ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

Published : Jul 23, 2023, 12:47 PM ISTUpdated : Jul 23, 2023, 12:58 PM IST

ನರರಕ್ಕಸರ ಅಟ್ಟಹಾಸಕ್ಕೆ ಶಾಪ ಹಾಕಿತ್ತು ದೇಶ..!
ಮತ್ತೊಂದು ಕಡೆಯೂ ನಡೆದಿದೆ ಅಂಥದ್ದೇ ಅನಾಚಾರ!
ದೀದಿ ನಾಡಲ್ಲಿ ಮಹಿಳೆಯರ ಪಾಡು ಏನಾಗಿದೆ ಗೊತ್ತಾ..?
 

ಬರೀ ಮಣಿಪುರ ಮಾತ್ರವೇ ಅಲ್ಲ, ಪಶ್ಚಿಮ ಬಂಗಾಳದಲ್ಲೂ(West Bengal) ಕೂಡ ಮಹಿಳೆಯರ ಮೇಲೆ ಪೈಶಾಚಿಕ ದೌರ್ಜನ್ಯ ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ರಾಜಸ್ಥಾನದಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮೊದಲು ರಕ್ಷಣೆ ಕೊಡೋ ಕೆಲಸವಾಗ್ಲಿ ಅಂದಿದ್ದಕ್ಕೆ, ಆ ಮಂತ್ರಿನೇ ವಜಾ ಮಾಡಿದಾರೆ. ಹೀಗೆ ದೇಶದ ಉದ್ದಗಲಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಲೇ ಇದೆ. ಮಣಿಪುರದಲ್ಲಿ(Manipura) ನಡೆದ ದೌರ್ಜನ್ಯ ಇಡೀ ದೇಶವೇ ತಲೆತಗ್ಗಿಸೊ ಹಾಗೆ ಮಾಡಿತ್ತು. ಭಾರತದ ಮೂಲೆ ಮೂಲೆಯ ಜನರೂ ಕೂಡ, ಈ ಅನ್ಯಾಯವನ್ನ ಸಹಿಸಲಾಗದೆ ಆಕ್ರೋಶ ವ್ಯಕ್ತಪಡಿಸಿದ್ರು. ಆ ದುಷ್ಕೃತ್ಯ ಎಸಗಿದ ರಕ್ಕಸರು ಅರೆಸ್ಟ್ ಆಗಿದ್ದಾರೆ, ಅವರಿಗೆ ಶಿಕ್ಷೆಯಾಗಲಿದೆ ಅನ್ನೋ ಸುದ್ದಿ ಕೇಳಿ, ಸಂಭ್ರಮಿಸಿದ್ರು. ಅದರಲ್ಲೂ ಮಣಿಪುರದ ಮಹಿಳೆಯರಂತೂ ಆ ನರರಾಕ್ಷಸನ ಮನೆಯನ್ನೇ ಧ್ವಂಸ ಮಾಡಿ ಸಂಭ್ರಮಿಸಿದ್ರು. ಇನ್ನೂ ಕೆಲವೇ ದಿನಗಳ ಹಿಂದೆ, ಮಮತಾ ಬ್ಯಾನರ್ಜಿಯ(Mamata Banerjee) ಪಶ್ಚಿಮ ಬಂಗಾಳ ದೊಡ್ಡ ಸದ್ದು ಮಾಡಿತ್ತು. ಇಡೀ ದೇಶವೇ ಕಣ್ಣು ಬಾಯಿ ಬಿಟ್ಕೊಂಡು, ಆ ರಾಜ್ಯದ ಕಡೆ ನೋಡ್ತಿತ್ತು. ಅದರಕ್ಕೆ ಕಾರಣವಾಗಿದ್ದು, ಪಂಚಾಯತಿ ಎಲೆಕ್ಷನ್ ವೇಳೆ ನಡೆದಿದ್ದ ಘನಘೋರ ಅವಾಂತರ. ಜುಲೈ 19ರಂದು, ಪಶ್ಷಿಮ ಬಂಗಾಳದ ಮಾಲ್ಡಾ ಬಳಿಯ, ಪಕುವಾಹಾತ್ ಗ್ರಾಮದಲ್ಲಿ ನೂರಾರು ಮಂದಿ ಸೇರಿ ಮಹಿಳೆಗೆ(woman) ಥಳಿಸಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಹೆಂಡತಿ ನೋಡಲು ಹೋದವನು ಸತ್ತುಹೋದ: ಗಂಡನನ್ನೇ ಕೊಂದು ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಪತ್ನಿ..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!