ಕನ್ಹಯ್ಯ ಬರೋದು ಬೇಡ! 'ಕೃಷ್ಣ'ನ ಉಪನ್ಯಾಸಕ್ಕೆ 'ಶ್ರೀರಾಮ' ವಿರೋಧ!

Oct 15, 2019, 3:53 PM IST

ಕಲಬುರಗಿ (ಅ.15): ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ನೀಡಲಾಗಿದ್ದ ಅನುಮತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಹಿಂಪಡೆದಿದೆ. ನಿನ್ನೆಯಷ್ಟೇ ವಿಶ್ವವಿದ್ಯಾಲಯವು ಷರತ್ತು ಬದ್ದ ಅನುಮತಿ ನೀಡಿತ್ತು, ಆದರೆ, ಕಳೆದ ಮಧ್ಯರಾತ್ರಿ ಏಕಾಏಕಿ ಅನುಮತಿ ನಿರಾಕರಿಸಿದೆ.

ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ಶ್ರೀರಾಮ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು, ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆ ಹಿನ್ನೆಲೆಯಲ್ಲಿ ವಿವಿಯು U ಟರ್ನ್ ಹೊಡೆದಿದೆ. 

ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕಂಡ, ಆಧುನಿಕ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರದ ಕನ್ಹಯ್ಯ ಕುಮಾರ್ ಅವರು ಉಪನ್ಯಾಸ ನೀಡಬೇಕಿತ್ತು