ಶ್ವೇತ ಕ್ರಾಂತಿಯ ವಿರುದ್ಧ ರಾಜ್ಯದಲ್ಲಿ ಹೊಸ ಕ್ರಾಂತಿ..ವಿಪಕ್ಷಗಳ ಆರೋಪವೇನು..?

ಶ್ವೇತ ಕ್ರಾಂತಿಯ ವಿರುದ್ಧ ರಾಜ್ಯದಲ್ಲಿ ಹೊಸ ಕ್ರಾಂತಿ..ವಿಪಕ್ಷಗಳ ಆರೋಪವೇನು..?

Published : Apr 09, 2023, 12:42 PM IST

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ. ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 
 

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ.. ಈ ಯುದ್ಧ ರಾಜ್ಯದ ಭವಿಷ್ಯವನ್ನು ಡಿಸೈಡ್ ಮಾಡುತ್ತೆ ಎನ್ನುವ ಹಾಗೆ ವಾತಾವರಣ ಬದಲಾಗಿದೆ. ಬೆಂಗಳೂರಿಗೆ ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಟ್ವೀಟರ್‌ನಲ್ಲಿ ಈ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ. ಅಮುಲ್‌ ಜತೆ ಕೆಎಂಎಫ್‌ ವಿಲೀನ ಮಾಡುವ ತಂತ್ರ ಮಾಡುತ್ತಿದ್ದೀರಾ, ಪ್ರಾದೇಶಿಕ ಸಂಸ್ಥೆಯನ್ನು ನಾಶ ಮಾಡುತ್ತಿದ್ದೀರಾ, ಅಮುಲ್‌ ಬೆಳೆಸಲು ನಂದಿನಿ ಕೃತಕ ಅಭಾವ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.ಇನ್ನೊಂದಡೆ ರಾಜ್ಯ ವಿರೋಧ ಪಕ್ಷ ಕಾಂಗ್ರೆಸ್‌, ಪ್ರಾದೇಶಕ ಪಕ್ಷ ಜ್ಯಾತ್ಯಾತೀತ ಜನತಾ ದಳ ಕೂಡಾ ಸಾಕಷ್ಟು ವಿರೋಧ ವ್ಯಕ್ತಪಡಿಸಿದೆ.ಕಳೆದ 50 ವರ್ಷಗಳ ಇತಿಹಾಸ ತೆಗೆದು ನೋಡಿದರೆ ಹೈನುಗಾರಿಕೆ ನಂಬಿಕೊಂಡು ಬಡವಾಗಿದ್ದ ರೈತರಿಗೆ ಬೆಳಕಾಗಿದ್ದು ಅಮುಲ್ ಸಂಸ್ಥೆ. ಅದರಲ್ಲೂ ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದ ರೈತರನ್ನ ಸಂಕಷ್ಟದಿಂದ ಪಾರಾಗಿಸಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಟೊಂಕಕಟ್ಟಿ ನಿಂತಿದ್ದು, ಅಂಥಾ ಹೊತ್ತಲ್ಲಿ, ಅಮುಲ್ ಸಂಸ್ಥೆ ತನ್ನ ಸಾಧನೆ ಮೆರೆದಿತ್ತು. ಈ ಮೂಲಕ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿತ್ತು. ಈಗ ಅಮುಲ್ ಸಂಸ್ಥೆ ಕರ್ನಾಟಕಕ್ಕೆ ಬರ್ತಾ ಇದೆ ಅಂದರೆ ಅದಕ್ಕೆ ಸ್ವಾಗತಕ್ಕಿಂತಾ ಹೆಚ್ಚಾಗಿ ಎದುರಾಗುತ್ತಾ ಇರುವುದು ವಿರೋಧಗಳು.. ಆ ವಿರೋಧಕ್ಕೆ ಕಾರಣ ಏನು ಅಂತ ಕೇಳಿದ್ರೆ ಬರೋ ಉತ್ತರ ಏನು ಗೊತ್ತಾ..? ಈ ವಇಡಿಯೋ ನೋಡಿ 
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!