'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

Published : Jan 04, 2023, 11:35 AM IST

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ.

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬೆಳ್ಳಿತೆರೆ ಮೇಲೆ ವೇದನ ಸಕ್ಸಸ್ಫುಲ್ ಜರ್ನಿಯನ್ನ ಕಂಟಿನ್ಯೂ ಮಾಡಿದ್ದಾರೆ. ವೇದನ ಎಮೋಷನಲ್ ಅಬ್ಬರಕ್ಕೆ ಪ್ರೇಕ್ಷಕ ಗಣ ಮನಸೋ ಇಚ್ಚೆ ಮನಸೋತು ಚಿತ್ರಮಂದಿರಗಳು ಹೌಸ್ ಫುಲ್ ಆಗುವಂತೆ ಮಾಡುತ್ತಿದ್ದಾರೆ. 

ಈ ಸಕ್ಸಸ್ ಈಗ ಶಿವಣ್ಣ ಮತ್ತು ಹರ್ಷನ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮಾಡೋಕೆ ಹರದಾರಿ ಮಾಡಿಕೊಟ್ಟಿದೆ. ನಿರ್ದೇಶಕ ಎ.ಹರ್ಷ ಸಿನಿಮಾ ಮೇಕಿಂಗ್ ಸ್ಟೈಲ್ ಶಿವಣ್ಣನ್ನ ಭಜರಂಗಿ ಸಿನಿಮಾದಲ್ಲೇ ಇಂಪ್ರೆಸ್ ಮಾಡಿತ್ತು. ಹರ್ಷನ ಡೈರೆಕ್ಷನ್ ಆಫ್ ಸ್ಟೈಲ್ಅನ್ನ ಕೊಂಡಾಡಿದ್ದ ಸೆಂಚುರಿ ಸ್ಟಾರ್ ವಜ್ರಕಾಯ ಸಿನಿಮಾದಲ್ಲಿ ಮತ್ತೆ ನಿರ್ದೇಶನಕ್ಕೆ ಅವಕಾಶ ಕೊಟ್ರು. ಆದ್ರೆ ವಜ್ರಕಾಯ ಹೇಳಿಕೊಳ್ಳುವಷ್ಟು ಗೆಲುವು ತಂದುಕೊಡ್ಲಿಲ್ಲ. ಆದರೆ ಹರ್ಷ ಶಿವಣ್ಣನ ಜೊತೆ ಭಜರಂಗಿ-2 ಮಾಡಿ ಮತ್ತೆ ಟ್ರ್ಯಾಕ್‌ಗೆ ಮರಳಿದ್ರು. ಅಷ್ಟರಲ್ಲೇ ಅಪ್ಪು ನಿಧನ ಹೊಂದಿದ್ದು ಭಜರಂಗಿ-2 ಸಿನಿಮಾ ಕಣ್ಮರೆಯಾಗುವಂತೆ ಆಯ್ತು. 

ಒಂದು ಕಡೆ ಅಪ್ಪು ಇಲ್ಲವಾದ ಮೇಲೆ ಶಿವಣ್ಣ ಅಪ್ಪು ಅನುಪಸ್ಥಿತಿಯಲ್ಲೇ ತಮ್ಮ ಕುಟುಂಬದ ಗೀತಾ ಪಿಕ್ಚರ್ಸ್ ಬ್ಯಾನರ್ ಶುರುಮಾಡಿದ್ರು. ಆ ಬ್ಯಾನರ್‌ನ ಮೊದಲ ಸಿನಿಮಾ ಯಾರು ಡೈರೆಕ್ಷನ್ ಮಾಡೋದು ಅಂತ ಹುಡುಕುವಾಗ್ಲೆ ಶಿವಣ್ಣನಿಗಾಗಿ ನಿರ್ದೇಶಕ ವೇದ ಅನ್ನೋ ಅದ್ಧೂರಿ ಎಮೋಷಲ್ ಸ್ಟೋರಿಯನ್ನ ರೆಡಿ ಮಾಡಿದ್ರು. ಕೊನೆಗೆ ಇದೇ ಬೆಸ್ಟ್ ಅಂತ ಶಿವಣ್ಣ ವೇದ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಗೆಲುವು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್‌ಗೆ ಖುಷಿ ಕೊಟ್ಟಿದ್ದು ಈಗ ಮತ್ತೆ ಅದೇ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಎ. ಹರ್ಷ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡೋ ಬಗ್ಗೆ ಮಾತುಕತೆ ನಡೆದಿದೆ. ಅಲ್ಲಿ ಆ ಸಿನಿಮಾ ಏನಾದ್ರು ಶುರುವಾದ್ರೆ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಎ. ಹರ್ಷ ಐದನೇ ಬಾರಿ ಒಂದಾದ ಹಾಗಾಗುತ್ತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
Read more