Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

Published : Feb 15, 2024, 06:27 PM IST

ಕಣ್ಣೆದುರಲ್ಲೇ ಅತ್ತೆ..ಗಂಡನ ಹತ್ಯೆ..ರಾಜಕೀಯದ ಪಗಡೆಯಾಟ..!
ಕೈಗೆ ಬಂದಿದ್ದ ಪ್ರಧಾನಿ ಪಟ್ಟವನ್ನೇ ಬೇಡ ಅಂದಿದ್ದರು ಸೋನಿಯಾ..!
ಬೆರಗು ಹುಟ್ಟಿಸುತ್ತದೆ ಕಾಂಗ್ರೆಸ್ ರಾಜಮಾತೆಯ ರಾಜಕೀಯ ಚರಿತ್ರೆ..!
ದುರ್ಗಿಯಂಥಾ ಅತ್ತೆ, ಪತಿಯ ಹತ್ಯೆ ನಂತರ ರಾಜಕೀಯಕ್ಕೆ ಎಂಟ್ರಿ..!

ಲೋಕಸಭೆಗೆ ಗುಡ್ ಬೈ ಹೇಳಿದ್ರು ಕಾಂಗ್ರೆಸ್ ರಾಜಮಾತೆ. ರಾಜ್ಯಸಭೆಗೆ(Rajya Sabha) ಎಂಟ್ರಿ ಕೊಡಲಿದ್ದಾರೆ ಕಾಂಗ್ರೆಸ್(Congress) ಅಧಿನಾಯಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೊಸೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿ. ಹುಟ್ಟೂರಲ್ಲದ ದೇಶವೊಂದಕ್ಕೆ ಸೊಸೆಯಾಗಿ ಬಂದು ಜನಬೆಂಬಲದೊಂದಿಗೆ ಭಾರತದ ಬಲಿಷ್ಠ ರಾಜಕೀಯ ನಾಯಕಿಯ ಸ್ಥಾನವನ್ನು ಆಕ್ರಮಿಸಿಕೊಂಡ ಛಲಗಾರ್ತಿ. ದೇಶದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸೋನಿಯಾ ಗಾಂಧಿಯವರ ರಾಜಕೀಯ ಚರಿತ್ರೆಗೆ ರೋಚಕ ತಿರುವು ಸಿಕ್ಕಿದೆ. ಇಲ್ಲಿವರೆಗೆ ಸತತ ಆರು ಬಾರಿ ಲೋಕಸಭಾ (Loksabha)ಸದಸ್ಯೆಯಾಗಿದ್ದ ಸೋನಿಯಾ ಗಾಂಧಿ(Sonia Gandhi), ಇದೀಗ ಲೋಕಸಭೆಗೆ ಗುಡ್ ಬೈ ಹೇಳಿ, ರಾಜ್ಯಸಭೆ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಲು ಮುಂದಾಗಿರುವ ಕಾಂಗ್ರೆಸ್ ರಾಜಮಾತೆ, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವೊಂದರಲ್ಲಿ ಸೋನಿಯಾ ಗಾಂಧಿ ಈ ರೀತಿ ಭಾವುಕರಾಗಿ ಮಾತನಾಡಿದ್ರು. ಇಟಲಿಯ ವೆನೆಟೋದ ಲೂಸಿಯಾನ ಎಂಬಲ್ಲಿ ಹುಟ್ಟಿದ್ದ ಸೋನಿಯಾ ಮೈನೋ, ಸೋನಿಯಾ ಗಾಂಧಿಯಾಗಿದ್ದೇ ಒಂದು ರೋಚಕ ಕಥೆ. ಪ್ರಿಯ ವೀಕ್ಷಕರೇ.. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರೋ ಭಾರತದಲ್ಲಿ, ಭಾರತದ ರಾಜಕಾರಣದಲ್ಲಿ ವಿದೇಶದಿಂದ ಬಂದ ಒಬ್ಬ ಮಹಿಳೆ ಛಾಪು ಮೂಡಿಸೋದಿದ್ಯಲ್ಲಾ... ಅದು ನಿಜಕ್ಕೂ ಬೆರಗು ಹುಟ್ಟಿಸುವಂಥಾ ಕಥೆ. ಅಂಥಾ ಕುತೂಹಲದ ಕಥೆಯ ಕಥಾನಾಯಕಿ ಸೋನಿಯಾ ಗಾಂಧಿ.

ಇದನ್ನೂ ವೀಕ್ಷಿಸಿ:  Raichur: ರಾಯಚೂರಿನಲ್ಲಿ ಮುಸ್ಲಿಮರ ನಡುವೆ ಮಾರಾಮಾರಿ: ಅಹಮದೀಯ ಮುಸ್ಲಿಮರ ಮೇಲೆ ಕಟ್ಟಾ ಮುಸ್ಲಿಮರಿಂದ ಹಲ್ಲೆ

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more