Suvarna Focus: ಅಲ್ಲಿ ಎನ್ಕೌಂಟರ್.. ಇಲ್ಲಿ ಬುಲ್ಡೋಜರ್.. ಮಾಫಿಯಾ ಕ್ರಿಮಿಗಳಿಗೆ ಯೋಗಿಯೇ ಡೇಂಜರ್..!

Suvarna Focus: ಅಲ್ಲಿ ಎನ್ಕೌಂಟರ್.. ಇಲ್ಲಿ ಬುಲ್ಡೋಜರ್.. ಮಾಫಿಯಾ ಕ್ರಿಮಿಗಳಿಗೆ ಯೋಗಿಯೇ ಡೇಂಜರ್..!

Published : Mar 02, 2023, 03:47 PM IST

ಉತ್ತರ ಪ್ರದೇಶದಲ್ಲಿ  ಕ್ರಿಮಿನಲ್‌ಗಳಿಗೆ ಒಂದು ಕಡೆ ಎನ್‌ಕೌಂಟರ್‌ ಹಾಗೂ ಮತ್ತೊಂದೆಡೆ ಬುಲ್ಡೋಜರ್‌ ಶಾಕ್‌ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾ ಕ್ರಿಮಿಗಳನ್ನು ಬುಡಸಮೇತ ಕಿತ್ತುಹಾಕಲು ಮುಂದಾಗಿದ್ದಾರೆ.

ಬೆಂಗಳೂರು (ಮಾ.02): ದೇಶದ ಅತಿದೊಡ್ಡ ರಾಜ್ಯವಾಘಗಿರುವ ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಬಾಬಾ ಘರ್ಜನೆ ಶುರುವಾಗಿದೆ. ಕ್ರಿಮಿನಲ್‌ಗಳು ಹಾಗೂ ಗ್ಯಾಂಗ್‌ಸ್ಟರ್‌ಗಳ ಮನೆಗಳನ್ನು ಬುಲ್ಡೋಜರ್ನಿಂದ ಒಡೆಸಿ ಪುಡಿ ಪುಡಿ ಮಾಡಲಾಗುತ್ತಿದೆ. ಕ್ರಿಮಿನಲ್‌ಗಳಿಗೆ ಒಂದು ಕಡೆ ಎನ್‌ಕೌಂಟರ್‌ ಹಾಗೂ ಮತ್ತೊಂದೆಡೆ ಬುಲ್ಡೋಜರ್‌ ಶಾಕ್‌ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾ ಕ್ರಿಮಿಗಳನ್ನು ಬುಡಸಮೇತ ಕಿತ್ತುಹಾಕಲು ಮುಂದಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಘರ್ಜಿಸುತ್ತಿವೆ. ಗುಂಡಿನ ಸದ್ದು ಕಿವಿಗೆ ಅಪ್ಪಳಿಸುತ್ತಿವೆ. ಇಡೀ ರಾಜ್ಯದಲ್ಲಿ ಇರುವ ಕ್ರೈಂ ಮತ್ತು ರೌಡಿಸಂ ಮಾಫಿಯಾವನ್ನು ಮಣ್ಣು ಮಾಡ್ತೀನಿ ಅಂತ  ಮಹಾಶಪಥ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ. ಯಾವ ಜಾಗದಲ್ಲಿ ಉಮೇಶ್ ಪಾಲ್  ಹತ್ಯೆ ನಡೆದಿದೆಯೋ ಆ ಜಾಗದಿಂದ ಜಸ್ಟ್ 400 ಮೀಟರ್ ದೂರದಲ್ಲೇ, 18 ವರ್ಷಗಳ ಹಿಂದೆ, ರಾಜ್ ಪಾಲ್ ಮರ್ಡರ್ ಆಗಿತ್ತು. ಹಾಗಾದರೆ, 2005ರ  ಜನವರಿ 20ರಂದು ನಡೆದ ಬಹುಜನ ಸಮಾಜ ಪಕ್ಷ ಶಾಸಕ ರಾಜ್ ಪಾಲ್‌ ಅವರ ದಾರುಣ ಹತ್ಯೆ ನಡೆದಿತ್ತು.

ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!

ಯೋಗಿ ಆದಿತ್ಯನಾಥ್ ಗುಡುಗಿಗೆ, ಉತ್ತರ ಪ್ರದೇಶದ ಪುಢಾರಿಗಳು, ರೌಡಿಗಳು, ರಕ್ತಪಿಪಾಸುಗಳು ಕಂಗೆಟ್ಟು ಕೂತಿದ್ದಾರೆ. ಯೋಗಿಯಿಂದ ಕಾಪಾಡೋರು ಯಾರಿದ್ದಾರೆ ಅನ್ನೋ ಪ್ರಶ್ನೆಯ ಹುಡುಕಾಟದಲ್ಲಿ ಅವರೆಲ್ಲಾ ಬ್ಯುಸಿಯಾಗಿದಾರೆ. ಸಿಎಂ ಯೋಗಿ ಆದಿತ್ಯನಾಥ ಒಮ್ಮೆ ಶಪಥ ಮಾಡಿದರೆ ರೌಡಿಗಳು, ಗ್ಯಾಂಗ್ ಸ್ಟರ್‌ಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ. ಈಗ ಮಾಫಿಯಾನಾ ಮಟ್ಟ ಹಾಕೋಕೆ ದಿಟ್ಟ ಹೆಜ್ಜೆ ಇಟ್ಟಿರುವ ಯೋಗಿ, ಹಂತಕರಿಗೆ ಎನ್ಕೌಂಟರ್ ಮೂಲಕ ನಡುಕ ಹುಟ್ಟಿಸಿದ್ದಾರೆ. ಮಾಫಿಯಾಗಳ ವಿರುದ್ಧ ಕ್ರಮಕೈಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ. ಇದೇ ವೇಳೆ ಎನ್‌ಕೌಂಟರ್ ಭೀತಿಗೆ ಯುಪಿ ಗ್ಯಾಂಗ್‌ ಸ್ಟರ್ ನ್ಯಾಯಾಲಯ ಮೊರೆ ಹೋಗಿದ್ದಾನೆ. 

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more