ಬರ್ತಿದೆ 'ದಿ ಡೆವಿಲ್' ಮೊದಲ ಹಾಡು.. ಅಂದೇ ಏನಾಗಲಿದೆ ನಟ ದರ್ಶನ್ ಪಾಡು?

ಬರ್ತಿದೆ 'ದಿ ಡೆವಿಲ್' ಮೊದಲ ಹಾಡು.. ಅಂದೇ ಏನಾಗಲಿದೆ ನಟ ದರ್ಶನ್ ಪಾಡು?

Published : Aug 11, 2025, 12:42 PM IST

ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್​ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್​ನಲ್ಲಿ..

ನಟ ದರ್ಶನ್​ (Darshan Thoogudeepa) ಬೇಲ್ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್​ನ ತೀರ್ಪು ಯಾವ ಕ್ಷಣದಲ್ಲಿ ಬೇಕಾದ್ರೂ ಹೊರಬೀಳಬಹುದು. ಸೋ ದರ್ಶನ್ ಆ ಟೆನ್ಷನ್​ನಲ್ಲಿರುವ ಟೈಂನಲ್ಲೇ ದಿ ಡೆವಿಲ್ ಸಿನಿಮಾದ ಫಸ್ಟ್ ಸಾಂಗ್ ಬರ್ತಾ ಇದೆ. ಅ ಹಾಡಿನ ಸಾಲು ಸದ್ಯ ನಟ ದರ್ಶನ್ ಸ್ಥಿತಿಗೆ ಹೇಳಿ ಮಾಡಿಸಿದಂತಿದೆ ಎನ್ನಬಹುದೇ?.

ಇದ್ರೆ ನೆಮ್ಮದಿಯಾಗ್ ಇರ್ಬೇಕ್.. ಈ ಸಾಲನ್ನ ಎಲ್ಲೋ ಕೇಳಿದ್ದೀವಲ್ಲಾ ಅಂತಿದ್ದೀರಾ..? ಸೋಷಿಯಲ್ ಮಿಡಿಯಾದಲ್ಲಿ ದರ್ಶನ್ ಉದುರಿಸಿದ  ಈ ಅಣಿಮುತ್ತು ನಿಮ್ಮ ಕಿವಿಗೆ ಬಿದ್ದಿರಬಹುದು. ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋದನ್ನ ಕೇಳಿ ಇದ್ಯಾವುದೋ 'ದಾಸ ಸಾಹಿತ್ಯ' ಅಂದುಕೋಬೇಡಿ. ಇದು ನಮ್ಮ 'ದಾಸ' ಅಲಿಯಾಸ್ ದರ್ಶನ್ ಹೇಳಿದ ಮಾತು.

ಈ ಸಾಲನ್ನಿಟ್ಟುಕೊಂಡು ಅದೆಷ್ಟೋ ಜನರು ರೀಲ್ಸ್ ಮಾಡಿದ್ದಾರೆ. ಇದೀಗ ದಿ ಡೆವಿಲ್ ಟೀಂನವರು ಇದೇ ಸಾಲನ್ನ ಇಟ್ಟುಕೊಂಡು ಸಿನಿಮಾ ಹಾಡು ಮಾಡಿದ್ದಾರೆ. ಇದೇ ಆಗಸ್ಟ್ 15ಕ್ಕೆ ದಿ ಡೆವಿಲ್ ಮೊದಲ ಸಾಂಗ್ ರಿಲೀಸ್ ಆಗಲಿದ್ದು, ಅಜನೀಶ್ ಮ್ಯೂಸಿಕ್​ನಲ್ಲಿ ಅನಿರುಧ್ ಶಾಸ್ತ್ರಿ ವಾಯ್ಸ್​ನಲ್ಲಿ ಫಸ್ಟ್ ಸಿಂಗಲ್ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹೊರಬರಲಿದೆ.

ಇತ್ತ '[ದಿ ಡೆವಿಲ್' ಸಿನಿಮಾದ ಜಾಲಿ ಹಾಡು ಬರ್ತಾ ಇದ್ರೆ, ಅತ್ತ ದರ್ಶನ್ ಪಾಡು ಮಾತ್ರ ಭಯಂಕರ ಟೆನ್ಶನ್​ನಲ್ಲಿದೆ. ಈಗಾಗ್ಲೇ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರೋ 'ಡಿ ಗ್ಯಾಂಗ್​'ನ ಬೇಲ್ ರದ್ದು ಮಾಡಬೇಕು ಅಂತ ಸುಪ್ರೀಂ ಕೋರ್ಟ್​ನಲ್ಲಿ ವಾದ ವಿವಾದ ನಡೆದಾಗಿದೆ. ಲಿಖಿತ ವಾದ ಕೂಡ ಸಲ್ಲಿಸಲಾಗಿದ್ದು ಮಂಗಳವಾರ ಅಥವಾ ಗುರುವಾರ ಅಂತಿಮ ತೀರ್ಪು ಬರಲಿದೆ.

ಇದೂವರೆಗೂ ಸುಪ್ರೀಂ ಕೋರ್ಟ್​ನಲ್ಲಿ ನಡೆದಿರೋ ಬೆಳವಣಿಗೆಗಳನ್ನ ನೋಡಿದ್ರೆ ದರ್ಶನ್ ಬೇಲ್ ರದ್ದಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಈ ಕೇಸ್​ನಲ್ಲಿ ಹೈಕೋರ್ಟ್ ಹೇಗೆ ತೀರ್ಮಾನ ಕೈಗೊಂಡಿದೆ ಅನ್ನೋದು  ತನಗೆ ಅರ್ಥವಾಗಿಲ್ಲ ಅಂದಿದ್ದಾರೆ. ಹೈಕೋರ್ಟ್ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೌದು ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ್ದೇ ಆದ್ರೆ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ. ಸೋ ಆಗಸ್ಟ್ 15ಕ್ಕೆ ದಿ ಡೆವಿಲ್ ಹಾಡು ರಿಲೀಸ್ ಆದ್ರೆ ಅತ್ತ ದರ್ಶನ್ ಅಂದರ್ ಆಗಬೇಕಾಗುತ್ತೆ. ಸ್ವಾತಂತ್ರೋತ್ಸವದ ದಿನವೇ ದರ್ಶನ್ ಮತ್ತೆ ಸ್ವಾತಂತ್ರ ಕಳೆದುಕೊಂಡು ಜೈಲು ಹಕ್ಕಿಯಾಗಬೇಕಾಗುತ್ತೆ.

ಒಟ್ಟಾರೆ ದರ್ಶನ್ ಆಡಿದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’  ಅನ್ನೋ ಸಾಲು ಹಾಡಾಗಿ ಬರ್ತಾ ಇದೆ. ಆದ್ರೆ ಅದು ಬರುವ ಹೊತ್ತಿಗೆ ದಾಸನಿಗೆ ನೆಮ್ಮಿದಿಯಾಗಿ ಇರೋದಕ್ಕೆ ಆಗುತ್ತಾ..? ಕೋರ್ಟ್ ಅದಕ್ಕೆ ಅವಕಾಶ ಕೊಡುತ್ತಾ..? ಕಾದುನೋಡಬೇಕು.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
Read more