
ನಾವೆಲ್ಲರೂ ನಮ್ಮ ಮನೆ ಸಂತೋಷದಿಂದ ತುಂಬಿರಬೇಕು, ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯಕರ ಮತ್ತು ಸಂತೋಷವಾಗಿರಬೇಕು ಮತ್ತು ನಾವು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಲೇ ಇರಬೇಕು ಎಂದು ಬಯಸುತ್ತೇವೆ. ಪ್ರಾಚೀನ ಕಾಲದಿಂದಲೂ, ಮನೆಯ ಬಳಿ ದೇವಾಲಯವನ್ನು (home near temple) ಹೊಂದಿರುವುದು ಒಳ್ಳೆಯದು ಎಂದು ನಂಬಲಾಗಿದೆ, ಏಕೆಂದರೆ ಅಲ್ಲಿಂದ ಬರುವ ಗಂಟೆಗಳ ಶಬ್ದ ಮತ್ತು ದೇವರ ಹೆಸರನ್ನು ಕೇಳುವುದು, ಮಂತ್ರಗಳನ್ನು ಕೇಳೋದು ಮನಸ್ಸಿಗೆ ಶಾಂತಿಯನ್ನು ತರುತ್ತದೆ. ಆದರೆ ಇದರ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಅನ್ನೋದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ವಾಸ್ತು ಪ್ರಕಾರ, ಮನೆಗೆ ಬಹಳ ಹತ್ತಿರದಲ್ಲಿ ದೇವಾಲಯವಿದ್ದರೆ, ವಿವಿಧ ಸಮಸ್ಯೆಗಳು ಉಂಟಾಗೋ ಸಾಧ್ಯತೆ ಇದೆ. ಕುಟುಂಬ ಸದಸ್ಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು, ಆರ್ಥಿಕ ಸಮಸ್ಯೆಗಳು (economic problems) ಉಂಟಾಗಬಹುದು. ಅಷ್ಟೇ ಅಲ್ಲ ಇದರಿಂದ, ಉದ್ಯೋಗಗಳಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ, ಜೊತೆಗೆ ಜೀವನದಲ್ಲಿ ಪ್ರಗತಿ ಕೂಡ ತಡೆಯಾಗಬಹುದು.
ಮಹಾಶಿವರಾತ್ರಿಯಲ್ಲಿ ಲಕ್ನೋದ ಈ ಮಂದಿರಕ್ಕೆ ಭೇಟಿ ನೀಡಿ
ಮನೆಯ ಬಳಿ ದೇವಾಲಯವನ್ನು ಹೊಂದುವ ಅನಾನುಕೂಲಗಳು ಯಾವುವು?
ವಾಸ್ತು ಪ್ರಕಾರ, ಜನರು ತಮಗೆ ತೊಂದರೆ, ಸಮಸ್ಯೆಗಳು ಬಂದಾಅಗ ದೇವಾಲಯಗಳಿಗೆ ಹೋಗುತ್ತಾರೆ ಮತ್ತು ತಮ್ಮ ದುಃಖಗಳನ್ನು ನಿವಾರಿಸಲು ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ. ದೇಗುಲಕ್ಕೆ ಹೋಗುತ್ತಿದ್ದಂತೆ, ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ (negative energy)ನಿವಾರಣೆಯಾಗಿ ಪಾಸಿಟಿವಿಟಿ ಹರಡುತ್ತೆ. ಆದರೆ, ದೇವಾಲಯವು ನಿಮ್ಮ ಮನೆಗೆ ತುಂಬಾ ಹತ್ತಿರದಲ್ಲಿದ್ದರೆ, ದೇಗುಲದಲ್ಲಿ ಬಿಡುಗಡೆಯಾದ ಈ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸಬಹುದು, ಇದು ಹೆಚ್ಚಿನ ತೊಂದರೆಗಳಿಗೆ ಕಾರಣವಾಗುತ್ತದೆ. ಇದಕ್ಕಾಗಿಯೇ ಧಾರ್ಮಿಕ ಸ್ಥಳಗಳು ಅಥವಾ ವಿದ್ಯುತ್ ಸ್ಥಳಗಳನ್ನು ಎತ್ತರದ ಬೆಟ್ಟಗಳು ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ನಿರ್ಮಿಸಲಾಗುತ್ತದೆ, ಇದರಿಂದ ಅವುಗಳ ಶಕ್ತಿಯು ಸುತ್ತಲೂ ಹರಡುತ್ತದೆ ಮತ್ತು ಮನೆಗಳ ಮೇಲೆ ಪರಿಣಾಮ ಬೀರುವುದಿಲ್ಲ.
ದೇವಾಲಯದ ರಚನೆ ಮತ್ತು ಅದರ ಶಕ್ತಿ
ದೇವಾಲಯದ ಮೇಲ್ಛಾವಣಿಯು ಸಾಮಾನ್ಯ ಮನೆಗಳಂತೆ ಸಮತಟ್ಟಾಗಿರೋದಿಲ್ಲ, ಆದರೆ ಗುಮ್ಮಟ ಆಕಾರದಲ್ಲಿರುತ್ತೆ ಇದು ಶಕ್ತಿಯನ್ನು ಮೇಲಕ್ಕೆ ಹರಿಯಲು ಅನುವು ಮಾಡಿಕೊಡುತ್ತದೆ. ಪಕ್ಷಿಗಳು ಸಾಮಾನ್ಯವಾಗಿ ದೇವಾಲಯದ ಮೇಲ್ಚಾವಣಿಯ ತುತ್ತ ತುದಿಯಲ್ಲಿ ಕುಳಿತುಕೊಳ್ಳದೇ ಇರೋದು ಅದಕ್ಕೇನೆ. ಏಕೆಂದರೆ ಅಲ್ಲಿ ಶಕ್ತಿಯ ಹರಿವು ಪ್ರಬಲವಾಗಿರುತ್ತದೆ. ಈ ಕಾರಣಕ್ಕಾಗಿಯೇ, ದೇವಾಲಯದ ನೆರಳು ಮನೆಯ ಮೇಲೆ ಬೀಳುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತೆ.
ಈ ದೇಗುಲದ ಬಳಿ ನಾಯಿ ಬೊಗಳಲ್ಲ, ಗುಡುಗು, ಮಿಂಚು ಸದ್ದು ಮಾಡಲ್ಲ… ಎಲ್ಲವೂ ನಿಶ್ಯಬ್ಧ!
ಮನೆಯ ಬಳಿ ದೇವಾಲಯವಿದ್ದರೆ ಏನು ಮಾಡಬೇಕು?
ನಿಮ್ಮ ಮನೆ ದೇವಾಲಯಕ್ಕೆ ಬಹಳ ಹತ್ತಿರದಲ್ಲಿದ್ದರೆ, ತೊಂದರೆಗಳನ್ನು ತಪ್ಪಿಸಲು ಕೆಲವು ವಾಸ್ತು ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು, ಅವು ಈ ಕೆಳಗಿನಂತಿವೆ.
ತುಳಸಿ ಗಿಡವನ್ನು ನೆಡಿ: ಮನೆಯಲ್ಲಿ ತುಳಸಿ ಗಿಡಗಳನ್ನು ನೆಡಿ, ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಇರಿಸುತ್ತದೆ.
ಧೂಪ ಮತ್ತು ಕರ್ಪೂರವನ್ನು ಸುಡಿರಿ: ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಕುಟುಂಬಕ್ಕೆ ಯಾವುದೇ ಅಡೆತಡೆಗಳನ್ನು ತಡೆಗಟ್ಟಲು ಪ್ರತಿದಿನ ಮನೆಯಲ್ಲಿ ಧೂಪ ಮತ್ತು ಕರ್ಪೂರವನ್ನು ಸುಡಬೇಕು.
ಮನೆಯ ಮಂದಿರ ಸರಿಯಾದ ದಿಕ್ಕಿನಲ್ಲಿರಲಿ: ಮನೆಯೊಳಗಿನ ದೇವಾಲಯವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಮತ್ತು ಅಲ್ಲಿ ದೈನಂದಿನ ಪೂಜೆಯನ್ನು ಮಾಡಿ.
ದೇವಾಲಯದ ನೆರಳನ್ನು ತಪ್ಪಿಸಿ: ದೇವಾಲಯದ ನೆರಳು ನಿಮ್ಮ ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ, ನೀವು ಗಡಿ ಗೋಡೆಯನ್ನು ಎತ್ತರಿಸಬಹುದು.