ಶ್ರೀರಾಘವೇಂದ್ರ ಆರಾಧನೆ: ಅಲಂಕೃತಗೊಂಡ ಶ್ರೀಮಠ

Aug 25, 2021, 9:23 AM IST

ಬೆಂಗಳೂರು(ಆ.25): ಬೆಂಗಳೂರಿನಲ್ಲಿ ರಾಯರ ಆರಾಧನೆ ಸಂಭ್ರಮ ಮನೆ ಮಾಡಿದೆ. ರಾಯರ ಮಠವನ್ನು ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ಹಾಲು ಪಂಚಾಮೃತಗಳಿಂದ ರಾಯರಿಗೆ ಅಭಿಷೇಕ ಮಾಡಲಾಗಿದೆ.

ಪಂಚಾಂಗ: ರಾಘವೇಂದ್ರ ಸ್ವಾಮಿಗಳ ಸ್ಮರಣೆಯಿಂದ ಫಲ ಪ್ರಾಪ್ತಿ

ಬೃಂದಾವನದ ದರ್ಶನ ಪಡೆದು ಜನ ಪುಳಕಿತರಾಗಿದ್ದಾರೆ. ತಳಿರು ತೋರಣಗಳಿಂದ ರಾಯರ ಮಠ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಪೂರ್ಣಪ್ರಜ್ಞ ನಗರದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆದಿದೆ. ಬೃಂದಾವನಕ್ಕೆ ಪೂಜೆ ಅಭಿಷೇಕ ನಡೆದಿದ್ದು ಇಂದು ರಥೋತ್ಸವ ನಡೆಯಲಿದೆ.