಕೆ ರಫ್ತಾಗುತ್ತಿದ್ದ ಸೀರೆ, ರೇಷ್ಮೇ ಪೇಟ ಸ್ಥಗಿತವಾಗಿದ್ದು ಇದ್ರಿಂದ ಕೈಮಗ್ಗ ನೇಕಾರರ ಕುಟುಂಬಗಳು ಅತಂತ್ರವಾಗಿವೆ. 

ಹೌದು, ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ಜಿಲ್ಲೆಗಳಲ್ಲೊಂದಾಗಿರೋ ಬಾಗಲಕೋಟೆ ಜಿಲ್ಲೆಯ ಕಮತಗಿ, ಇಲಕಲ್, ಗುಳೇದಗುಡ್ಡ, ಕೆರೂರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಸಾವಿರಾರು ನೇಕಾರರ ಕುಟುಂಬಗಳಿವೆ. ಮನೆಮಂದಿಯೆಲ್ಲಾ ಸೇರಿ ಕೈಮಗ್ಗ ಸೀರೆ ನೇಯ್ಗೆಯಲ್ಲಿ ಈ ಕುಟುಂಬಗಳು ನಿತ್ಯ ಭಾಗಿಯಾಗ್ತಾರೆ. ಆದ್ರೆ ಇವರು ನೇಯ್ದ ಸೀರೆಗಳು, ರೇಷ್ಮೇ ಪೇಟಗಳು ಜಿಲ್ಲೆಯಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದ್ದವು. ರಪ್ತು ಸರಿಯಾಗಿದ್ದಾಗ ಕೂಲಿ ಕಡಿಮೆಯಾದ್ರೂ ಸಹ ಕೊಂಚ ನೆಮ್ಮದಿಯಿಂದ ಇದ್ದ ಕುಟುಂಬಗಳು ಇತ್ತೀಚಿನ ಎರಡು ವರ್ಷಗಳಲ್ಲಿನ ಕೊರೋನಾ ಎಫೆಕ್ಟ್‌ನಿಂದಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ACB Raids: ಮಗನಿಂದ ಬಯಲಾಯ್ತು ಪೈಪ್ ಒಳಗಿನ ಅಕ್ರಮ ಸಂಪತ್ತು!

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೋನಾ ಇದ್ದರಿಂದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ ಹೋಗುತ್ತಿದ್ದ ನೇಕಾರರ ಉತ್ಪನ್ನಗಳನ್ನು ಕಳುಹಿಸಲು ಆಗಿಲ್ಲ. ಇದರಿಂದ ನೇಕಾರ ಕುಟುಂಬಗಳು ಮತ್ತಷ್ಟು ಅತಂತ್ರ ಪರಿಸ್ಥಿತಿ ಎದುರಿಸುವಂತಾಯಿತು. ಹೀಗಾಗಿ ಕೆಲವೊಂದಿಷ್ಟು ಜನ್ರು ಈಗ ನೇಕಾರಿಕೆಯನ್ನ ಬಿಟ್ಟು ಬೇರೆ ಬೇರೆ ಉದ್ಯೋಗ ಅರಸಿ ಬೇರೆ ಬೇರೆ ಊರುಗಳಿಗೂ ತೆರಳುತ್ತಿದ್ದಾರೆ. ಇತ್ತ ಸರ್ಕಾರವೂ ಸಹ ನೇಕಾರರಿಗೆ ಸಬ್ಸಿಡಿಯಂತ ಯೋಜನೆಗಳನ್ನ ರೂಪಿಸುವ ಮೂಲಕ ನೆರವಿಗೆ ಬರಬೇಕಾಗಿದೆ. ಮೊದಲೇ ನೇಕಾರರು ಕಡಿಮೆ ಕೂಲಿಯಿಂದ ಕನಿಷ್ಟ ಜೀವನ ನಡೆಸುವಂತಾಗಿದ್ದು, ಇತ್ತ ಕೈಮಗ್ಗಗಳಿರೋ ಮನೆಗಳಿಗೆ ಹೆಣ್ಣು ಸಹ ಕೊಡದೇ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಸರ್ಕಾರ ನೇಕಾರರ ಕುಟುಂಬಗಳ ನೆರವಿಗೆ ಬರಲಿ ಅಂತಿದ್ದಾರೆ ನೊಂದ ನೇಕಾರರು.

ಒಟ್ಟಿನಲ್ಲಿ ಕೊರೋನಾದಿಂದ ಸಾಕಷ್ಟು ಉದ್ಯಮಗಳು ನೆಲಕಚ್ಚಿರುವ ಬೆನ್ನಲ್ಲೇ ಇತ್ತ ಕೈಮಗ್ಗದ ಉತ್ಪಾದನೆಯ ಮೇಲೂ ಕರಿನೆರಳು ಬೀರಿದ್ದು, ಆದಷ್ಟು ಬೇಗ ಉದ್ಯಮ ಚೇತರಿಕೆಯಾಗಲಿ ಇದರೊಟ್ಟಿಗೆ ಸರ್ಕಾರವೂ ಸಹ ನೇಕಾರರ ಬೆನ್ನಿಗೆ ನಿಲ್ಲುವಂತಾಗಲಿ ಅನ್ನೋದೆ ಎಲ್ಲರ ಆಶಯ. 
 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!