ರೌಡಿ ಜೊತೆ ರಚ್ಚು ಪೋಸ್, ಏನಿದು ಮ್ಯಾಟರ್ ಬುಲ್ ಬುಲ್ ? ಕೊಲೆ ಆರೋಪಿಯಿಂದ ಗಿಫ್ಟ್ ಪಡೆದ್ರಾ?

ರೌಡಿ ಜೊತೆ ರಚ್ಚು ಪೋಸ್, ಏನಿದು ಮ್ಯಾಟರ್ ಬುಲ್ ಬುಲ್ ? ಕೊಲೆ ಆರೋಪಿಯಿಂದ ಗಿಫ್ಟ್ ಪಡೆದ್ರಾ?

Published : Jul 23, 2025, 01:48 PM ISTUpdated : Jul 23, 2025, 02:32 PM IST

ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಒಂದೊಂದೇ ಹೊರ ಬರ್ತಾ ಇವೆ. ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಜೊತೆ ರಚಿತಾ ರಾಮ್ ಇರೋ ಫೋಟೊಗಳು ಪೊಲೀಸರ ಕೈ ಸೇರಿವೆ.

ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್ (Rachita Ram) ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚಿಗೆ ಕೊಲೆಯಾದ ರೌಡಿ ಬಿಕ್ಲು ಶಿವ  ಮರ್ಡರ್ ಕೇಸ್ ಆರೋಪಿ ಜೊತೆಗೆ ರಚಿತಾ ಇರುವ ಫೋಟೋಸ್ ವೈರಲ್ ಆಗಿವೆ. ಅಷ್ಟಕ್ಕೂ ರೌಡಿಗಳ ಜೊತೆಗೆ ಬುಲ್ ಬುಲ್​ಗೇನು ನಂಟು..? ಏನಿದು ರಚಿರಾ ರಗಳೆ.. ಇಲ್ಲಿದೆ ನೋಡಿ  ಆ ಕುರಿತ ಸ್ಟೋರಿ.

ಕೆಲ ದಿನಗಳ ಹಿಂದೆ ಸಂಜು ವೆಡ್ಸ್ ಗೀತಾ-2 ಟೀಂ ರಚಿತಾ ರಾಮ್ ಮೇಲೆ ಪ್ರಚಾರಕ್ಕೆ ಬರ್ತಿಲ್ಲ ಅನ್ನೋ ಆರೋಪ ಮಾಡಿದ್ರು. ಅದರ ಬೆನ್ನಲ್ಲೇ ನಿರ್ಮಾಪಕಿ ಒಬ್ರು ರಚಿತಾ ಹಣ ಪಡೆದು ಸಿನಿಮಾ ಮಾಡದೇ ಮೋಸ ಮಾಡಿದ್ದಾರೆ ಅಂತ ದೂರು ನೀಡಿದ್ರು. ಈಗ ನೋಡಿದ್ರೆ ರಚ್ಚು ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ  ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಒಂದೊಂದೇ ಹೊರ ಬರ್ತಾ ಇವೆ. ಈ  ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಜೊತೆ ರಚಿತಾ ರಾಮ್ ಇರೋ ಫೋಟೊಗಳು ಪೊಲೀಸರ ಕೈ ಸೇರಿವೆ.

ಹೌದು ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್‌ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ಕೊಟ್ಟಿರುವ ಫೋಟೋ ವೈರಲ್ಆಗಿವೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ವೇಳೆ ಜಗ್ಗ ನಟಿಗೆ ಈ ಉಡುಗೊರೆ ಕೊಟ್ಟಿದ್ದಾನೆ ಎನ್ನಲಾಗ್ತಾ ಇದೆ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್ಕೂಡ ಇರೋದನ್ನ ನೋಡಬಹುದು.

ಕೊಲೆ ಆರೋಪಿ ಜಗ್ಗ ಜಸ್ಟ್ ರಚಿತಾ ಜೊತೆ ಮಾತ್ರ ಅಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಜೊತೆ ಇರುವ ಫೋಟೋಸ್ ಕೂಡ  ಪೊಲೀಸರ ಕೈ ಸೇರಿವೆ. ಅಲ್ಲಿಗೆ ಈ ತಾರೆಯರಿಗೂ ಕೊಲೆ ಆರೋಪಿಗೂ ಇರುವ ನಂಟು ಏನು ಅನ್ನೋದನ್ನ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ರೌಡಿಸಂ ಹಿನ್ನೆಲೆಯುಳ್ಳ ಅನೇಕರು ಸಿನಿಮಾ ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಅನ್ನೋ ಮಾತುಗಳು ಬಹಳ ಹಿಂದಿನಿಂದಲೂ ಕೇಳಿ ಬರ್ತಾ ಇವೆ. ಸದ್ಯ ಕೊಲೆ ಆರೋಪಿಯೊಬ್ಬನ ಜೊತೆಗೆ ಸ್ಯಾಂಡಲ್​ವುಡ್​ ತಾರೆಯರು ಇರೋದನ್ನ ಕಂಡು ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಕೊಲೆ ಆರೋಪಿ ಜಗ್ಗನಿಗೂ ಈ ತಾರೆಯರಿಗೂ ನಂಟೇನು ಅನ್ನೋದು ತನಿಖೆಯಿಂದ ಬಯಲಾಗಲಿದೆ. ಆದ್ರೆ ಇಂಥವರ ಸಖ್ಯ ಬೆಳೆಸಿದ್ದು ಏಕೆ ಅನ್ನೋ ಫ್ಯಾನ್ಸ್ ಪ್ರಶ್ನೆಗೆ ಉತ್ತರವನ್ನ ಈ ತಾರೆಯರೇ ಕೊಡಬೇಕಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more