ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?

ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?

Published : Dec 31, 2025, 01:21 PM IST
ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಕಥಾನಾಯಕನಂತೆಯೇ, ನಟ ದರ್ಶನ್ ಇದೀಗ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಚಿತ್ರದಲ್ಲಿನ ದುರಂತ ನಾಯಕನ ಪಾತ್ರವು ಅವರ ನಿಜ ಜೀವನದಲ್ಲಿಯೂ ಪ್ರತಿಫಲಿಸುತ್ತಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವರ್ಷಗಳ ಕಾಲ ನಡೆಯುವ ಸಾಧ್ಯತೆಯಿದೆ.

ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಕಂಡು 2 ವರ್ಷ ಕಂಪ್ಲೀಟ್ ಆಗಿವೆ. ದರ್ಶನ್ ಅಭಿನಯದ ಚಿತ್ರಗಳಲ್ಲೇ  ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಕಾಟೇರ. ದುರಂತ ಅಂದ್ರೆ ಕಾಟೇರ ಸಿನಿಮಾದಲ್ಲಿ ಕೊಲೆ ಆರೋಪ ಹೊತ್ತು ನಾಯಕ ಜೈಲಿಗೆ ಹೋಗ್ತಾನೆ. ಆತ ರಿಲೀಸ್ ಆಗೋಹೊತ್ತಿಗೆ ವಯೋವೃದ್ಧನಾಗಿರ್ತಾನೆ. ಸದ್ಯದ ದರ್ಶನ್ ಸ್ಥಿತಿ ನೋಡ್ತಾ ಇದ್ರೆ ದರ್ಶನ್ ಲೈಫ್​ನಲ್ಲಿ ಕಾಟೇರ ಕಥೆಯೇ ನಡೀತಾ ಇದೆ.

ಯೆಸ್ ದರ್ಶನ್ ನಟನೆಯ ಕಾಟೇರ ಮೂವಿ ರಿಲೀಸ್ ಆಗಿ  ನಿನ್ನೆಗೆ ಎರಡು ವರ್ಷ ಕಂಪ್ಲೀಟ್ ಆಗಿವೆ. ಕಾಟೇರ ಚಿತ್ರವನ್ನ ನಿರ್ಮಿಸಿದ್ದ ರಾಕ್​ಲೈನ್ ಪಿಕ್ಚರ್ಸ್ ಹೊಸ ಟ್ರೈಲರ್ ವೊಂದನ್ನ ರಿಲೀಸ್ ಮಾಡಿ, ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದೆ. ಕಾಟೇರ ಸಿನಿಮಾ ದರ್ಶನ್ ಕರೀಯರ್​ನಲ್ಲೇ ಅತಿದೊಡ್ಡ ಸಕ್ಸಸ್ ಕಂಡ ಸಿನಿಮಾ. ಕೆಜಿಎಫ್, ಕಾಂತಾರ ಬಳಿಕ ಅತಿ ಹೆಚ್ಚು ಗಳಿಕೆ ಮಾಡಿದ ಅಪ್ಪಟ ಕನ್ನಡ ಸಿನಿಮಾ. ಬರೀ ಕರ್ನಾಟಕದಲ್ಲೇ ನೂರು ಕೋಟಿ ಅಧಿಕ ಗಳಿಸಿದ ಸಿನಿಮಾ.

ನಮ್ಮ ಮಣ್ಣಿನ ಕಥೆ.. ಅದಕ್ಕೆ ತಕ್ಕಂತೆ ದರ್ಶನ್ ಅಮೋಘ ಅಭಿನಯ.. ಫ್ಯಾನ್ಸ್​ನ ಖುಷಿಯಲ್ಲಿ ತೇಲಿಸಿದ್ವು. ಅಸಲಿಗೆ ಡೆವಿಲ್ ಬದಲು ಈಗ ಕಾಟೇರ ಬರಬೇಕಿತ್ತು, ಆಗ ತೋರಿಸ್ತಾ ಇದ್ವಿ ನಮ್ಮ ಗತ್ತು ಅಂತ ದಾಸನ ಫ್ಯಾನ್ಸ್ ಬೇಸರ ವ್ಯಕ್ತಪಡಿಸ್ತಾ ಇದ್ದಾರೆ.

ಹೌದು ಕಾಟೇರ ಸಿನಿಮಾದಲ್ಲಿ ನಾಯಕ ಕೊಲೆ ಮಾಡಿ ಜೈಲು ಸೇರ್ತಾನೆ. ಆತ ಬಿಡುಗಡೆ ಆಗುವ ಹೊತ್ತಿಗೆ ವಯೋವೃದ್ದನಾಗಿರ್ತಾನೆ. ಬೇಡಿ ತೊಟ್ಟು ಕೊಂಡು ದರ್ಶನ್ ಬರ್ತಿದ್ರೆ ಪುಣ್ಯಾತ್ಮ ಅಂತ ಜನ ಕೈ ಮುಗೀತಾರೆ.

ದುರಂತ ಅಂದ್ರೆ ರೀಲ್​ನಲ್ಲಿ ಬೇಡಿ ತೊಟ್ಟು, ಕಂಬಿ ಹಿಂದೆ ಹೋದ ದಾಸನಿಗೆ ರಿಯಲ್ ಲೈಫ್​ನಲ್ಲೂ ಕಂಬಿ ಹಿಂದೆ ಹೋಗುವಂತೆ ಆಗಿಬಿಟ್ತು. ಪ್ರಸ್ತುತ ದರ್ಶನ್ ಕೊಲೆ ಆರೋಪದಲ್ಲಿ ಎ-2 ಆಗಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿ ಜೀವನ ಸವೆಸ್ತಾ ಇದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್​​ನ ಟ್ರಯಲ್ ಈಗಾಗ್ಲೇ ಶುರುವಾಗಿದ್ದು, ಸೋಮವಾರ ಸೆಷೆನ್ಸ್ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ರೇಣುಕಾಸ್ವಾಮಿ ತಂದೆ-ತಾಯಿಯನ್ನ ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ದಾರೆ.

ಅದೆಷ್ಟೇ ವೇಗವಾಗಿ ನಡೆದರೂ ಈ ಕೊಲೆ ಕೇಸ್ ವಿಚಾರಣೆ ಮುಕ್ತಾಯ ಆಗಲಿಕ್ಕೆ ವರ್ಷಗಳೇ ಬೇಕು. ಸೋ ದಾಸನ ಸ್ಥಿತಿ ಕಾಟೇರನಂತೆಯೇ ಆದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ಕಾನೂನು ಪಂಡಿತರು.

ಕಾಟೇರದಂತಹ ದೊಡ್ಡ ಸಕ್ಸಸ್ ಕಂಡ ಮೇಲೆ ನಾಯಕನ ಕರೀಯರ್ ಉತ್ತುಂಗಕ್ಕೆ ಹೋಗಬೇಕಿತ್ತು. ಆದ್ರೆ ದುರಂತ ಅಂದರೆ ಸಿನಿಮಾದ ಕಥಾನಾಯಕನಂತೆಯೇ ದಾಸ ಸೆರೆಮನೆ ಸೇರಿದ್ದಾನೆ. ನಿಜವಾದ ದುರಂತನಾಯಕ ಅನ್ನಿಸಿಕೊಂಡಿದ್ದಾನೆ..!

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
Read more