ಯಾವ ಗ್ರಹದ ಜೀವಿಗಳು.. ಬೆಂಗಳೂರಿಗೆ ಬಂದಿಳಿದ ಚಂದ್ರಯಾನಿಗಳು!

Sep 2, 2019, 5:16 PM IST

ಚಂದ್ರನ ಮೇಲೆ ಮಾನವ ಕಾಲಿಟ್ಟು ಬಂದಿದ್ದು ಇತಿಹಾಸ.. ಈಗ ಬೆಂಗಳೂರಿನ ಮಾನವ ಸಹ ಚಂದ್ರನ ಮೇಲೆ ಇದ್ದಾನೆ.. ಬೆಂಗಳೂರಿನ ನಾಗರಿಕರು ಪ್ರತಿದಿನ ಚಂದ್ರನ ಮೇಲೆ ನಡೆದಾಡುತ್ತಾರೆ.. ಸಂಚಾರ ಮಾಡುತ್ತಾರೆ.. ಅಂಥದ್ದೊಂದು ಶುಭ ಯೋಗವನ್ನು ಆಡಳಿತ ಮಾಡಿಕೊಟ್ಟಿದೆ! ಹೌದು.. ಯಶವಂತಪುರ ವ್ಯಾಪ್ತಿಯ ಹೆರೋಹಳ್ಳಿ ರಸ್ತೆಯ ಸ್ಥಿತಿ ಚಂದ್ರನ ಮೇಲ್ಮೈನಂತೆ ಗುಂಡಿಗಳ ಆಗರ. ಕಲಾವಿದ ಬಾದಲ್ ನಂಜುಂಡ ಸ್ವಾಮಿ ಅವರು ಬೆಂಗಳೂರಿನಲ್ಲಿಯೇ ಚಂದ್ರಯಾನ ಮಾಡಿದ್ದು ಸರ್ಕಾರ ಮತ್ತು ಆಡಳಿತವನ್ನು ತಮ್ಮ ವಿಡಂಬನಾತ್ಮಕ ಕಲೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.