ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ!

ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ!

Published : Jun 23, 2025, 02:24 PM IST

ದರ್ಶನ್ ಫ್ಯಾನ್ಸ್ ಇಲ್ಲಿಗೆ ಹೋಗಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿ ಪಡ್ತಾರೆ. ಈ ರೆಸ್ಟೋರೆಂಟ್​​ನ ಖುದ್ದು ದರ್ಶನ್ ಉದ್ಘಾಟನೆ ಮಾಡಿದ್ರು. ಹಲವು ಸಾರಿ ದರ್ಶನ್ ಕೂಡ ಇಲ್ಲಿಗೆ ಭೇಟಿ ಕೊಡ್ತಾರೆ. ದರ್ಶನ್ ಸ್ನೇಹಿತ ವಿನಯ್ ಇದರ ಒಡೆಯನಾಗಿದ್ದು, ಇದರ ಜೊತೆಗೆ ದರ್ಶನ್‌ಗೆ ಬಹಳಾನೇ ನಂಟಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪವಿತ್ರಾ ಡಿ ಬಾಸ್ ಸಫಾರಿಗೆ ವಿಸಿಟ್ ಕೊಟ್ಟಿದ್ದಾರೆ. ಈ ಡಿ ಬಾಸ್ ಸಫಾರಿ ಇರೋದು ಆರ್ ಆರ್ ನಗರದ ಸ್ಟೋನಿ ಬ್ರೂಕ್ ಪಬ್​ನಲ್ಲಿ. ರೇಣುಕಾಸ್ವಾಮಿ ಮರ್ಡರ್ ಗೆ ಸ್ಕೆಚ್ ಹಾಕಿದ್ದೇ ಈ ಜಾಗದಲ್ಲಿ ಅಂತ ಹೇಳಲಾಗುತ್ತೆ. ಆಗ ಸುಪಾರಿ ಕೊಟ್ಟ ಜಾಗದಲ್ಲಿ ಈಗ ಸಫಾರಿ ಮಾಡ್ತಿದ್ದಾರೆ ಪವಿತ್ರಾ ಗೌಡ.

ಹೌದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ಪವಿತ್ರಾ ಇತ್ತೀಚಿಗೆ ದಿ ಬಾಸ್ ಸಫಾರಿಗೆ ಹೋಗಿ ರೀಲ್ಸ್ ಮಾಡಿದ್ದಾರೆ. ಡಿ ಬಾಸ್ ಅನ್ನೋ ಬೋರ್ಡ್ ಮುಂದೆ ನಾಚುತ್ತಾ, ನಲಿಯುತ್ತಾ ಪೋಸ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ಡಿ ಬಾಸ್ ಸಫಾರಿ ಇರೋದು ಬೆಂಗಳೂರಿನ ಆರ್ ಆರ್ ನಗರದಲ್ಲಿರೋ ಸ್ಟೋನಿ ಬ್ರೂಕ್ ಪಬ್​ನಲ್ಲಿ. ಇದು ಭಾರತದ ಫಸ್ಟ್ ಸ್ಟ್ರೀಮ್ ರೆಸ್ಟೋರೆಂಟ್. ಇದಕ್ಕೆ ಡಿ ಬಾಸ್ ಸಫಾರಿ ಅಂತ  ಹೆಸರು ಇಡಲಾಗಿದೆ. ಈ ಸ್ಟೋನಿ ಬ್ರೂಕ್‌ ಡಿ ಬಾಸ್ ಸಫಾರಿಯ ವಿಶೇಷತೆ ಏನೆಂದರೆ ಖುದ್ದು  ದರ್ಶನ್​ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪ್ರಾಣಿಗಳ ಹಾಗೂ ಪಕ್ಷಿಗಳ ಫೋಟೋಗಳ ಫ್ರೇಮ್​ಗಳನ್ನ ಅಳವಡಿಸಲಾಗಿದೆ. ಈ ರೆಸ್ಟೋರೆಂಟ್​ನಲ್ಲಿರೋ ಆನೆ, ಚಿರತೆ, ಹಲವಾರು ವಿಧಧ ಪಕ್ಷಿಗಳ ಫೋಟೋಗಳನ್ನು ಖುದ್ದು ದರ್ಶನ್​ ಅವರೇ ಕ್ಲಿಕ್ಕಿಸಿದ್ದಾರೆ. ದರ್ಶನ್​ ಅವರ ಅಭಿಮಾನಿಗಳ ಗಮನ ಸೆಳೆಯುವ ಸಲುವಾಗಿ ಹೀಗೆ ಮಾಡಿದ್ದಾರೆ ಇದರ ಮಾಲೀಕರು.

ದರ್ಶನ್ ಫ್ಯಾನ್ಸ್ ಇಲ್ಲಿಗೆ ಹೋಗಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿ ಪಡ್ತಾರೆ. ಈ ರೆಸ್ಟೋರೆಂಟ್​​ನ  ಖುದ್ದು ದರ್ಶನ್ ಉದ್ಘಾಟನೆ ಮಾಡಿದ್ರು. ಹಲವು ಸಾರಿ ದರ್ಶನ್ ಕೂಡ ಇಲ್ಲಿಗೆ ಭೇಟಿ ಕೊಡ್ತಾರೆ. ದರ್ಶನ್ ಸ್ನೇಹಿತ ವಿನಯ್ ಇದರ ಒಡೆಯನಾಗಿದ್ದು, ಇದರ ಜೊತೆಗೆ ದಾಸನಿಗೆ ಬಹಳಾನೇ ನಂಟಿದೆ.

ಹೌದು ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಅರೆಸ್ಟ್ ಆದ ಮೇಲೆ ಪೊಲೀಸರು ಈ ಸ್ಟೋನಿ ಬ್ರೂಕ್ ಪಬ್​ನ ಸೀಜ್ ಮಾಡಿಸಿದ್ರು. ಯಾಕಂದ್ರೆ ಕೊಲೆಗೂ ಮುನ್ನಾ ದರ್ಶನ್ , ವಿನಯ್ ಮತ್ತು ಇತರರು ಇದೇ ಪಬ್​ನಲ್ಲಿ ಪಾರ್ಟಿ ಮಾಡಿದ್ರು ಅನ್ನೋ ವಿಷ್ಯ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಸೋ ಇಲ್ಲಿ ಸ್ಥಳ ಮಹಜರು ಮಾಡಿಸಿ ಕೆಲ ಕಾಲ ಪಬ್​ನ ಬಂದ್ ಮಾಡಿಸಲಾಗಿತ್ತು. ಈ ಪಬ್​ನ ಒಡೆಯ ವಿನಯ್ ಕೂಡ ಈ ಕೊಲೆ ಕೇಸ್​ನಲ್ಲಿ ಆರೋಪಿ ಆಗಿದ್ದಾರೆ.

ಸದ್ಯ ವಿನಯ್ ಕೂಡ ಬೇಲ್ ಪಡೆದು ಹೊರಬಂದಿದ್ದು ಈ ಪಬ್ ಮತ್ತೆ ರೀ ಓಪನ್ ಆಗಿದೆ. ಅಚ್ಚರಿ ಅಂದ್ರೆ ಶುಕ್ರವಾರ ಪವಿತ್ರಾ ಗೌಡ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ದರ್ಶನ್ ಸೆರೆಹಿಡಿದ ಪೋಟೋಗಳ ಮಂದೆ ನಿಂತು ರೀಲ್ಸ್ ಮಾಡಿದ್ದಾರೆ.

ಒಟ್ಟಾರೆ ಡಿ ಬಾಸ್ ಸಫಾರಿಯಲ್ಲಿ ಪವಿತ್ರಾ ಗೌಡ ಸವಾರಿ ಮಾಡಿರೋದು ಸಖತ್ ಸದ್ದು ಸುದ್ದಿ ಮಾಡ್ತಾ ಇದೆ. ದರ್ಶನ್ ಅಡ್ಡಾಗೆ ಬಂದಿರೋ ಪವಿತ್ರಾ ಮತ್ತೆ ದಾಸನಿಗೆ ಹತ್ತಿರವಾದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more