ಬರ್ತಿದೆ 'ದಿ ಡೆವಿಲ್' ಮೊದಲ ಹಾಡು.. ಅಂದೇ ಏನಾಗಲಿದೆ ನಟ ದರ್ಶನ್ ಪಾಡು?

ಬರ್ತಿದೆ 'ದಿ ಡೆವಿಲ್' ಮೊದಲ ಹಾಡು.. ಅಂದೇ ಏನಾಗಲಿದೆ ನಟ ದರ್ಶನ್ ಪಾಡು?

Published : Aug 11, 2025, 12:42 PM IST

ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್​ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್​ನಲ್ಲಿ..

ನಟ ದರ್ಶನ್​ (Darshan Thoogudeepa) ಬೇಲ್ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್​ನ ತೀರ್ಪು ಯಾವ ಕ್ಷಣದಲ್ಲಿ ಬೇಕಾದ್ರೂ ಹೊರಬೀಳಬಹುದು. ಸೋ ದರ್ಶನ್ ಆ ಟೆನ್ಷನ್​ನಲ್ಲಿರುವ ಟೈಂನಲ್ಲೇ ದಿ ಡೆವಿಲ್ ಸಿನಿಮಾದ ಫಸ್ಟ್ ಸಾಂಗ್ ಬರ್ತಾ ಇದೆ. ಅ ಹಾಡಿನ ಸಾಲು ಸದ್ಯ ನಟ ದರ್ಶನ್ ಸ್ಥಿತಿಗೆ ಹೇಳಿ ಮಾಡಿಸಿದಂತಿದೆ ಎನ್ನಬಹುದೇ?.

ಇದ್ರೆ ನೆಮ್ಮದಿಯಾಗ್ ಇರ್ಬೇಕ್.. ಈ ಸಾಲನ್ನ ಎಲ್ಲೋ ಕೇಳಿದ್ದೀವಲ್ಲಾ ಅಂತಿದ್ದೀರಾ..? ಸೋಷಿಯಲ್ ಮಿಡಿಯಾದಲ್ಲಿ ದರ್ಶನ್ ಉದುರಿಸಿದ  ಈ ಅಣಿಮುತ್ತು ನಿಮ್ಮ ಕಿವಿಗೆ ಬಿದ್ದಿರಬಹುದು. ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋದನ್ನ ಕೇಳಿ ಇದ್ಯಾವುದೋ 'ದಾಸ ಸಾಹಿತ್ಯ' ಅಂದುಕೋಬೇಡಿ. ಇದು ನಮ್ಮ 'ದಾಸ' ಅಲಿಯಾಸ್ ದರ್ಶನ್ ಹೇಳಿದ ಮಾತು.

ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್​ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್​ನಲ್ಲಿ ಫಸ್ಟ್ ಸಿಂಗಲ್ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹೊರಬರಲಿದೆ.

ಇತ್ತ '[ದಿ ಡೆವಿಲ್' ಸಿನಿಮಾದ ಜಾಲಿ ಹಾಡು ಬರ್ತಾ ಇದ್ರೆ, ಅತ್ತ ದರ್ಶನ್ ಪಾಡು ಮಾತ್ರ ಭಯಂಕರ ಟೆನ್ಶನ್​ನಲ್ಲಿದೆ. ಈಗಾಗ್ಲೇ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರೋ 'ಡಿ ಗ್ಯಾಂಗ್​'ನ ಬೇಲ್ ರದ್ದು ಮಾಡಬೇಕು ಅಂತ ಸುಪ್ರೀಂ ಕೋರ್ಟ್​ನಲ್ಲಿ ವಾದ ವಿವಾದ ನಡೆದಾಗಿದೆ. ಲಿಖಿತ ವಾದ ಕೂಡ ಸಲ್ಲಿಸಲಾಗಿದ್ದು ಮಂಗಳವಾರ ಅಥವಾ ಗುರುವಾರ ಅಂತಿಮ ತೀರ್ಪು ಬರಲಿದೆ.

ಇದೂವರೆಗೂ ಸುಪ್ರೀಂ ಕೋರ್ಟ್​ನಲ್ಲಿ ನಡೆದಿರೋ ಬೆಳವಣಿಗೆಗಳನ್ನ ನೋಡಿದ್ರೆ ದರ್ಶನ್ ಬೇಲ್ ರದ್ದಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಈ ಕೇಸ್​ನಲ್ಲಿ ಹೈಕೋರ್ಟ್ ಹೇಗೆ ತೀರ್ಮಾನ ಕೈಗೊಂಡಿದೆ ಅನ್ನೋದು  ತನಗೆ ಅರ್ಥವಾಗಿಲ್ಲ ಅಂದಿದ್ದಾರೆ. ಹೈಕೋರ್ಟ್ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೌದು ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ್ದೇ ಆದ್ರೆ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ. ಸೋ ಆಗಸ್ಟ್ 15ಕ್ಕೆ ದಿ ಡೆವಿಲ್ ಹಾಡು ರಿಲೀಸ್ ಆದ್ರೆ ಅತ್ತ ದರ್ಶನ್ ಅಂದರ್ ಆಗಬೇಕಾಗುತ್ತೆ. ಸ್ವಾತಂತ್ರೋತ್ಸವದ ದಿನವೇ ದರ್ಶನ್ ಮತ್ತೆ ಸ್ವಾತಂತ್ರ ಕಳೆದುಕೊಂಡು ಜೈಲು ಹಕ್ಕಿಯಾಗಬೇಕಾಗುತ್ತೆ.

ಒಟ್ಟಾರೆ ದರ್ಶನ್ ಆಡಿದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’  ಅನ್ನೋ ಸಾಲು ಹಾಡಾಗಿ ಬರ್ತಾ ಇದೆ. ಆದ್ರೆ ಅದು ಬರುವ ಹೊತ್ತಿಗೆ ದಾಸನಿಗೆ ನೆಮ್ಮಿದಿಯಾಗಿ ಇರೋದಕ್ಕೆ ಆಗುತ್ತಾ..? ಕೋರ್ಟ್ ಅದಕ್ಕೆ ಅವಕಾಶ ಕೊಡುತ್ತಾ..? ಕಾದುನೋಡಬೇಕು.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
Read more