Chikkamagaluru: ಕಸಾಯಿಖಾನೆ ಪಾಲಾಗ್ತಿದ್ದ 70ಕ್ಕೂ ಹೆಚ್ಚು ಗೋವುಗಳಿಗೆ ಮರುಜನ್ಮ..!

Chikkamagaluru: ಕಸಾಯಿಖಾನೆ ಪಾಲಾಗ್ತಿದ್ದ 70ಕ್ಕೂ ಹೆಚ್ಚು ಗೋವುಗಳಿಗೆ ಮರುಜನ್ಮ..!

Suvarna News   | Asianet News
Published : Jan 21, 2022, 12:21 PM IST

*   ಚಿಕ್ಕಮಗಳೂರಿನ ಇಂದಾವರದಲ್ಲಿ ಗೋವುಗಳಿಗೆ ಆಶ್ರಯ 
*   ದನಗಳ್ಳರ ಹಾವಳಿಯಿಂದ ಬೇಸತ್ತು ಗೋಶಾಲೆ ಕಟ್ಟಿದ ಯುವಕರು
*   ದನಗಳನ್ನ ಸಾಕಲಾಗದೇ ಕಸಾಯಿಖಾನೆಗೆ ಮಾರುವವರ ಮನವೊಲಿಕೆ
 

ಚಿಕ್ಕಮಗಳೂರು(ಜ.21):  ಗೋವುಗಳನ್ನ ಸಾಕೋದು ಏನು ದೊಡ್ಡ ವಿಚಾರವೇನಲ್ಲ. ಆದ್ರೆ, ಇಲ್ಲಿರೋ 70ಕ್ಕೂ ಹೆಚ್ಚು ದನಕರುಗಳು ಒಂದು ದಿನ ಲೇಟಾಗಿದ್ರೂ ನಮ್ಮ ಕಣ್ಣೆದುರು ಇರ್ತಾ ಇರ್ಲಿಲ್ಲ. ಎಲ್ಲವೂ ಕಸಾಯಿ ಖಾನೆಗೆ ಹೋಗಲು ತಯಾರಿ ನಡೆದಿತ್ತು. ಈ ವಿಚಾರವನ್ನ ತಿಳಿದ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಕಾಮಧೇನು ಗೋ ಗೋಶಾಲೆಯ ಭಗವಾನ್, ಲಕ್ಷ್ಮಣ್ ಸೇರಿ ಮೋಹನ್ ಗೌಡ ಎಂಬುವರ ಸಹಾಯ ಪಡೆದು ಈ ಗೋವುಗಳನ್ನ ಕಾಪಾಡಿದ್ದಾರೆ. 

ನಮಗೆ ಈ ದನಗಳನ್ನ ಸಾಕಲು ಸಾಧ್ಯವಾಗ್ತಿಲ್ಲ. ಹಾಗಾಗಿ ಈಗಾಗಲೇ ಕಸಾಯಿಖಾನೆಗೆ ಮಾರಲು ಮುಂದಾಗಿ, ಅಡ್ವಾನ್ಸ್ ಕೂಡ ಪಡೆದಿದ್ದೇವೆ ಅಂತಾ ದನಗಳನ್ನ ಮಾರಲು ಸಿದ್ದರಾದವರ ಮನಸ್ಸನ್ನೇ ಈ ಗೋ ಪಾಲಕರು ಬದಲಾಯಿಸಿದ್ದಾರೆ. ಸದ್ಯ 70ರಲ್ಲಿ 40ಕ್ಕೂ ಹೆಚ್ಚು ರಾಸುಗಳು ಉಳಿದ 30ಕ್ಕೂ ಹೆಚ್ಚು ಗಂಡು ಕರುಗಳು ಇದೀಗ ಕಸಾಯಿಖಾನೆಯ ಬದಲು ಗೋಶಾಲೆಯಲ್ಲಿ ಆಶ್ರಯ ಪಡೆದು ನೆಮ್ಮದಿಯಾಗಿವೆ. 

Weekend Curfew:ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ: ಸಿಎಂ ಭರವಸೆ

ಒಟ್ಟಾರೆ, ಸದ್ಯ 80ಕ್ಕೂ ಹೆಚ್ಚು ದನಕರುಗಳಿಗೆ ಪುನರ್ ಜೀವನ ಕೊಟ್ಟು ಸಾಕುತ್ತಿರೋ ಈ ಗೋಪಾಲಕರ ಕಾಳಜಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಗೋವುಗಳ ರಕ್ಷಣೆಗೆ ಕಟಿಬದ್ಧರಾಗಿರುವವರ ಕಾರ್ಯ ನಿಜಕ್ಕೂ ಪ್ರಶಂಸನೀಯ. ಒಟ್ಟಿನಲ್ಲಿ ಈ ಗೋಪಾಲಕರ ಸಮಯಪ್ರಜ್ಞೆಯಿಂದ 70ಕ್ಕೂ ಹೆಚ್ಚು ದನಕರುಗಳು ಮರಜನ್ಮವನ್ನೇ ಪಡೆಯುವಂತಾಗಿದೆ.
 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more