ಪಶು ವಿವಿ 12ನೇ ಘಟಿಕೋತ್ಸವ: ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ

ಪಶು ವಿವಿ 12ನೇ ಘಟಿಕೋತ್ಸವ: ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ

Published : May 01, 2022, 11:04 AM ISTUpdated : May 01, 2022, 11:13 AM IST

ಕನಸು ನನಸಾದ ಸಿಹಿಯಾದ ಕ್ಷಣ, ಸಾಧಕರ ಕಣ್ಣಲ್ಲಿ ಸಾರ್ಥಕ ಭಾವ, ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ,  ಶಿವಮೊಗ್ಗ ಪಶು ಮಹಾವಿದ್ಯಾಲಯದ ಕನಿಕ ಯಾದವ್ 13 ಚಿನ್ನದ ಪದಕ, ಬೆಂಗಳೂರು ಪಶು ಮಹಾವಿದ್ಯಾಲಯದ ಕಿರಣ ದರೂರ 9 ಚಿನ್ನದ ಪದಕ ಹಾಗೂ ಹಾಸನ ಪಶು ಮಹಾವಿದ್ಯಾಲಯದ ರಜತ್ 6 ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದಾರೆ. 
 

ಬೀದರ್ (ಮೇ. 01):  ಕನಸು ನನಸಾದ ಸಿಹಿಯಾದ ಕ್ಷಣ, ಸಾಧಕರ ಕಣ್ಣಲ್ಲಿ ಸಾರ್ಥಕ ಭಾವ, ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ,  ಶಿವಮೊಗ್ಗ ಪಶು ಮಹಾವಿದ್ಯಾಲಯದ ಕನಿಕ ಯಾದವ್ 13 ಚಿನ್ನದ ಪದಕ, ಬೆಂಗಳೂರು ಪಶು ಮಹಾವಿದ್ಯಾಲಯದ ಕಿರಣ ದರೂರ 9 ಚಿನ್ನದ ಪದಕ ಹಾಗೂ ಹಾಸನ ಪಶು ಮಹಾವಿದ್ಯಾಲಯದ ರಜತ್ 6 ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದಾರೆ. 

ಬೀದರ್ ತಾಲೂಕಿನ ಜನವಾಡ ಬಳಿಯ ನಂದಿನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯದ 12 ಘಟಿಕೋತ್ಸ ನಡೆಯಿತು. ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಈ ಘಟಿಕೋತ್ಸವದಲ್ಲಿ 1012 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 735 ಸ್ನಾತಕ, 215 ಸ್ನಾತಕೋತ್ತರ ಹಾಗೂ 62 ಡಾಕ್ಟರೇಟ್ ಪದವಿಧರರಿದ್ದರು. ಒಟ್ಟು 154 ಚಿನ್ನದ ಪಡೆದ ವಿದ್ಯಾರ್ಥಿಗಳಿದ್ದರೆ ಅತಿ ಹೆಚ್ಚು 13 ಚಿನ್ನದ ಪದಕವನ್ನ ಹರಿಯಾಣ ರಾಜ್ಯದ ಶಿವಮೊಗ್ಗ ಪಶು ವಿದ್ಯಾಲಯದ ಸೈನಿಕನ ಮಗಳು ಕನಿಕಾ ಯಾದವ್ ಬಾಚಿಕೊಂಡರು. ಇನ್ನೂ ಬೆಳಗಾವಿ ಜಿಲ್ಲೆಯ ರಾಯಬಾಗದ ಬೆಂಗಳೂರು ಪಶುವಿಶ್ವವಿದ್ಯಾಲಯದ ಕಿರಣ ದರೂರ್ 9 ಚಿನ್ನದ ಪದಕವನ್ನ ಪಡೆಯುವುದರ ಮೂಲಕ ಬಂಗಾರ ಪದಕವನ್ನ ರೈತನಾದ ತನ್ನ ತಂದೆಗೆ ಅರ್ಪಿಸಿದರು. 

ಈ ಚಿನ್ನದ ಪದಕ ಪಡೆದುಕೊಂಡು ಈ ಮೂರು ವಿದ್ಯಾರ್ಥಿಗಳು ರೈತರ ಸೇವೆ ಮಾಡಬೇಕೆಂದುಕೊಂಡಿದ್ದಾರೆ. ತಾವು ಕಷ್ಟಪಟ್ಟು  ಓದಿದ ಜ್ಜಾನವನ್ನ ಬಳಸಿಕೊಂಡು ಹೊಸ ಹೊಸ ಅವಿಷ್ಕಾರಗಳನ್ನ ಮಾಡಿ ಇದರಿಂದ ರೈತರಿಗೆ ಅನೂಕೂಲ ಮಾಡಿಕೊಡಬೇಕೆಂದು ಒಬ್ಬೊಬ್ಬರು ಒಂದೊಂದು ಗುರಿಯನ್ನ ಇಟ್ಟುಕೊಂಡಿದ್ದಾರೆ.

ಇನ್ನೂ 13 ಚಿನ್ನದ ಪದಕ ಪಡೆದುಕೊಂಡಿರುವ ಕನಿಕ ಯಾದವ್ ಗಡಿಯಲ್ಲಿ ನಿಂತು ದೇಶ ಕಾಯುವ ಬಿಎಸ್ ಎಫ್ ಯೋಧನ ಮಗಳಾಗಿದ್ದಾಳೆ. 2019-20ನೇ ಸಾಲಿನ ಸ್ನಾತಕ ಪದವಿ ವಿಭಾಗದ ಬಿವಿಎಸ್ ಸಿ ಮತ್ತು ಎಎಚ್ ವಿಭಾಗದಲ್ಲಿ ದಾಖಲೆಯ 13 ಚಿನ್ನದ ಪದಕವನ್ನ ಬಾಚಿಕೊಂಡಿದ್ದಾಳೆ. ಕನಿಕಾ ಸಾಧನೆಯನ್ನ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಮೂಲತಹ ಹರಿಯಾಣ ರಾಜ್ಯದ ರೇವಾರಿ ನಿವಾಸಿಯಾಗಿರುವ ಕನಿಕ ಯಾದವ್ ಅವರ ತಂದೆ ಸುನೀಲ್ ಕುಮಾರ್ ಯಾದವ್ ಬಿಎಸ್ ಎಸ್ ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ತಾಯಿ ಸುನೀತಾ ಯಾದವ್ ಗೃಹಿಣಿಯಾಗಿದ್ದಾರೆ. ಇನ್ನೂ 9 ಚಿನ್ನದ ಪದಕ ಪಡೆದಿರುವ ಕಿರಣ ದರೂರ್ 2020-21 ನೇ ಸಾಲಿನಲ್ಲಿ ಬಿವಿಎಸ್ ಸಿ ಮತ್ತು ಎಎಚ್ ವಿಭಾಗದ ಸ್ನಾತಕ ಪದವಿ ಕೋರ್ಸ್ ನಲ್ಲಿ ಬೆಂಗಳೂರು ಪಶು ವಿದ್ಯಾಲಯದ ಕಿರಣ ದರೂರ್ 9 ಚಿನ್ನದ ಪದಕಗಳನ್ನ ಬಾಚಿಕೊಂಡು ರೈತ ದಂಪತಿಯ ಮಗನಾದ ಕಿರಣ ಚಿನ್ನದ ಫಸಲನ್ನೆ ತೆಗೆದಿದ್ದಾನೆ. ಮೂಲತಹ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ನಿವಾಸಿಯಾಗಿರುವ ಕಿರಣ ದರೂರ್ ತಂದೆ ಮಹದೇವ್ ದರೂರ್ ತಾಯಿ ನಿರ್ಮಿಲಾ ಕೃಷಿಕರಾಗಿದ್ದಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಇವರು ಕೃಷಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಾರೆ. ಇನ್ನೂ 6 ಚಿನ್ನದ ಪದಕ ಪಡೆದುಕೊಂಡಿರುವ ಬೆಂಗಳೂರು ನಿವಾಸಿ ರಜತ್ ತಮ್ಮ ಖುಷಿಯನ್ನ ಹಂಚಿಕೊಂಡಿದ್ದು ಹೀಗೆ.
 

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more