ಬೈಕ್ ಸವಾರರ ಕತ್ತು ಸೀಳಿದ ಗಾಳಿಪಟ ದಾರ; ಇಬ್ಬರಿಗೆ ಗಂಭೀರ ಗಾಯ!

Jan 16, 2020, 10:30 PM IST

ಬೀದರ್(ಜ.16): ಮಕರ ಸಂಕ್ರಾತಿ ಹಬ್ಬದಲ್ಲಿ ಗಾಳಿಪಟ ಹಾರಿಸುವುದು ಎಂದರೆ ಮಕ್ಕಳಿಗೆ ಎಲ್ಲಲ್ದ ಖುಷಿ. ಆದರೆ ಈ ಗಾಳಿಪಟ ದಾರ ಅಷ್ಟೇ ಅಪಯಾಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಬೀದರ್‌ನ ಹುಮ್ನಾಬಾದ್ ಪಟ್ಟಣದಲ್ಲಿ ಗಾಳಿಪಟದ ನೈಲಾನ್ ದಾರದಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.  

ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

ರಸ್ತೆ ಪಕ್ಕದಲ್ಲಿದ್ದ ಕಂಬದಲ್ಲಿ ಗಾಳಿ ಪಟದ ದಾರ ನೇತಾಡುತ್ತಿತ್ತು. ನೈಲಾನ್ ದಾರ ಬೈಕ್  ಸವಾರರ ಕತ್ತನ್ನೇ ಸೀಳಿದೆ. ಅಪಾಯಕಾರಿ ಗಾಳಿಪಟದ ದಾರ ಹಾಗೂ ಬೈಕ್ ಸಾವರರ ಕತ್ತು ಸೀಳಿದ ಘಟನೆ ವಿವರ ಇಲ್ಲಿದೆ