ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

Published : Jul 23, 2023, 12:47 PM ISTUpdated : Jul 23, 2023, 12:58 PM IST

ನರರಕ್ಕಸರ ಅಟ್ಟಹಾಸಕ್ಕೆ ಶಾಪ ಹಾಕಿತ್ತು ದೇಶ..!
ಮತ್ತೊಂದು ಕಡೆಯೂ ನಡೆದಿದೆ ಅಂಥದ್ದೇ ಅನಾಚಾರ!
ದೀದಿ ನಾಡಲ್ಲಿ ಮಹಿಳೆಯರ ಪಾಡು ಏನಾಗಿದೆ ಗೊತ್ತಾ..?
 

ಬರೀ ಮಣಿಪುರ ಮಾತ್ರವೇ ಅಲ್ಲ, ಪಶ್ಚಿಮ ಬಂಗಾಳದಲ್ಲೂ(West Bengal) ಕೂಡ ಮಹಿಳೆಯರ ಮೇಲೆ ಪೈಶಾಚಿಕ ದೌರ್ಜನ್ಯ ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ರಾಜಸ್ಥಾನದಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮೊದಲು ರಕ್ಷಣೆ ಕೊಡೋ ಕೆಲಸವಾಗ್ಲಿ ಅಂದಿದ್ದಕ್ಕೆ, ಆ ಮಂತ್ರಿನೇ ವಜಾ ಮಾಡಿದಾರೆ. ಹೀಗೆ ದೇಶದ ಉದ್ದಗಲಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಲೇ ಇದೆ. ಮಣಿಪುರದಲ್ಲಿ(Manipura) ನಡೆದ ದೌರ್ಜನ್ಯ ಇಡೀ ದೇಶವೇ ತಲೆತಗ್ಗಿಸೊ ಹಾಗೆ ಮಾಡಿತ್ತು. ಭಾರತದ ಮೂಲೆ ಮೂಲೆಯ ಜನರೂ ಕೂಡ, ಈ ಅನ್ಯಾಯವನ್ನ ಸಹಿಸಲಾಗದೆ ಆಕ್ರೋಶ ವ್ಯಕ್ತಪಡಿಸಿದ್ರು. ಆ ದುಷ್ಕೃತ್ಯ ಎಸಗಿದ ರಕ್ಕಸರು ಅರೆಸ್ಟ್ ಆಗಿದ್ದಾರೆ, ಅವರಿಗೆ ಶಿಕ್ಷೆಯಾಗಲಿದೆ ಅನ್ನೋ ಸುದ್ದಿ ಕೇಳಿ, ಸಂಭ್ರಮಿಸಿದ್ರು. ಅದರಲ್ಲೂ ಮಣಿಪುರದ ಮಹಿಳೆಯರಂತೂ ಆ ನರರಾಕ್ಷಸನ ಮನೆಯನ್ನೇ ಧ್ವಂಸ ಮಾಡಿ ಸಂಭ್ರಮಿಸಿದ್ರು. ಇನ್ನೂ ಕೆಲವೇ ದಿನಗಳ ಹಿಂದೆ, ಮಮತಾ ಬ್ಯಾನರ್ಜಿಯ(Mamata Banerjee) ಪಶ್ಚಿಮ ಬಂಗಾಳ ದೊಡ್ಡ ಸದ್ದು ಮಾಡಿತ್ತು. ಇಡೀ ದೇಶವೇ ಕಣ್ಣು ಬಾಯಿ ಬಿಟ್ಕೊಂಡು, ಆ ರಾಜ್ಯದ ಕಡೆ ನೋಡ್ತಿತ್ತು. ಅದರಕ್ಕೆ ಕಾರಣವಾಗಿದ್ದು, ಪಂಚಾಯತಿ ಎಲೆಕ್ಷನ್ ವೇಳೆ ನಡೆದಿದ್ದ ಘನಘೋರ ಅವಾಂತರ. ಜುಲೈ 19ರಂದು, ಪಶ್ಷಿಮ ಬಂಗಾಳದ ಮಾಲ್ಡಾ ಬಳಿಯ, ಪಕುವಾಹಾತ್ ಗ್ರಾಮದಲ್ಲಿ ನೂರಾರು ಮಂದಿ ಸೇರಿ ಮಹಿಳೆಗೆ(woman) ಥಳಿಸಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಹೆಂಡತಿ ನೋಡಲು ಹೋದವನು ಸತ್ತುಹೋದ: ಗಂಡನನ್ನೇ ಕೊಂದು ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಪತ್ನಿ..!

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!