Ayodhya Ram Mandir: ಸಂಕಲ್ಪ ಸಿದ್ಧಿಗೆ ಕಾರಣವಾಗಿತ್ತು ಅದೊಂದು ಸಂಗತಿ..! ಆ ಇಬ್ಬರು ನಾಯಕರಿಂದ ಬದಲಾಗಿದ್ದೇನೇನು..?

Ayodhya Ram Mandir: ಸಂಕಲ್ಪ ಸಿದ್ಧಿಗೆ ಕಾರಣವಾಗಿತ್ತು ಅದೊಂದು ಸಂಗತಿ..! ಆ ಇಬ್ಬರು ನಾಯಕರಿಂದ ಬದಲಾಗಿದ್ದೇನೇನು..?

Published : Jan 22, 2024, 01:04 PM IST

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಗದ್ದುಗೆ ಹಿಡಿದಿದ್ದಾಗಲೇ, ಉತ್ತರ ಪ್ರದೇಶದಲ್ಲಿ ಅಪ್ರತಿಮ ಜಾದೂ ಒಂದು ನಡೆದಿತ್ತು. ಕಮಲಪಡೆ ಅಭೂತಪೂರ್ವ ವಿಜಯ ಸಾಧಿಸಿ ಗದ್ದುಗೆ ಹಿಡಿದಿತ್ತು.

ಸರಿ ಸುಮಾರು 40 ವರ್ಷಗಳ ಕಾಲ  ಹೈಕೋರ್ಟ್ ಅಂಗಳದಲ್ಲಿ ರಾಮಮಂದಿರ(Ram Mandir) ವಿವಾದದ ವಿಚಾರಣೆ ನಡೆದಿತ್ತು. ಕಡೆಗೆ 2010ರ ಸೆಪ್ಟಂಬರ್ 30ರಂದು ಅಂತ್ಯಗೊಂಡಿತ್ತು. ಹೈಕೋರ್ಟ್(Highcourt) ತನ್ನ ತೀರ್ಪನ್ನೂ ಪ್ರಕಟಿಸಿತ್ತು. ಆ ತೀರ್ಪಿನ ಪ್ರಕಾರ, 2.77 ಎಕರೆಯ ವಿವಾದಿತ ಸ್ಥಳವನ್ನ 3 ಭಾಗವಾಗಿ ವಿಂಗಡಿಸಲಾಯ್ತು. ವಿವಾದಿತ ಸ್ಥಳಾನ ಮೂರು ಭಾಗ ಮಾಡಿದ ನ್ಯಾಯಾಲಯ, ಮೊದಲನೇ ಭಾಗವನ್ನ ರಾಮ ಜನ್ಮಭೂಮಿ(Rama Janmabhoomi) ನ್ಯಾಸ್ ಪ್ರತಿನಿಧಿಸ್ತಾ ಇದ್ದ ರಾಮಲಲ್ಲಾನಿಗೆ, ಅಂದ್ರೆ ಶ್ರೀರಾಮನಿಗೆ ವಿಗ್ರಹವಿದ್ದ ಜಾಗವನ್ನ ಹಂಚಿದ್ರು. ಎರಡನೇದಾಗಿ, ಸೀತಾ ರಸೋಯಿ ಮತ್ತು ರಾಮ್ ಚಬುತ್ರಾ ಸ್ಥಳವನ್ನ ನಿರ್ಮೋಹಿ ಅಖಾಡಕ್ಕೆ ನೀಡಿದ್ರು. ಉಳಿದಿದ್ದೆಲ್ಲಾ ಸುನ್ನಿ ವಕ್ಫ್ ಬೋರ್ಡ್ಗೆ ಅಂತ ತೀರ್ಮಾನ ಕೊಟ್ಟಿತ್ತು ಹೈಕೋರ್ಟ್. ಈ ಮೂಲಕ, ವಿವಾದಿತ ಸ್ಥಳ ರಾಮ ಜನ್ಮಭೂಮಿ ಅಂತ ಕೋರ್ಟ್ ತೀರ್ಮಾನಿಸಿತ್ತು. ಎಎಸ್ಐ ಕೊಟ್ಟಿದ್ದ ವರದಿಯನ್ನೇ ತನ್ನ ತೀರ್ಪಿಗೆ ಆಧಾರ ಅಂತ ತಿಳಿಸಿತ್ತು. 2011ರ ಮೇ 9ರಂದು ಅಲಹಾಬಾದ್(Allahabad High Court) ತೀರ್ಪನ್ನ ಸುಪ್ರೀಂ ಕೋರ್ಟ್ ತಡೆಹಿಡಿಯುತ್ತೆ. ಆದ್ರೆ ಅಲ್ಲಿಂದ ಮುಂದೆ ಮತ್ತೆ ವಿಚಾರಣೆ ಶುರುವಾಗೋದು, 8 ವರ್ಷಗಳ ನಂತರ. ಅಂದ್ರೆ 2019ರ ಸೆಪ್ಟಂಬರ್ನಿಂದ ಸುಪ್ರೀಂ ಅಂಗಳದಲ್ಲಿ ವಿವಾದಿತ ಸ್ಥಳದ ವಿಚಾರಣೆ ಆರಂಭವಾಗುತ್ತೆ.

ಇದನ್ನೂ ವೀಕ್ಷಿಸಿ:  Ayodhya: ಕಳೆದುಕೊಂಡಿದ್ದನ್ನು ನ್ಯಾಯಯುತವಾಗಿ ಪಡೆದುಕೊಳ್ಳುವುದೇ ರಾಮನ ಆದರ್ಶ: ಹರೀಶ್‌ ಕಶ್ಯಪ್‌

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more