ಬೇಲ್ ರದ್ದಾಗುವ ಭೀತಿ, ದೇವಿಗೆ ಮೊರೆ: ಪತ್ನಿ ವಿಜಯಲಕ್ಷ್ಮೀ ಜೊತೆ ಕಾಮಾಕ್ಯದೇವಿ 'ದರ್ಶನ' ರಹಸ್ಯ..!

ಬೇಲ್ ರದ್ದಾಗುವ ಭೀತಿ, ದೇವಿಗೆ ಮೊರೆ: ಪತ್ನಿ ವಿಜಯಲಕ್ಷ್ಮೀ ಜೊತೆ ಕಾಮಾಕ್ಯದೇವಿ 'ದರ್ಶನ' ರಹಸ್ಯ..!

Published : Jul 31, 2025, 05:53 PM IST

ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ರು. ಪತ್ನಿ ವಿಜಯಲಕ್ಷ್ಮೀ ದರ್ಶನ್​ಗೆ ಬೇಲ್ ಸಿಗೋದಕ್ಕೆ ಕಂಡ ಕಂಡ ವಕೀಲರ ಬಳಿ ಅಲೀತಾ ಇದ್ರು. ಈ ನಡುವೆ ಹಲವು ದೇವಸ್ಥಾನಗಳಿಗೆ ಹೋಗಿ ದೇವರ ಬಳಿಯೂ ಪತಿಯನ್ನ ಕಾಪಾಡು ಅಂತ ಮೊರೆಯಿಡ್ತಾ ಇದ್ರು.

ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಗಳ ಜಟಾಪಟಿ ನಡೀತಾ ಇದ್ರೆ, ದರ್ಶನ್ ಮಾತ್ರ ಅದೇ ಸಮಯದಲ್ಲಿ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಹೋಗಿ ದರ್ಶನ ಮಾಡಿದ್ದಾರೆ. ಅಸಲಿಗೆ ದರ್ಶನ್ ಕಾಮಾಕ್ಯಕ್ಕೆ ಹೋಗಿದ್ದು ಒಂದು ಹರಕೆ ತೀರಿಸಲಿಕ್ಕೆ. ಈ ಶಕ್ತಿ ದೇವಿಯ ಸನ್ನಿಧಾನಕ್ಕೆ ದರ್ಶನ್​ರನ್ನ ಪತ್ನಿ ಕರೆದುಕೊಂಡು ಹೋಗಿದ್ದರ ಹಿಂದೆ ಒಂದು ರಹಸ್ಯ ಇದೆ..

ದರ್ಶನ್ ಅಸ್ಸಾಂನ ಹೆಸರಾಂತ ಶಕ್ತಿಪೀಠ ಕಾಮಾಕ್ಯಕ್ಕೆ ಹೋಗಿ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಪತ್ನಿ ಸಮೇತರಾಗಿ ಕಾಮಾಕ್ಯಕ್ಕೆ ಹೋಗಿರೋ ದರ್ಶನ್, ಪತ್ನಿ ಕಟ್ಟಿಕೊಂಡಿದ್ದ ಹರಕೆಯನ್ನ ತೀರಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಪತ್ನಿ ಕಟ್ಟಿಕೊಂಡ ಹರಕೆ ಬೇರೇನೂ ಅಲ್ಲ, ದರ್ಶನ್ ಜೈಲಿನಿಂದ ಹೊರಬರಲಿ ಅನ್ನೋದು.

ಹೌದು ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ರು. ಪತ್ನಿ ವಿಜಯಲಕ್ಷ್ಮೀ ದರ್ಶನ್​ಗೆ ಬೇಲ್ ಸಿಗೋದಕ್ಕೆ ಕಂಡ ಕಂಡ ವಕೀಲರ ಬಳಿ ಅಲೀತಾ ಇದ್ರು. ಈ ನಡುವೆ ಹಲವು ದೇವಸ್ಥಾನಗಳಿಗೆ ಹೋಗಿ ದೇವರ ಬಳಿಯೂ ಪತಿಯನ್ನ ಕಾಪಾಡು ಅಂತ ಮೊರೆಯಿಡ್ತಾ ಇದ್ರು. ಆಗ ವಿಜಯಲಕ್ಷ್ಮೀಗೆ ಒಬ್ಬ ಜ್ಯೋತಿಷಿ ಕಾಮಾಕ್ಯಕ್ಕೆ ಹೋಗಿ ನಿನ್ನ ಬೇಡಿಕೆ ಈಡೇರುತ್ತೆ ಅನ್ನೋ ಸಲಹೆ ಕೊಟ್ಟರಂತೆ,

ಹೌದು ಕಾಮಾಕ್ಯ ದೇವಾಲಯವನ್ನ ದೇವಿಯ 51 ಶಕ್ತಿಪೀಠಗಳಲ್ಲಿ ಒಂದು ಅಂತ ಪರಿಗಣಿಸಲಾಗಿದೆ. ಜನಪ್ರಿಯ ಐತಿಹ್ಯಗಳ ಪ್ರಕಾರ, 'ಮಾತೆ ಸತಿ'ಯ ದೇಹದ 51 ತುಣುಕುಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನ ಶಕ್ತಿಪೀಠಗಳು ಅಂತ ಪರಿಗಣಿಸಲಾಗುತ್ತದೆ. ಅದೇ ಶಕ್ತಿಪೀಠಗಳ ಸಾಲಿನಲ್ಲಿ ಕಾಮಾಕ್ಯ ದೇವಸ್ಥಾನ ಕೂಡಾ ಸೇರುತ್ತದೆ. ತಾಂತ್ರಿಕ ಚಟಿವಟಿಕೆಗಳಿಗೂ ಇದು ಹೆಸರುವಾಸಿ.  ಮಾಟ ಮಂತ್ರಗಳನ್ನ ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ದೇಶದೆಲ್ಲೆಡೆಯಿಂದ ಭಕ್ತರು ಇಲ್ಲಿಗೆ ಬರ್ತಾರೆ.

ದರ್ಶನ್ ಪತ್ನಿ ಕೂಡ ಕಳೆದ ವರ್ಷ ನವೆಂಬರ್​ನಲ್ಲಿ ಇಲ್ಲಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿದ್ರು. ಅಚ್ಚರಿ ಅಂದ್ರೆ ಮುಂದೆ ಕೆಲವೇ ದಿನಗಳಲ್ಲಿ ದರ್ಶನ್​ಗೆ ಹೈಕೋರ್ಟ್​​ನಿಂದ ಬೇಲ್ ಸಿಕ್ಕಿತ್ತು. ಆಗ ವಿಜಯಲಕ್ಷ್ಮೀ ಕಾಮಾಕ್ಯ ದೇಗುಲದ ಫೋಟೋ ಹಂಚಿಕೊಂಡು ಧನ್ಯವಾದ ದೇವಿ ಅಂತ ಪೋಸ್ಟ್ ಹಾಕಿದ್ರು.

ಹೌದು ದರ್ಶನ್ ಗೆ ಸಿಕ್ಕಿರುವ ಬೇಲ್ ಈಗ ರದ್ದಾಗೋ ಭೀತಿ ಕಾಡ್ತಾ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದು ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಹೊರಬೀಳಿದೆ. ಒಂದು ವೇಳೆ ಬೇಲ್ ರದ್ದಾದ್ರೆ ದರ್ಶನ್ ಮತ್ತೆ ಜೈಲು ಸೇರಬೇಕಾಗುತ್ತೆ. ಸೋ ವಿಜಯಲಕ್ಷ್ಮೀ ಪತಿಯನ್ನ ಕಾಮಾಕ್ಯ ದೇವಿಯ ಸನ್ನಿಧಾನಕ್ಕೆ ಕರೆತಂದು ಹರಕೆ ತೀರಿಸಿದ್ದಾರೆ. ಜೊತೆಗೆ ಮತ್ತೆ ದರ್ಶನ್ ಬಂಧನ ಆಗದೇ ಇರಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದಾರೆ.

ದರ್ಶನ್ ಬೇಲ್​ ಪಡೆದು ಹೊರಬಂದ ಮೇಲೆ ಕೇರಳದ ಮಾಡಾಯಿಕಾವು ಭಗವತಿ, ಕೊಟ್ಟಿಯೂರು ಮಹಾದೇವ ಸನ್ನಿಧಾನದಲ್ಲೆಲ್ಲಾ ಪೂಜೆ ಸಲ್ಲಿಸಿದ್ದಾರೆ. ಮತ್ತೀಗ ಕಾಮಾಕ್ಯ ದೇವಿ ಸನ್ನಿಧಾನಕ್ಕೆ ಹೋಗಿ ಬಂದಿದ್ದಾರೆ. ಸಂಕಟ ಬಂದಾಗ ವೆಂಕಟ ರಮಣ ಅಂತ  ದೇವಸ್ಥಾನಗಳನ್ನ ಸುತ್ತು ಹಾಕ್ತಾ ಇದ್ದಾರೆ. ಆದ್ರೆ ನ್ಯಾಯಸ್ಥಾನ ಏನು ತೀರ್ಪು ಕೊಡುತ್ತೆ ಅನ್ನೋದ್ರ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
Read more