ಪಕ್ಕದ ಸೆಲ್​ನಲ್ಲಿರೋ ಪಾಕಿಸ್ತಾನಿ ಟೆರರಿಸ್ಟ್​ಗಳಿಗೆ ಕೊಡುವಷ್ಟು ಸೌಲಭ್ಯವೂ ದರ್ಶನ್​ಗೆ ಇಲ್ಲ: ಝೈದ್ ಖಾನ್!

ಪಕ್ಕದ ಸೆಲ್​ನಲ್ಲಿರೋ ಪಾಕಿಸ್ತಾನಿ ಟೆರರಿಸ್ಟ್​ಗಳಿಗೆ ಕೊಡುವಷ್ಟು ಸೌಲಭ್ಯವೂ ದರ್ಶನ್​ಗೆ ಇಲ್ಲ: ಝೈದ್ ಖಾನ್!

Published : Sep 20, 2025, 01:02 PM IST

ಸ್ಟಾರ್ ಆದ ಮೇಲೆ ಅನೇಕ ಯುವ ಕಲಾವಿದರನ್ನ ಬೆಂಬಲಿಸ್ತಾ ಬಂದಿದ್ರು. ಹಲವು ಹೊಸ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿ ದೊಡ್ಡ ಸಪೋರ್ಟ್ ನೀಡಿದ್ರು. ಹೊಸ ನಟರ ಟೀಸರ್, ಟ್ರೈಲರ್, ಆಡಿಯೋ ಲಾಂಚ್ ಇವೆಂಟ್​ಗಳಿಗೆ ಬಂದು ಬೆಂಬಲ ಕೊಡ್ತಾ ಇದ್ರು. ಅನೇಕ ಯುವನಟರಿಗೆ ದಾಸನ ಬೆಂಬಲ ದೊಡ್ಡ ಬಲ ತಂದುಕೊಡ್ತಾ ಇತ್ತು.

ಪರಪ್ಪನ ಅಗ್ರಹಾರದಲ್ಲಿ 'ದಾಸ'ನ ಪರದಾಟ ಮುಂದುವರೆದಿದೆ. ನಟ ದರ್ಶನ್​ (Darshan Thoogudeepa) ಜೈಲಿನಲ್ಲಿ ಪಡ್ತಾ ಇರೋ ಸಂಕಷ್ಟಗಳ ಕಥೆ ಕೇಳಿದ ಅವರ ಆಪ್ತರು ಹೇಗಿದ್ದ ದಾಸ ಹೇಗಾದ ಅಂತ ವ್ಯಥೆ ಪಡ್ತಾ ಇದ್ದಾರೆ. ದರ್ಶನ್ ಪ್ರತಿ ವರ್ಷ ತಪ್ಪದೇ ಇಫ್ತಾರ್ ಪಾರ್ಟಿಗೆ ಹೋಗ್ತಾ ಇದ್ದಿದ್ದು, ಶಾಸಕ ಜಮೀರ್ ಅಹಮದ್ ಮನೆಗೆ. ಅಂತಹಾ ಜಮೀರ್ ಪುತ್ರ ನಟ ಝೈದ್ ಖಾನ್ ದರ್ಶನ್ ಇಂದಿನ ಸ್ಥಿತಿ ಬಗ್ಗೆ ಹೇಳಿದ್ದೇನು..? ನೋಡೋಣ ಬನ್ನಿ.

ಮುಂದೂಡಿಕೆಯಾಯ್ತು ಕೇಸ್.. ದಾಸನಿಗಿಲ್ಲ ರಿಲೀಫ್..!
ಯೆಸ್  ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ದೋಷಾರೋಪಣೆ ನಿಗದಿ ಕುರಿತ ವಿಚಾರಣೆಯನ್ನ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ  ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ. ಶುಕ್ರವಾರ ಪವಿತ್ರಾ ಗೌಡ, ದರ್ಶನ್   ಮತ್ತಿತರ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪವಿತ್ರಾ ಗೌಡ ಪರ ವಕೀಲರು ತಮ್ಮ ಕಕ್ಷಿದಾರರ ಪರ ದೋಷಾರೋಪಣೆ ನಿಗದಿಗೆ ಮನವಿ ಸಲ್ಲಿಸಿದ್ರು. .ಆದರೆ ಆರೋಪಿಗಳಾದ ಕಾರ್ತಿಕ್ ಹಾಗೂ ಕೇಶವಮೂರ್ತಿ ಗೈರು ಹಾಜರಾಗಿದ್ದು ನ್ಯಾಯಾಲಯ ವಿಚಾರಣೆಯನ್ನ ಮುಂದೂಡಿತು.

ಇನ್ನೂ ಹಾಸಿಗೆ , ದಿಂಬಿನ ಬೇಡಿಕೆ ವಿಚಾರವಾಗಿ ಆದೇಶ ಹೊರಬಂದು ತನಗೆ ರಿಲೀಫ್ ಸಿಗುತ್ತೆ ಅಂದುಕೊಂಡಿದ್ದ ದರ್ಶನ್​ಗ ನಿರಾಸೆ ಆಗಿದೆ.  ಅಸಲಿಗೆ ಕೋರ್ಟ್​ನಿಂದ ಸೌಲತ್ತು ನೀಡುವಂತೆ ಆದೇಶ ಕೊಟ್ಟರೂ ಜೈಲು ಅಧಿಕಾರಿಗಳು ಸೌಲತ್ತು ಕೊಡ್ತಾ ಇಲ್ಲ ಅಂತ ದಾಸನ ಪರ ವಕೀಲರು ವಾದ ಮಂಡಿಸಿದ್ದಾರೆ. ಪಕ್ಕದ ಸೆಲ್​ನಲ್ಲಿರೋ ಪಾಕಿಸ್ತಾನಿ ಟೆರೆರಿಸ್ಟ್​ಗಳಿಗೆ ಕೊಡುವಷ್ಟು ಸೌಲಭ್ಯವೂ ದರ್ಶನ್​ಗೆ ಕೊಡ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಆದ್ರೆ ಇದಕ್ಕೆ ವಿವರಣೆ ಕೊಟ್ಟಿರೋ ಜೈಲು ಅಧಿಕಾರಿಗಳು ಜೈಲಿನ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ಒದಗಿಸಲಾಗ್ತಾ ಇದೆ  ಅಂತ ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ದಾಸನ ಪರದಾಟದ ಕಥೆ ಕೇಳಿ ಆಪ್ತರ ಬೇಸರ..!
ಹೌದು ದರ್ಶನ್ ಹೊರಗೆ ರಾಯಲ್ ಆಗಿ ಬದುಕ್ತಾ ಇದ್ದಿದ್ದನ್ನ ನೋಡಿದವರಿಗೆ ಈಗ ದರ್ಶನ್ ಇರೋ ಸ್ಥಿತಿಯನ್ನ ಒಪ್ಪಿಕೊಳ್ಳೋದು ಕಷ್ಟ. ದರ್ಶನ್ ಸಚಿವ ಜಮೀರ್ ಅಹ್ಮದ್ ಪಾಲಿಗೆ ಅದೆಷ್ಟು ಆಪ್ತರು ಅನ್ನೋದು ಗೊತ್ತೇ ಇದೆ. ಜಮೀರ್ ಮನೆಯಲ್ಲಿ ನಡೆವ ಇಫ್ತಾರ್ ಕೂಟಕ್ಕೆ ದರ್ಶನ್ ಪ್ರತಿವರ್ಷ ಮಿಸ್ ಇಲ್ಲದೇ ಹಾಜರಾಗ್ತಾ ಇದ್ರು.

ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ನಾಯಕನ ನಟನಾದಾಗ ಅದನ್ನ ನೋಡಿ, ದರ್ಶನ್ ಬೆನ್ನು ತಟ್ಟಿದ್ರು. ಜೈದ್ ಸಪೋರ್ಟ್​ಗೆ ನಿಂತುಕೊಂಡಿದ್ರು. ಈಗ ಝೈದ್ ನಟನೆಯ ಕಲ್ಟ್ ಸಿನಿಮಾ ರಿಲೀಸ್​ಗೆ ಸಜ್ಜಾಗ್ತಾ ಇದೆ. ಆದ್ರೆ ಈಗ ಝೈದ್ ಗೆ ಸಪೋರ್ಟ್ ಮಾಡೋ ಸ್ಥಿತಿಯಲ್ಲಿ ದರ್ಶನ್ ಇಲ್ಲ. ಖುದ್ದು ತನ್ನದೇ ದಿ ಡೆವಿಲ್ ಸಿನಿಮಾದ ಪ್ರಚಾರಕ್ಕೂ ದರ್ಶನ್​ಗೆ ಬರಲಾಗ್ತಾ ಇಲ್ಲ.

ದರ್ಶನ್, ಸ್ಟಾರ್ ಆದ ಮೇಲೆ ಅನೇಕ ಯುವ ಕಲಾವಿದರನ್ನ ಬೆಂಬಲಿಸ್ತಾ ಬಂದಿದ್ರು. ಹಲವು ಹೊಸ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿ ದೊಡ್ಡ ಸಪೋರ್ಟ್ ನೀಡಿದ್ರು. ಹೊಸ ನಟರ ಟೀಸರ್, ಟ್ರೈಲರ್, ಆಡಿಯೋ ಲಾಂಚ್ ಇವೆಂಟ್​ಗಳಿಗೆ ಬಂದು ಬೆಂಬಲ ಕೊಡ್ತಾ ಇದ್ರು. ಅನೇಕ ಯುವನಟರಿಗೆ ದಾಸನ ಬೆಂಬಲ ದೊಡ್ಡ ಬಲ ತಂದುಕೊಡ್ತಾ ಇತ್ತು.

ಅಂತೆಯೇ ದರ್ಶನ್​ರಿಂದ ಇಂಥಾ ಸಹಾಯ ಪಡೆದವರು ಇವತ್ತು ದಾಸನ ಪರಿಸ್ಥಿತಿ ಕಂಡು ಬೇಸರ ಪಡ್ತಾ ಇದ್ದಾರೆ. ಚಕ್ರವರ್ತಿಯಂತೆ ಮೆರೀತಿದ್ದ ದರ್ಶನ್  ಜೈಲಿನಲ್ಲಿ ದಿಂಬು, ಹಾಸಿಗೆಗೆ ಪರದಾಡ್ತಾ ಇರೋದು  ಸಹಜವಾಗೇ ಅವರ ಆಪ್ತರಿಗೆಲ್ಲಾ ನೋವು ತಂದಿದೆ.

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
Read more