ಶ್ವೇತ ಕ್ರಾಂತಿಯ ವಿರುದ್ಧ ರಾಜ್ಯದಲ್ಲಿ ಹೊಸ ಕ್ರಾಂತಿ..ವಿಪಕ್ಷಗಳ ಆರೋಪವೇನು..?

ಶ್ವೇತ ಕ್ರಾಂತಿಯ ವಿರುದ್ಧ ರಾಜ್ಯದಲ್ಲಿ ಹೊಸ ಕ್ರಾಂತಿ..ವಿಪಕ್ಷಗಳ ಆರೋಪವೇನು..?

Published : Apr 09, 2023, 12:42 PM IST

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ. ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 
 

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ.. ಈ ಯುದ್ಧ ರಾಜ್ಯದ ಭವಿಷ್ಯವನ್ನು ಡಿಸೈಡ್ ಮಾಡುತ್ತೆ ಎನ್ನುವ ಹಾಗೆ ವಾತಾವರಣ ಬದಲಾಗಿದೆ. ಬೆಂಗಳೂರಿಗೆ ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಟ್ವೀಟರ್‌ನಲ್ಲಿ ಈ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ. ಅಮುಲ್‌ ಜತೆ ಕೆಎಂಎಫ್‌ ವಿಲೀನ ಮಾಡುವ ತಂತ್ರ ಮಾಡುತ್ತಿದ್ದೀರಾ, ಪ್ರಾದೇಶಿಕ ಸಂಸ್ಥೆಯನ್ನು ನಾಶ ಮಾಡುತ್ತಿದ್ದೀರಾ, ಅಮುಲ್‌ ಬೆಳೆಸಲು ನಂದಿನಿ ಕೃತಕ ಅಭಾವ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.ಇನ್ನೊಂದಡೆ ರಾಜ್ಯ ವಿರೋಧ ಪಕ್ಷ ಕಾಂಗ್ರೆಸ್‌, ಪ್ರಾದೇಶಕ ಪಕ್ಷ ಜ್ಯಾತ್ಯಾತೀತ ಜನತಾ ದಳ ಕೂಡಾ ಸಾಕಷ್ಟು ವಿರೋಧ ವ್ಯಕ್ತಪಡಿಸಿದೆ.ಕಳೆದ 50 ವರ್ಷಗಳ ಇತಿಹಾಸ ತೆಗೆದು ನೋಡಿದರೆ ಹೈನುಗಾರಿಕೆ ನಂಬಿಕೊಂಡು ಬಡವಾಗಿದ್ದ ರೈತರಿಗೆ ಬೆಳಕಾಗಿದ್ದು ಅಮುಲ್ ಸಂಸ್ಥೆ. ಅದರಲ್ಲೂ ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದ ರೈತರನ್ನ ಸಂಕಷ್ಟದಿಂದ ಪಾರಾಗಿಸಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಟೊಂಕಕಟ್ಟಿ ನಿಂತಿದ್ದು, ಅಂಥಾ ಹೊತ್ತಲ್ಲಿ, ಅಮುಲ್ ಸಂಸ್ಥೆ ತನ್ನ ಸಾಧನೆ ಮೆರೆದಿತ್ತು. ಈ ಮೂಲಕ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿತ್ತು. ಈಗ ಅಮುಲ್ ಸಂಸ್ಥೆ ಕರ್ನಾಟಕಕ್ಕೆ ಬರ್ತಾ ಇದೆ ಅಂದರೆ ಅದಕ್ಕೆ ಸ್ವಾಗತಕ್ಕಿಂತಾ ಹೆಚ್ಚಾಗಿ ಎದುರಾಗುತ್ತಾ ಇರುವುದು ವಿರೋಧಗಳು.. ಆ ವಿರೋಧಕ್ಕೆ ಕಾರಣ ಏನು ಅಂತ ಕೇಳಿದ್ರೆ ಬರೋ ಉತ್ತರ ಏನು ಗೊತ್ತಾ..? ಈ ವಇಡಿಯೋ ನೋಡಿ 
 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!