Oct 7, 2019, 8:14 PM IST
ಪುಣೆ, ಮಹಾರಾಷ್ಟ್ರ (ಅ.07): ಪುಣೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ದುರ್ಬಲವಾಗಿದೆ. ಜಗತ್ತಿನ ಯಾವುದೇ ಕ್ಯಾಲ್ಶಿಯಂ ಇಂಜೆಕ್ಷನ್ ಕೊಟ್ರೂ ಪ್ರಯೋಜನ ಇಲ್ಲ. ಅದು ಅಧಪತನದತ್ತ ಸಾಗುತ್ತಿದೆ. ಅದನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಖುದ್ದು ಆ ಪಕ್ಷದವರೇ ಹೋರಾಡಲು ಸಿದ್ಧರಿಲ್ಲ, ಎಂದು ಕುಟುಕಿದರು.
ಮುಳುಗುತ್ತಿರುವ ಹಡಗಿನ ಕಪ್ತಾನ ಮೊದಲು ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಕಾಂಗ್ರೆಸ್ ನಾಯಕ ಚುನಾವಣೆ ಫಲಿತಾಂಶದ ಬಳಿಕ ಮುಳುಗುತ್ತಿರುವ ಹಡಗಿನಿಂದಿಳಿದು ಮೊದಲು ದಡ ಸೇರಿಕೊಂಡಿದ್ದಾರೆ, ಎಂದು ರಾಹುಲ್ ಗಾಂಧಿಗೆ ಲೇವಡಿ ಮಾಡಿದರು. ಈ ಹಿಂದೆಯೂ ಅವರು ಕಾಂಗ್ರೆಸ್ನ್ನು ಮುಳುಗುವ ಹಡಗಿಗೆ ಹೋಲಿಸಿದ್ದರು.