ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

Published : Aug 14, 2023, 11:21 PM IST

ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. 

ಬೆಂಗಳೂರು (ಆ.14): ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. ಭಾವಪೂರ್ಣವಾಗಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಖ್ಯಾತ ನಟ ರಮೇಶ್‌ ಅರವಿಂದ್‌ ಅವರು ಅನಂತ್‌ನಾಗ್‌ ಅವರ ಸಂದರ್ಶನ ನಡೆಸಿದರು. ವಿಭಿನ್ನ ಪ್ರಶ್ನೆಗಳ ಮೂಲಕ ಅನಂತ್‌ನಾಗ್‌ರ ಆಂತರ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. 

ಅನಂತ್‌ನಾಗ್‌ರನ್ನು ಹಾಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟಮೆರುಗನ್ನು ತಂದುಕೊಟ್ಟರು. ಸಂದರ್ಶನದಲ್ಲಿ ಮಾತನಾಡುತ್ತಾ ಅನಂತ್‌ನಾಗ್‌, ಅಧ್ಯಾತ್ಮಿಕ ವಾತಾವರಣದಲ್ಲಿ ಬಾಲ್ಯವನ್ನು ಕಳೆದೆ. ಅಲ್ಲಿಯೇ ಅಪರೂಪದ ವ್ಯಕ್ತಿಗಳನ್ನು ಇಮಿಟೇಟ್‌ ಮಾಡುತ್ತಿದ್ದೆ, ಅವರ ಮಿಮಿಕ್ರಿ ಮಾಡುತ್ತಿದ್ದೆ. ಮುಂದೆ ಮುಂಬೈಯಲ್ಲಿ ನಿಜ ಜೀವನಕ್ಕೆ ಎದುರುಗೊಂಡೆ. ಕಾಲೇಜಿನಲ್ಲಿ ಸರಿಯಾಗಿ ಓದದೆ ಟೀಕೆಗೆ ಒಳಗಾದೆ. ಆಗ ನನಗೆ ನಾಟಕಗಳು, ಪಾತ್ರಗಳು ಆನಂದಕೊಟ್ಟವು. ಅಲ್ಲಿಂದ ಇಲ್ಲಿಯವರೆಗೆ 50 ವರ್ಷ ಸಂದಿದೆ. ನಾನು ಎಲ್ಲವನ್ನೂ ಮಾಡಿದೆ ಎಂದರೆ ಅಹಂಕಾರ ಆಗುತ್ತದೆ. 

ಯಾವುದೇ ಒಂದು ಶಕ್ತಿ ನನ್ನಿಂದ ಇದನ್ನೆಲ್ಲಾ ಮಾಡಿಸಿತು ಎಂದು ಹೇಳುವುದೇ ಸರಿ. ನನ್ನ ಈ ಪ್ರಯಾಣದಲ್ಲಿ ಚಿತ್ರರಂಗದ ಮಂದಿ ಮತ್ತು ಪತ್ರಕರ್ತರೇ ನನ್ನ ಸ್ನೇಹಿತರು, ಸರಿದಾರಿ ತೋರಿ ಮುನ್ನಡೆಸಿದವರು ಎಂದರು. ರಾಘವೇಂದ್ರ ಚಿತ್ರವಾಣಿಯ ಕುರಿತು ಮಾತನಾಡಿದ ಅವರು, ನನ್ನ ಮತ್ತು ರಾಘವೇಂದ್ರ ಚಿತ್ರವಾಣಿ ಸಂಬಂಧ ಸುದೀರ್ಘವಾದದ್ದು. ಡಿವಿ ಸುಧೀಂದ್ರ ನನ್ನ ಈ ಪ್ರಯಾಣದ ಆರಂಭ ಕಾಲದಲ್ಲಿ ಇದ್ದರು. ಅವರ ನಿರ್ಮಾಣದ ಸಿನಿಮಾದಲ್ಲಿಯೂ ನಟಿಸಿದ್ದೇನೆ ಎಂದು ಹೇಳಿದರು. ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌, ಸುನಿಲ್‌ ಸುಧೀಂದ್ರ, ಡಿ.ಜಿ. ವಾಸುದೇವ ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more