Uttara Kannada: ಮಾಗೋಡು ಗ್ರಾಮದಲ್ಲಿ ಆಲೆಮನೆ ಹಬ್ಬ, 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

Uttara Kannada: ಮಾಗೋಡು ಗ್ರಾಮದಲ್ಲಿ ಆಲೆಮನೆ ಹಬ್ಬ, 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

Published : Feb 27, 2022, 05:48 PM ISTUpdated : Feb 27, 2022, 06:17 PM IST

ಜಾತ್ರೆ, ರಥೋತ್ಸವ ಹಾಗೂ ಇತರ ಹಬ್ಬಗಳ ಆಚರಣೆಯಲ್ಲಿ ಸಾವಿರಾರು ಜನರು ಸೇರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಹಬ್ಬದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಹಬ್ಬವನ್ನು ಜಾತ್ರೆಯನ್ನಾಗಿ ಮಾಡಿದ್ದಾರೆ.

ಉತ್ತರ ಕನ್ನಡ (ಫೆ. 27):  ಜಾತ್ರೆ, ರಥೋತ್ಸವ ಹಾಗೂ ಇತರ ಹಬ್ಬಗಳ ಆಚರಣೆಯಲ್ಲಿ ಸಾವಿರಾರು ಜನರು ಸೇರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಹಬ್ಬದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಹಬ್ಬವನ್ನು ಜಾತ್ರೆಯನ್ನಾಗಿ ಮಾಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿ ಮಲೆನಾಡು ಭಾಗದಲ್ಲಿ ಈ ಹಿಂದೆ ಕಾಣುತ್ತಿದ್ದ ಗ್ರಾಮೀಣ ಸೊಗಡಿನ ಆಲೆಮನೆ ಮತ್ತೆ ಅನಾವರಣಗೊಂಡಿದೆ. ರಾತ್ರಿಯಿಡಿ ಕಬ್ಬಿನ ಗಾಣದ ಸದ್ದು, ಹಾಲು ಕುಡಿದು ಖುಷಿಪಡುತ್ತಿರುವವರ ಸಂಖ್ಯೆಗೇನು ಕೊರತೆ ಇಲ್ಲ. ಕಳೆದ ಐದು ವರ್ಷಗಳಿಂದ ಮಾಗೋಡು  ಗ್ರಾಮದಲ್ಲಿ ಇಂಥ ಅಲೆಮನೆ ಹಬ್ಬವನ್ನು ಸಂಘಟಿಸಲಾಗುತ್ತಿದೆ.  ಆಲೆಮನೆಯಲ್ಲಿ ಹಳ್ಳಿಯ ಬಗೆಬಗೆಯ ತಿಂಡಿ ತಿನಿಸುಗಳ ಜತೆಗೆ  ಮನಸ್ಸಿಗೆ ಉಲ್ಲಾಸ ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಆಲೆಮನೆಯಲ್ಲಿ ಬಂಧು ಬಾಂಧವರು, ಮಿತ್ರರು ಎಲ್ಲರ ಸಮಾಗಮವಾಗಿರುವುದು ಇಲ್ಲಿನ ವಿಶೇಷವಾಗಿದೆ. 

ಮಾಗೋಡು ಗ್ರಾಮದಲ್ಲಿ ನಡೆದ ಈ ಉತ್ಸವದಲ್ಲಿ ಪರಿಶುದ್ಧ ಕಬ್ಬಿನ ಹಾಲು, ತೊಡೆದೇವು, ಬೆಲ್ಲ, ಕಾಕಂಬಿ, ಮಾರಾಟವೂ ಕೂಡ ಜೋರಾಗಿತ್ತು. ಆಗಮಿಸಿದ ಪ್ರತಿಯೊಬ್ಬರಿಗೂ ಉಚಿತವಾಗಿ ಹಾಲು, ಬಜೆ, ಪಾಪಡಿಯನ್ನು ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ, ಹಬ್ಬದ ವಿಶೇಷವಾಗಿ ಮಹಾದ್ವಾರದ ವಿವಿಧ ಮಳಿಗೆಗಳಲ್ಲೂ ಪೌರಾಣಿಕ ಕಲ್ಪನೆ ಕೊಡುವ ನಮ್ಮ ಮಹಾಕಾವ್ಯಗಳ ಪರಿಚಯ ಮಾಡಿಸುವ ಪ್ರಯತ್ನ ನಡೆಯಿತು. ಹಳೆಯ ಕಾಲದ ಆಲೆಮನೆಯ ವೈಭವವನ್ನು ನೋಡುವ ಅವಕಾಶ ಮಲೆನಾಡು ಭಾಗದ ನಾಗರಿಕರಿಗೆ ಲಭಿಸಿತು.  ಸುಮಾರು 10 ಟನ್ ಗೂ ಹೆಚ್ಚು ಕಬ್ಬುಗಳನ್ನು ತರಿಸಲಾಗಿದ್ದು, 10 ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡರು.  ಕೃಷಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿರೋದಾಗಿ ಸಂಘಟಕರು ಹೇಳಿದ್ದಾರೆ. 

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more