ಕೊರೋನಾ ಸಂತ್ರಸ್ಥರ ನೆರವಿಗೆ 2 ಕೋಟಿ ರುಪಾಯಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್

ಕೊರೋನಾ ಸಂತ್ರಸ್ಥರ ನೆರವಿಗೆ 2 ಕೋಟಿ ರುಪಾಯಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್

Suvarna News   | Asianet News
Published : Mar 27, 2020, 05:13 PM ISTUpdated : Mar 28, 2020, 11:01 PM IST

ಆಸ್ಫತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಬರೋಬ್ಬರಿ 2 ಕೋಟಿ ರುಪಾಯಿ ಹಣವನ್ನು ನೀಡುವ ಮೂಲಕ ಸಂಸದ ರಾಜೀವ್ ಚಂದ್ರಶೇಖರ್ ಮಾದರಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಮಾ.27): ಕೊರೋನಾ ಸಂತ್ರಸ್ಥರ ನೆರವಿಗೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಧಾವಿಸಿದ್ದು, ತಮ್ಮ ಸಂಸದರ ನಿಧಿಯಿಂದ ಎರಡು ಕೋಟಿ ರುಪಾಯಿ ಹಣವನ್ನು ವಿಕ್ಟೋರಿಯಾ ಆಸ್ಫತ್ರೆಗೆ ನೀಡಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಫತ್ರೆಯಲ್ಲಿ ಕೋವಿಡ್ 19 ಸೋಂಕು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಫತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಬರೋಬ್ಬರಿ 2 ಕೋಟಿ ರುಪಾಯಿ ಹಣವನ್ನು ನೀಡುವ ಮೂಲಕ ಕೊರೋನಾ ವೈರಸ್ ಸಂತ್ರಸ್ಥರಿಗೆ ನೆರವಾಗಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೂಡಾ ಪ್ರಧಾನಮಂತ್ರಿ ರಾಷ್ಟ್ರೀಯ ವಿಕೋಪ ನಿಧಿಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ನಗರದ ವಿಕ್ಟೋರಿಯ ಆಸ್ಪತ್ರೆಯನ್ನು ಕೋವಿಡ್ 19 ಪ್ರತ್ಯೇಕ ನಿಗಾ ಘಟಕವನ್ನಾಗಿ ಪರಿವರ್ತಿಸಿತ್ತು. ಆಸ್ಪತ್ರೆಗೆ ತುರ್ತಾಗಿ ಬೇಕಾದ ಮಾಸ್ಕ್, ವೆಂಟಿಲೇಟರ್ ಖರೀದಿಸಲು ಸಂಸದ ರಾಜೀವ್ ಚಂದ್ರಶೇಖರ್ ನೆರವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

19:14ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?
09:02ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೊನಾ ಹೆಚ್ಚಾಗಲಿದೆ: ಡಾ. ಸಿ ಎನ್ ಮಂಜುನಾಥ್
01:46ಕೊರೋನಾ ಹೆಚ್ಚಳ: ಸಂಸತ್ತಿನಲ್ಲಿ ಮಾಸ್ಕ್‌ ಧರಿಸಿ ಜಾಗೃತಿ ಸಂದೇಶ ಕೊಟ್ಟ ಪ್ರಧಾನಿ ಮೋದಿ!
03:19ಕರ್ನಾಟಕದಲ್ಲಿ ಕೊರೋನಾ 4ನೇ ಅಲೆ ರೂಲ್ಸ್, ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
02:42Night Curfew ಸಮಯ ಬದಲಾವಣೆ ಮಾಡಿ: ಉದ್ಯಮಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ
03:11Covid 3rd Wave: ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊರೋನಾ ಕೇಸ್ ಹೆಚ್ಚಳ
05:02Covid-19 Crisis: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ: ಶೇ.20 ಪಾಸಿಟಿವಿಟಿ!
07:20Covid-19 Crisis: 3ನೇ ಅಲೆಯಲ್ಲೇ ಗರಿಷ್ಠ: ಮೂವರಲ್ಲಿ ಒಬ್ಬರಿಗೆ ಕೊರೋನಾ
40:09News Hour ಹೋಟೆಲ್ ಮಾಲೀಕರ ಮತ್ತೊಂದು ಬೇಡಿಕೆ, ಕೊರೋನಾ, ಪಂಚರಾಜ್ಯ ಚುನಾವಣೆ
03:23Corona Song: 'ಕಾಣದ ಕಡಲಿಗೆ' ಹಾಡಿನ ದಾಟಿಗೆ ನ್ಯಾಯಾಧೀಶರಿಂದ ಕೊರೋನಾ ಹಾಡು