Coronavirus India

ಅನಗತ್ಯವಾಗಿ ರಸ್ತೆಗಿಳಿದ ವಾಹನ ಜಪ್ತಿ; ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕಮಿಷನರ್ ವಾರ್ನಿಂಗ್!

Apr 1, 2020, 6:53 PM IST

ಬೆಂಗಳೂರು(ಏ.01): ಭಾರತ ಲಾಕ್‌ಡೌನ್ ಆಗಿದ್ದರೂ ಹಲವರು ಮನೆಯಲ್ಲಿರಲು ಸಾಧ್ಯವಾಗದೆ ಅನಗತ್ಯವಾಗಿ ರಸ್ತೆಗಳಿಯುತ್ತಿದ್ದಾರೆ. ಹೀಗೆ ಅನವಶ್ಯಕವಾಗಿ ರಸ್ತೆಗಿಳಿದವರಿಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಸಿ ಮುಟ್ಟಿಸಿದ್ದಾರೆ. ಸುಖಾಸುಮ್ಮನೆ ವಾಹನ ಏರಿ ತುರುಗಾಡುತ್ತಿದ್ದವರ ವಾಹನ ಜಪ್ತಿ ಮಾಡಲಾಗಿದೆ.