Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

Published : Feb 15, 2024, 06:27 PM IST

ಕಣ್ಣೆದುರಲ್ಲೇ ಅತ್ತೆ..ಗಂಡನ ಹತ್ಯೆ..ರಾಜಕೀಯದ ಪಗಡೆಯಾಟ..!
ಕೈಗೆ ಬಂದಿದ್ದ ಪ್ರಧಾನಿ ಪಟ್ಟವನ್ನೇ ಬೇಡ ಅಂದಿದ್ದರು ಸೋನಿಯಾ..!
ಬೆರಗು ಹುಟ್ಟಿಸುತ್ತದೆ ಕಾಂಗ್ರೆಸ್ ರಾಜಮಾತೆಯ ರಾಜಕೀಯ ಚರಿತ್ರೆ..!
ದುರ್ಗಿಯಂಥಾ ಅತ್ತೆ, ಪತಿಯ ಹತ್ಯೆ ನಂತರ ರಾಜಕೀಯಕ್ಕೆ ಎಂಟ್ರಿ..!

ಲೋಕಸಭೆಗೆ ಗುಡ್ ಬೈ ಹೇಳಿದ್ರು ಕಾಂಗ್ರೆಸ್ ರಾಜಮಾತೆ. ರಾಜ್ಯಸಭೆಗೆ(Rajya Sabha) ಎಂಟ್ರಿ ಕೊಡಲಿದ್ದಾರೆ ಕಾಂಗ್ರೆಸ್(Congress) ಅಧಿನಾಯಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೊಸೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿ. ಹುಟ್ಟೂರಲ್ಲದ ದೇಶವೊಂದಕ್ಕೆ ಸೊಸೆಯಾಗಿ ಬಂದು ಜನಬೆಂಬಲದೊಂದಿಗೆ ಭಾರತದ ಬಲಿಷ್ಠ ರಾಜಕೀಯ ನಾಯಕಿಯ ಸ್ಥಾನವನ್ನು ಆಕ್ರಮಿಸಿಕೊಂಡ ಛಲಗಾರ್ತಿ. ದೇಶದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸೋನಿಯಾ ಗಾಂಧಿಯವರ ರಾಜಕೀಯ ಚರಿತ್ರೆಗೆ ರೋಚಕ ತಿರುವು ಸಿಕ್ಕಿದೆ. ಇಲ್ಲಿವರೆಗೆ ಸತತ ಆರು ಬಾರಿ ಲೋಕಸಭಾ (Loksabha)ಸದಸ್ಯೆಯಾಗಿದ್ದ ಸೋನಿಯಾ ಗಾಂಧಿ(Sonia Gandhi), ಇದೀಗ ಲೋಕಸಭೆಗೆ ಗುಡ್ ಬೈ ಹೇಳಿ, ರಾಜ್ಯಸಭೆ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಲು ಮುಂದಾಗಿರುವ ಕಾಂಗ್ರೆಸ್ ರಾಜಮಾತೆ, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವೊಂದರಲ್ಲಿ ಸೋನಿಯಾ ಗಾಂಧಿ ಈ ರೀತಿ ಭಾವುಕರಾಗಿ ಮಾತನಾಡಿದ್ರು. ಇಟಲಿಯ ವೆನೆಟೋದ ಲೂಸಿಯಾನ ಎಂಬಲ್ಲಿ ಹುಟ್ಟಿದ್ದ ಸೋನಿಯಾ ಮೈನೋ, ಸೋನಿಯಾ ಗಾಂಧಿಯಾಗಿದ್ದೇ ಒಂದು ರೋಚಕ ಕಥೆ. ಪ್ರಿಯ ವೀಕ್ಷಕರೇ.. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರೋ ಭಾರತದಲ್ಲಿ, ಭಾರತದ ರಾಜಕಾರಣದಲ್ಲಿ ವಿದೇಶದಿಂದ ಬಂದ ಒಬ್ಬ ಮಹಿಳೆ ಛಾಪು ಮೂಡಿಸೋದಿದ್ಯಲ್ಲಾ... ಅದು ನಿಜಕ್ಕೂ ಬೆರಗು ಹುಟ್ಟಿಸುವಂಥಾ ಕಥೆ. ಅಂಥಾ ಕುತೂಹಲದ ಕಥೆಯ ಕಥಾನಾಯಕಿ ಸೋನಿಯಾ ಗಾಂಧಿ.

ಇದನ್ನೂ ವೀಕ್ಷಿಸಿ:  Raichur: ರಾಯಚೂರಿನಲ್ಲಿ ಮುಸ್ಲಿಮರ ನಡುವೆ ಮಾರಾಮಾರಿ: ಅಹಮದೀಯ ಮುಸ್ಲಿಮರ ಮೇಲೆ ಕಟ್ಟಾ ಮುಸ್ಲಿಮರಿಂದ ಹಲ್ಲೆ

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more