ಭೀಮಾತೀರಕ್ಕೆ ಎಡಿಜಿಪಿ ಭೇಟಿ ನೀಡಿ ಗ್ಯಾಂಗ್ ನಡುವೆ ಸಂಧಾನ, ನೆತ್ತರ ಕಹಾನಿಗೆ ಬೀಳುತ್ತಾ ಬ್ರೇಕ್?

ಭೀಮಾತೀರಕ್ಕೆ ಎಡಿಜಿಪಿ ಭೇಟಿ ನೀಡಿ ಗ್ಯಾಂಗ್ ನಡುವೆ ಸಂಧಾನ, ನೆತ್ತರ ಕಹಾನಿಗೆ ಬೀಳುತ್ತಾ ಬ್ರೇಕ್?

Published : Feb 17, 2023, 07:43 PM IST

ಭೀಮಾತೀರದ ದಶಕಗಳ ಇತಿಹಾಸದಲ್ಲೆ ನಡೆಯದ ಅದೊಂದು ಕೆಲಸವನ್ನ ಖಡಕ್‌ ಪೊಲೀಸ್‌ ಆಫೀಸರ್‌ ಎಂದೇ ಖ್ಯಾತಿ ಪಡೆದಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್‌ ಮಾಡಿದ್ದಾರೆ. 

ವಿಜಯಪುರ (ಫೆ.17): ಭೀಮಾತೀರದ ದಶಕಗಳ ಇತಿಹಾಸದಲ್ಲೆ ನಡೆಯದ ಅದೊಂದು ಕೆಲಸವನ್ನ ಖಡಕ್‌ ಪೊಲೀಸ್‌ ಆಫೀಸರ್‌ ಎಂದೇ ಖ್ಯಾತಿ ಪಡೆದಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್‌ ಮಾಡಿದ್ದಾರೆ. ಈ ಹಿಂದೆ ನಕಲಿ ಎನ್ಕೌಂಟರ್‌ ಮೂಲಕ ಭೀಮಾತೀರದಲ್ಲಿ ಖಾಕಿಗೆ ಅಂಟಿದ ಕೊಳೆಯನ್ನ ತೊಳೆಯಲು ಸ್ವತಃ ಅಲೋಕಕುಮಾರ್‌ ಭೀಮೆಯ ಮಕ್ಕಳು ಮೆಚ್ಚುವಂತ ಅದೊಂದು ಕೆಲಸವನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅದೇನಂದ್ರೆ ಎಡಿಜಿಪಿ ಅಲೋಕ್‌ ಕುಮಾರ್ ಹಠಕ್ಕೆ ಬಿದ್ದವರಂತೆ ಕೊನೆಗು ಭೀಮಾತೀರದ ಎರಡು ನಟೋರಿಯಸ್‌ ಹಂತಕ ಪಡೆಗಳ ನಡುವೆ ರಾಜಿ ಸಂಧಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಭೀಮಾತೀರದ ಮಾಸ್ಟರ್‌ ಮೈಂಡ್‌ ಅಂತಾ ಕರೆಯಿಸಿಕೊಳ್ಳುವ ಮಲ್ಲಿಕಾಜೀ ಚಡಚಣ ಗ್ಯಾಂಗ್‌ ಹಾಗೂ ಭೀಮಾತೀರದಲ್ಲಿ ಜೀವ ಉಳಿಸಿಕೊಳ್ಳಲು ಸದಾ ಬಂದೂಕಿನ ಬೆಂಗಾವಲನ್ನೆ ಕಟ್ಟಿಕೊಂಡು ಅಡ್ತಾಡ್ತಿದ್ದ ಬೈರಗೊಂಡ ಗ್ಯಾಂಗಿನ ನಡುವೆ ಸಂಧಾನ ನಡೆದಿದೆ.

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more