ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

Published : Jul 23, 2023, 12:47 PM ISTUpdated : Jul 23, 2023, 12:58 PM IST

ನರರಕ್ಕಸರ ಅಟ್ಟಹಾಸಕ್ಕೆ ಶಾಪ ಹಾಕಿತ್ತು ದೇಶ..!
ಮತ್ತೊಂದು ಕಡೆಯೂ ನಡೆದಿದೆ ಅಂಥದ್ದೇ ಅನಾಚಾರ!
ದೀದಿ ನಾಡಲ್ಲಿ ಮಹಿಳೆಯರ ಪಾಡು ಏನಾಗಿದೆ ಗೊತ್ತಾ..?
 

ಬರೀ ಮಣಿಪುರ ಮಾತ್ರವೇ ಅಲ್ಲ, ಪಶ್ಚಿಮ ಬಂಗಾಳದಲ್ಲೂ(West Bengal) ಕೂಡ ಮಹಿಳೆಯರ ಮೇಲೆ ಪೈಶಾಚಿಕ ದೌರ್ಜನ್ಯ ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ರಾಜಸ್ಥಾನದಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮೊದಲು ರಕ್ಷಣೆ ಕೊಡೋ ಕೆಲಸವಾಗ್ಲಿ ಅಂದಿದ್ದಕ್ಕೆ, ಆ ಮಂತ್ರಿನೇ ವಜಾ ಮಾಡಿದಾರೆ. ಹೀಗೆ ದೇಶದ ಉದ್ದಗಲಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಲೇ ಇದೆ. ಮಣಿಪುರದಲ್ಲಿ(Manipura) ನಡೆದ ದೌರ್ಜನ್ಯ ಇಡೀ ದೇಶವೇ ತಲೆತಗ್ಗಿಸೊ ಹಾಗೆ ಮಾಡಿತ್ತು. ಭಾರತದ ಮೂಲೆ ಮೂಲೆಯ ಜನರೂ ಕೂಡ, ಈ ಅನ್ಯಾಯವನ್ನ ಸಹಿಸಲಾಗದೆ ಆಕ್ರೋಶ ವ್ಯಕ್ತಪಡಿಸಿದ್ರು. ಆ ದುಷ್ಕೃತ್ಯ ಎಸಗಿದ ರಕ್ಕಸರು ಅರೆಸ್ಟ್ ಆಗಿದ್ದಾರೆ, ಅವರಿಗೆ ಶಿಕ್ಷೆಯಾಗಲಿದೆ ಅನ್ನೋ ಸುದ್ದಿ ಕೇಳಿ, ಸಂಭ್ರಮಿಸಿದ್ರು. ಅದರಲ್ಲೂ ಮಣಿಪುರದ ಮಹಿಳೆಯರಂತೂ ಆ ನರರಾಕ್ಷಸನ ಮನೆಯನ್ನೇ ಧ್ವಂಸ ಮಾಡಿ ಸಂಭ್ರಮಿಸಿದ್ರು. ಇನ್ನೂ ಕೆಲವೇ ದಿನಗಳ ಹಿಂದೆ, ಮಮತಾ ಬ್ಯಾನರ್ಜಿಯ(Mamata Banerjee) ಪಶ್ಚಿಮ ಬಂಗಾಳ ದೊಡ್ಡ ಸದ್ದು ಮಾಡಿತ್ತು. ಇಡೀ ದೇಶವೇ ಕಣ್ಣು ಬಾಯಿ ಬಿಟ್ಕೊಂಡು, ಆ ರಾಜ್ಯದ ಕಡೆ ನೋಡ್ತಿತ್ತು. ಅದರಕ್ಕೆ ಕಾರಣವಾಗಿದ್ದು, ಪಂಚಾಯತಿ ಎಲೆಕ್ಷನ್ ವೇಳೆ ನಡೆದಿದ್ದ ಘನಘೋರ ಅವಾಂತರ. ಜುಲೈ 19ರಂದು, ಪಶ್ಷಿಮ ಬಂಗಾಳದ ಮಾಲ್ಡಾ ಬಳಿಯ, ಪಕುವಾಹಾತ್ ಗ್ರಾಮದಲ್ಲಿ ನೂರಾರು ಮಂದಿ ಸೇರಿ ಮಹಿಳೆಗೆ(woman) ಥಳಿಸಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಹೆಂಡತಿ ನೋಡಲು ಹೋದವನು ಸತ್ತುಹೋದ: ಗಂಡನನ್ನೇ ಕೊಂದು ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಪತ್ನಿ..!

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?