ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ

ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ

Published : Mar 19, 2023, 12:58 PM ISTUpdated : Mar 19, 2023, 01:02 PM IST

ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುಂದಾಗಿರುವ ಮುನಿರತ್ನ ಅವರನ್ನು ಆದಿಚುಂಚನಗಿರಿ ನಿರ್ಮಲಾನಂದರನಾಥ ಸ್ವಾಮೀಜಿಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಮಾ.19): ರಾಜ್ಯದಲ್ಲಿ ಟಿಪ್ಪುವನ್ನು ಕೊಂದಿದ್ದಾರೆಂಬ ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುನಿರತ್ನ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ನಿರ್ಮಲಾನಂದರನಾಥ ಸ್ವಾಮೀಜಿಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕಾಲ್ಪನಿಕ ಕಥೆಗಳನ್ನ ಯಾರು ಹುಟ್ಟು ಹಾಕೋದಕ್ಕೆ ಆಗಲ್ಲ. 1940-50 ನೇ ಇಸವಿಗೂ ಹಿಂದೆಯಿಂದಲೂ ಉರಿಗೌಡ್ರು, ನಂಜೇಗೌಡರ ಬಗ್ಗೆ ಲಾವಣಿ ಹಾಡುಗಳಿವೆ. ಲಾವಣಿ ಹಾಡುಗಳ ಆಧಾರದಲ್ಲಿ ಉರಿಗೌಡ ನಂಜೇಗೌಡರು ಇದದ್ದು ಸತ್ಯ. ಮೈಸೂರು ಸಂಸ್ಥಾನದ ಪರವಾಗಿ ಕೆಲಸ ಮಾಡಿದ್ದು ನಿಜ. ಅದಕ್ಕೆ ಬೇಕಾದ ಸಾಕ್ಷಿಗಳು ಸಾಕಷ್ಟಿವೆ. ಈ ಕುರಿತು ಅಶ್ವಥ್ ನಾರಾಯಣ ಅವರು ಸಂಶೋಧನೆ ಮಾಡ್ತಿದ್ದಾರೆ ಎಂದು ಹೇಳಿದರು. ಇನ್ನು ಸಿನಿಮಾ ಕುರಿತಂತೆ ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ

ಕುಮಾರಸ್ವಾಮಿಯಿಂದಲೇ ಸಿನಿಮಾ ಹುಟ್ಟಿಕೊಂಡಿದೆ: ಕುಮಾರಸ್ವಾಮಿಯ ಟೀಕೆ ಮಾಡುವಾಗ, ಮುನಿರತ್ನನಿಗೆ ಸಿನಿಮಾ ಮಾಡಲು ಅಶ್ವಥನಾರಯಣ್ ಮತ್ತು ಅಶೋಕ್ ಸಿನಿಮಾ ಹೇಳಿದ್ದಾರೆ ಎಂದಾಗಲೇ ನನಗೆ ಸಿನಿಮಾ ಆಲೋಚನೆ ಬಂದಿದೆ. ಕುಮಾರಸ್ವಾಮಿ ಅವರಿಂದಲೇ ಈ ಸಿನಿಮಾ ಹುಟ್ಟಿಕೊಂಡಿದೆ. ರಾಜಕಾರಣಿಯಾಗಿ ಸಿನಿಮಾ ಮಾಡ್ತೀನಿ ಅಂದ್ರೆ ದುಡ್ಡಿಗೋ, ಓಟಿಗೋ ಎನ್ನಬಹುದು. ನಾನು 25 ವರ್ಷದಿಂದ ಸಿನಿಮಾ ಮಾಡ್ತಿದ್ದೇನೆ. ನನ್ನ ಕೊನೆ ಸಿನಿಮಾ ಕುರುಕ್ಷೇತ್ರ, ಈ ಸಿನಿಮಾ ಮಹಾಭಾರತಕ್ಕೆ ಸಂಭಂಧಪಟ್ಟಿದ್ದು ಆಗಿತ್ತು. ಇನ್ನು ನನ್ನ ಪೋಸ್ಟರ್‌ನಲ್ಲಿ ಉರಿಗೌಡ ಮತ್ತು ನಂಜೇಗೌಡರ ಪೋಟೋಗಳು ಇವೆ. ಆದರೆ, ಅವುಗಳನ್ನು ಯಾರಿಗೂ ಹೋಲಿಕೆ ಮಾಡಬಾರುದು ಎಂದು ಮನವಿ ಮಾಡಿದರು. 

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more