ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ

ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ

Published : Mar 19, 2023, 12:58 PM ISTUpdated : Mar 19, 2023, 01:02 PM IST

ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುಂದಾಗಿರುವ ಮುನಿರತ್ನ ಅವರನ್ನು ಆದಿಚುಂಚನಗಿರಿ ನಿರ್ಮಲಾನಂದರನಾಥ ಸ್ವಾಮೀಜಿಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಮಾ.19): ರಾಜ್ಯದಲ್ಲಿ ಟಿಪ್ಪುವನ್ನು ಕೊಂದಿದ್ದಾರೆಂಬ ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುನಿರತ್ನ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ನಿರ್ಮಲಾನಂದರನಾಥ ಸ್ವಾಮೀಜಿಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕಾಲ್ಪನಿಕ ಕಥೆಗಳನ್ನ ಯಾರು ಹುಟ್ಟು ಹಾಕೋದಕ್ಕೆ ಆಗಲ್ಲ. 1940-50 ನೇ ಇಸವಿಗೂ ಹಿಂದೆಯಿಂದಲೂ ಉರಿಗೌಡ್ರು, ನಂಜೇಗೌಡರ ಬಗ್ಗೆ ಲಾವಣಿ ಹಾಡುಗಳಿವೆ. ಲಾವಣಿ ಹಾಡುಗಳ ಆಧಾರದಲ್ಲಿ ಉರಿಗೌಡ ನಂಜೇಗೌಡರು ಇದದ್ದು ಸತ್ಯ. ಮೈಸೂರು ಸಂಸ್ಥಾನದ ಪರವಾಗಿ ಕೆಲಸ ಮಾಡಿದ್ದು ನಿಜ. ಅದಕ್ಕೆ ಬೇಕಾದ ಸಾಕ್ಷಿಗಳು ಸಾಕಷ್ಟಿವೆ. ಈ ಕುರಿತು ಅಶ್ವಥ್ ನಾರಾಯಣ ಅವರು ಸಂಶೋಧನೆ ಮಾಡ್ತಿದ್ದಾರೆ ಎಂದು ಹೇಳಿದರು. ಇನ್ನು ಸಿನಿಮಾ ಕುರಿತಂತೆ ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ

ಕುಮಾರಸ್ವಾಮಿಯಿಂದಲೇ ಸಿನಿಮಾ ಹುಟ್ಟಿಕೊಂಡಿದೆ: ಕುಮಾರಸ್ವಾಮಿಯ ಟೀಕೆ ಮಾಡುವಾಗ, ಮುನಿರತ್ನನಿಗೆ ಸಿನಿಮಾ ಮಾಡಲು ಅಶ್ವಥನಾರಯಣ್ ಮತ್ತು ಅಶೋಕ್ ಸಿನಿಮಾ ಹೇಳಿದ್ದಾರೆ ಎಂದಾಗಲೇ ನನಗೆ ಸಿನಿಮಾ ಆಲೋಚನೆ ಬಂದಿದೆ. ಕುಮಾರಸ್ವಾಮಿ ಅವರಿಂದಲೇ ಈ ಸಿನಿಮಾ ಹುಟ್ಟಿಕೊಂಡಿದೆ. ರಾಜಕಾರಣಿಯಾಗಿ ಸಿನಿಮಾ ಮಾಡ್ತೀನಿ ಅಂದ್ರೆ ದುಡ್ಡಿಗೋ, ಓಟಿಗೋ ಎನ್ನಬಹುದು. ನಾನು 25 ವರ್ಷದಿಂದ ಸಿನಿಮಾ ಮಾಡ್ತಿದ್ದೇನೆ. ನನ್ನ ಕೊನೆ ಸಿನಿಮಾ ಕುರುಕ್ಷೇತ್ರ, ಈ ಸಿನಿಮಾ ಮಹಾಭಾರತಕ್ಕೆ ಸಂಭಂಧಪಟ್ಟಿದ್ದು ಆಗಿತ್ತು. ಇನ್ನು ನನ್ನ ಪೋಸ್ಟರ್‌ನಲ್ಲಿ ಉರಿಗೌಡ ಮತ್ತು ನಂಜೇಗೌಡರ ಪೋಟೋಗಳು ಇವೆ. ಆದರೆ, ಅವುಗಳನ್ನು ಯಾರಿಗೂ ಹೋಲಿಕೆ ಮಾಡಬಾರುದು ಎಂದು ಮನವಿ ಮಾಡಿದರು. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more