ರಣ್‌ಬೀರ್ ಆಲಿಯಾ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣೇಶಮೂರ್ತಿ..!

ರಣ್‌ಬೀರ್ ಆಲಿಯಾ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣೇಶಮೂರ್ತಿ..!

Published : Oct 18, 2025, 11:10 AM ISTUpdated : Oct 18, 2025, 12:07 PM IST

ಬಾಲಿವುಡ್ ತಾರಾ ದಂಪತಿ ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ನಿರ್ಮಿಸಿರುವ 250 ಕೋಟಿ ಮೌಲ್ಯದ ತಮ್ಮ ಹೊಸ ಬಂಗಲೆಯಲ್ಲಿ ಅಯೋಧ್ಯೆ ರಾಮಲಲ್ಲಾನ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ 6 ಅಡಿಯ ಹೊಯ್ಸಳ ಶೈಲಿಯ ಗಣೇಶನ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ.

ಬಾಲಿವುಡ್ ತಾರಾ ದಂಪತಿ ರಣ್​ಬೀರ್ ಕಪೂರ್​ ಮತ್ತು ಆಲಿಯಾ ಭಟ್ ಮುಂಬೈನಲ್ಲಿ 250 ಕೋಟಿಯ ಐಷಾರಾಮಿ ಬಂಗಲೆಯನ್ನ ಕಟ್ಟಿಸಿದ್ದು, ಸದ್ಯದಲ್ಲೇ ಗೃಹಪ್ರವೇಶ ಮಾಡ್ತಾ ಇದ್ದಾರೆ. ವಿಶೇಷ ಅಂದ್ರೆ ಈ ಬಂಗಲೆಯಲ್ಲಿ ಗಣಪನ ಮೂರ್ತಿ ಸ್ಥಾಪನೆ ಆಗಲಿದ್ದು, ಅದನ್ನ ನಮ್ಮ ಮೈಸೂರಿನ ಖ್ಯಾತ ವಾಸ್ತುಶಿಲ್ಪಿ ಅರುಣ್ ಯೋಗಿರಾಜ್ ಸಿದ್ದಪಡಿಸಿದ್ದಾರೆ.

ಯೆಸ್ ಬಾಲಿವುಡ್ ನ ಸ್ಟಾರ್ ಜೋಡಿ ರಣ್​​ಬೀರ್ ಕಪೂರ್ - ಆಲಿಯಾ ಭಟ್ ಮುಂಬೈನಲ್ಲಿ ಹೊಸ ಮನೆಯ ಗೃಹಪ್ರವೇಶ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಅಸಲಿಗೆ ಕಪೂರ್ ಕುಟುಂಬಕ್ಕೆ ಸೇರಿದ ಈ ಹಳೆಯ ಬಂಗಲೆಯನ್ನ ರಿನೋವೇಟ್ ಮಾಡಿಸಿರೋ ಈ ಜೋಡಿ, ಮಗಳ ಹೆಸರಲ್ಲಿ ಮನೆಯನ್ನ ರಿಜಿಸ್ಟರ್ ಮಾಡಿಸಿದ್ದಾರೆ ಅಂದಹಾಗೆ ಇದರ ಬೆಲೆಯೇ ಬರೊಬ್ಬರಿ 250 ಕೋಟಿ.

ರಣಬೀರ್-ಆಲಿಯಾ ಪುತ್ರಿ ರಾಹಾ ಕಪೂರ್ ಈಗ 250 ಕೋಟಿ ಬಂಗಲೆಯ ಒಡತಿ. ಮುಂದಿನ ತಿಂಗಳು ರಾಹಾಗೆ ಮೂರು ವರ್ಷ ತುಂಬಲಿದ್ದು ಅದೇ ಸಮಯದಲ್ಲಿ ಮನೆ ಗೃಹಪ್ರವೇಶ ಮಾಡಲಿಕ್ಕೆ ಕಪೂರ್ ಫ್ಯಾಮಿಲಿ ಸಜ್ಜಾಗಿದೆ. ತಮ್ಮ ನೂತನ ಗೃಹದಲ್ಲಿ ವಿಘ್ನನಿವಾರಕ ಗಣೇಶನ ವಿಗ್ರಹ ಇರಬೇಕು ಅಂತ ಆಸೆ ಪಟ್ಟ ರಣಬೀರ್-ಆಲಿಯಾ ಒಂದು ಮೂರ್ತಿಯನ್ನ ಮಾಡಿಸಿದ್ದಾರೆ. ಅದು ನಮ್ಮ ಮೈಸೂರಿನ ಹೆಸರಾಂತ ವಾಸ್ತುಶಿಲ್ಪಿ ಅರುಣ್ ಯೋಗಿರಾಜ್ ಬಳಿ.

ಅರುಣ್ ಯೋಗಿರಾಜ್ ಅಯೋಧ್ಯೆಯ ಪ್ರಭು ಶ್ರೀರಾಮನ ಮೂರ್ತಿಯನ್ನ ಕೆತ್ತಿದಂಥಾ ಖ್ಯಾತ ಶಿಲ್ಪಿ. ಇವರನ್ನ ಕಾಂಟಾಕ್ಟ್ ಮಾಡಿದ್ದ ಆಲಿಯಾ ಮತ್ತು ರಣಬೀರ್ ತಮ್ಮ ನೂತನ ಗೃಹಕ್ಕೊಂದು ಗಣೇಶನ ಮೂರ್ತಿ ಮಾಡಿಕೊಡುವಂತೆ ಕೇಳಿದ್ರಂತೆ. ಅವರ ಮನೆಯನ್ನ ನೋಡಿಕೊಂಡು ಬಂದು, ಅದಕ್ಕೆ ತಕ್ಕಂಥಾ ಆರು ಅಡಿಯ ಮೂರ್ತಿ ಸಿದ್ದಮಾಡಿದ್ದಾರೆ ಅರುಣ್ ಯೋಗಿರಾಜ್

6 ಅಡಿಯ ಮೈಸೂರು ಹೊಯ್ಸಳ ಶೈಲಿಯ ಈ ಗಣೇಶ ಮೂರ್ತಿ ಸದ್ಯದಲ್ಲೇ ಕಪೂರ್ ಬಂಗಲೆ ಸೇರಲಿದೆ. ಬಾಲಿವುಡ್​ನ ತಾರಾದಂಪತಿ  ಅನುದಿನ ನಮ್ಮ ಮೈಸೂರ ಗಣಪನ ಆಶಿರ್ವಾದ ಪಡೆಯಲಿದ್ದಾರೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more