ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

Published : Feb 03, 2023, 11:54 AM IST

ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. 

ಕಬ್ಜ.. ಇದೊಂದು ಹೆಸರು ಈಗ ಸಿನಿ ರಂಗದಲ್ಲಿ ಹೊಸ ವೈಬ್ರೇಷನ್ ಕ್ರಿಕೆಟ್ ಮಾಡಿದೆ. ದೇಶದ ಉದ್ದಗಲಕ್ಕೆ ಯಾವ ಚಿತ್ರರಂಗಕ್ಕೆ ಹೋದ್ರು ಕಬ್ಜ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಕಾರಣ ನಿರ್ದೇಶಕ ಆರ್ ಚಂದ್ರು ಉಪೇಂದ್ರ, ಕಿಚ್ಚ ಸುದೀಪ್ ಸೇರಿಕೊಂಡು ಕೆಜಿಎಫ್ ಸಿನಿಮಾದಂತಹ ಅದ್ಭುತ ಕ್ವಾಲಿಟಿ ಸಿನಿಮಾ ಮಾಡಿರೋದು. ಮಾರ್ಚ್ 17ಕ್ಕೆ ವರ್ಲ್ಡ್ ವೈಡ್ ತೆರೆ ಮೇಲೆ ಬರೋ ಕಬ್ಜ ಸಿನಿಮಾದ ಮೇಲೆ ಕೌಂಟ್ ಡೌನ್ ಶುರುವಾಗಿದೆ. ಇದೀಗ ಈ ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. ಅದರಲ್ಲೂ ಕನ್ನಡದಿಂದ ಬರೋ ಯಾವ್ದೇ ಕ್ವಾಲಿಟಿ ಸಿನಿಮಾ ಆ ಚಿತ್ರತಂಡಕ್ಕೆ ರಾಜಮೌಳಿ ಬೆನ್ನು ತಟ್ಟಿದ್ದನ್ನ ನೋಡಿದ್ದೀರಾ. ಕೆಜಿಎಫ್ ಸಿನಿಮಾದ ಟ್ರೈಲರ್ ನೋಡಿ ಈ ಸಿನಿಮಾವನ್ನ ಪ್ಯಾನ್ ಇಂಡಿಯಾಗೆ ಹಂಚಿ ಅಂತ ಯಶ್ಗೆ ಹೇಳಿದ್ರು ಮೌಳಿ. 

ಫೆಬ್ರವರಿ ಫೆಸ್ಟಿವಲ್‌ಗೆ ಸಜ್ಜಾಗಿದೆ ಸ್ಯಾಂಡಲ್‌ವುಡ್: ವೇದ ಬಳಿಕ ಬಹುದೊಡ್ಡ ಸಂಭ್ರಮದಲ್ಲಿ ಚಿತ್ರರಂಗ!

ಈಗ ಕೆಜಿಎಫ್ ಸಿನಿಮಾವನ್ನ ಇನ್ಸ್ಪ್ರೈರ್ ಆಗಿ ತಗೊಂಡು 1970- 80ರ ದಶಕದ ಹೊಸ ಕಥೆ ಹೆಣೆದಿರೋ ನರ್ದೇಶಕ ಆರ್ ಚಂದ್ರು ಕಬ್ಜ ಸಿನಿಮಾಗೂ ಮೌಳಿ ಅಭಯ ಸಿಕ್ತಾ ಇದೆ. ಯಾಕಂದ್ರೆ ಕಬ್ಜ ಸಿನಿಮಾ ಮೊದಲ ಮಾಸ್ ಸಾಂಗ್ ಹೈದರಾಬಾದ್ನಲ್ಲಿ ರಿಲೀಸ್ ಆಗ್ತಿದ್ದು, ಈ ಕಾರ್ಯಕ್ರಮಕ್ಕೆ ಎಸ್ ಎಸ್ ರಾಜಮೌಳಿಗೆ ಆಹ್ವಾನ ಕೊಡಲಾಗಿದೆ. ಕಬ್ಜ ಸಿನಿಮಾದ ಪ್ಯಾನ್ ಇಂಡಿಯಾ ಪ್ರಮೋಷನ್ಗೆ ಪಕ್ಕಾ ಪ್ಲಾನ್ ಇರೋ ಬ್ಲ್ಯೂ ಪ್ರಿಂಟ್ ರೆಡಿ ಆಗಿದೆ. ಹೈದರಾಬಾದ್ ಬಳಿಕೆ, ಚನ್ನೈಮ ಮುಂಬೈಯನ್ನೂ ಹಾಡುಗಳ ಬಿಡುಗಡೆ ಆಗುತ್ತೆ. ಮಾರ್ಚ್ ಫಸ್ಟ್‌ನಲ್ಲಿ ಕಬ್ಜ ಟ್ರೇಲರ್ ರಿಲೀಸ್ ಆಗಲಿದೆ. ಕಬ್ಜ ಸಿನಿಮಾವನ್ನ 108 ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗಿದೆ ಅಂತ ಹೇಳಲಾಗ್ತಿದೆ. ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಭಾರಿ ಜೋರಾಗಿದ್ದು, ಅಮೇಜಾನ್ ಪ್ರೈಮ್ಗೆ ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟ ಆಗಿದೆ. ಅಷ್ಟೆ ಅಲ್ಲ 9 ಭಾಷೆಯಲ್ಲಿ ಕಬ್ಜ ರಿಲೀಸ್ ಆಗುತ್ತಿದ್ದು ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ವಿತರಣಾ ಹಕ್ಕು ಕೂಡ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. 

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
Read more