Coronavirus India

ಬಡವರ ಹೊಟ್ಟೆ ಸೇರಬೇಕಾದ ಹಾಲು ಹೊಟೇಲ್ ಪಾಲು; ಸಿಎಂ ಆದೇಶಕ್ಕೂ ಡೋಂಟ್ ಕೇರ್!

Apr 4, 2020, 2:53 PM IST

ಬೆಂಗಳೂರು (ಏ. 04): ಬಡವರ ಹೊಟ್ಟೆ ಸೇರಬೇಕಾದ ಹಾಲು ಹೊಟೇಲ್ ಪಾಲಾಗಿದೆ. ಲಾಕ್‌ಡೌನ್‌ನಿಂದಾಗಿ ಬಡವರು ಊಟ, ತಿಂಡಿ, ಹಾಲಿಗಾಗಿ ಪರದಾಡುತ್ತಿದ್ದಾರೆ. ಅವರಿಗೆ ಅನುಕೂಲವಾಗಲಿ ಅಂತ ಸಿಎಂ ಹಾಗೂ ಕೆಎಂಎಫ್ ಬಡವರಿಗೆ ಉಚಿತ ಹಾಲು ನೀಡಲು ಆದೇಶಿಸಿದರೆ ಅದು ದುರ್ಬಳಕೆಯಾಗಿದೆ. ಬಡವರಿಗೆ ಸೇರಬೇಕಾದ ಹಾಲು ಹೊಟೇಲ್ ಪಾಲಾಗಿದೆ. 

ಹಸಿವು ತಾಳಲಾರದೆ ಪಿಎಂ ಮೋದಿಗೆ ಫೋನ್ ಮಾಡಿದ ಅನಾಥರು: ಓಡೋಡಿ ಬಂದ ಅಧಿಕಾರಿಗಳು!

ಉಚಿತವಾಗಿ ಹಾಲು ಕೊಡುತ್ತಾರೆ ಎಂದು ತಿಳಿದ ಜನ ಹಾಲಿಗಾಗಿ ಮುಗಿಬಿದ್ದರು. ನೂಕುನುಗ್ಗಲು ಉಂಟಾಯಿತು. ಒಂದಿಬ್ಬರಿಗೆ ಗಾಯಗಳೂ ಆಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!