'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

Published : Jan 04, 2023, 11:35 AM IST

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ.

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬೆಳ್ಳಿತೆರೆ ಮೇಲೆ ವೇದನ ಸಕ್ಸಸ್ಫುಲ್ ಜರ್ನಿಯನ್ನ ಕಂಟಿನ್ಯೂ ಮಾಡಿದ್ದಾರೆ. ವೇದನ ಎಮೋಷನಲ್ ಅಬ್ಬರಕ್ಕೆ ಪ್ರೇಕ್ಷಕ ಗಣ ಮನಸೋ ಇಚ್ಚೆ ಮನಸೋತು ಚಿತ್ರಮಂದಿರಗಳು ಹೌಸ್ ಫುಲ್ ಆಗುವಂತೆ ಮಾಡುತ್ತಿದ್ದಾರೆ. 

ಈ ಸಕ್ಸಸ್ ಈಗ ಶಿವಣ್ಣ ಮತ್ತು ಹರ್ಷನ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮಾಡೋಕೆ ಹರದಾರಿ ಮಾಡಿಕೊಟ್ಟಿದೆ. ನಿರ್ದೇಶಕ ಎ.ಹರ್ಷ ಸಿನಿಮಾ ಮೇಕಿಂಗ್ ಸ್ಟೈಲ್ ಶಿವಣ್ಣನ್ನ ಭಜರಂಗಿ ಸಿನಿಮಾದಲ್ಲೇ ಇಂಪ್ರೆಸ್ ಮಾಡಿತ್ತು. ಹರ್ಷನ ಡೈರೆಕ್ಷನ್ ಆಫ್ ಸ್ಟೈಲ್ಅನ್ನ ಕೊಂಡಾಡಿದ್ದ ಸೆಂಚುರಿ ಸ್ಟಾರ್ ವಜ್ರಕಾಯ ಸಿನಿಮಾದಲ್ಲಿ ಮತ್ತೆ ನಿರ್ದೇಶನಕ್ಕೆ ಅವಕಾಶ ಕೊಟ್ರು. ಆದ್ರೆ ವಜ್ರಕಾಯ ಹೇಳಿಕೊಳ್ಳುವಷ್ಟು ಗೆಲುವು ತಂದುಕೊಡ್ಲಿಲ್ಲ. ಆದರೆ ಹರ್ಷ ಶಿವಣ್ಣನ ಜೊತೆ ಭಜರಂಗಿ-2 ಮಾಡಿ ಮತ್ತೆ ಟ್ರ್ಯಾಕ್‌ಗೆ ಮರಳಿದ್ರು. ಅಷ್ಟರಲ್ಲೇ ಅಪ್ಪು ನಿಧನ ಹೊಂದಿದ್ದು ಭಜರಂಗಿ-2 ಸಿನಿಮಾ ಕಣ್ಮರೆಯಾಗುವಂತೆ ಆಯ್ತು. 

ಒಂದು ಕಡೆ ಅಪ್ಪು ಇಲ್ಲವಾದ ಮೇಲೆ ಶಿವಣ್ಣ ಅಪ್ಪು ಅನುಪಸ್ಥಿತಿಯಲ್ಲೇ ತಮ್ಮ ಕುಟುಂಬದ ಗೀತಾ ಪಿಕ್ಚರ್ಸ್ ಬ್ಯಾನರ್ ಶುರುಮಾಡಿದ್ರು. ಆ ಬ್ಯಾನರ್‌ನ ಮೊದಲ ಸಿನಿಮಾ ಯಾರು ಡೈರೆಕ್ಷನ್ ಮಾಡೋದು ಅಂತ ಹುಡುಕುವಾಗ್ಲೆ ಶಿವಣ್ಣನಿಗಾಗಿ ನಿರ್ದೇಶಕ ವೇದ ಅನ್ನೋ ಅದ್ಧೂರಿ ಎಮೋಷಲ್ ಸ್ಟೋರಿಯನ್ನ ರೆಡಿ ಮಾಡಿದ್ರು. ಕೊನೆಗೆ ಇದೇ ಬೆಸ್ಟ್ ಅಂತ ಶಿವಣ್ಣ ವೇದ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಗೆಲುವು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್‌ಗೆ ಖುಷಿ ಕೊಟ್ಟಿದ್ದು ಈಗ ಮತ್ತೆ ಅದೇ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಎ. ಹರ್ಷ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡೋ ಬಗ್ಗೆ ಮಾತುಕತೆ ನಡೆದಿದೆ. ಅಲ್ಲಿ ಆ ಸಿನಿಮಾ ಏನಾದ್ರು ಶುರುವಾದ್ರೆ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಎ. ಹರ್ಷ ಐದನೇ ಬಾರಿ ಒಂದಾದ ಹಾಗಾಗುತ್ತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
Read more