Vastu Tips: ಒಡೆದ ಗಾಜು ಅಪಾಯದ ಮುನ್ಸೂಚನೆ, ಹೀಗೆ ಮಾಡಿ..

By Suvarna NewsFirst Published Jun 17, 2022, 5:23 PM IST
Highlights

ಕನ್ನಡಿ ಬಹುತೇಕ ಎಲ್ಲ ಮನೆಗಳಲ್ಲಿ ಇರುತ್ತದೆ. ಆದರೆ ಅದನ್ನು ಮನೆಯ ಗೋಡೆಯ ಮೇಲೆ ಹಾಕಲು ಕೆಲವು ಪ್ರಮುಖ ವಾಸ್ತು ನಿಯಮಗಳಿವೆ ಎಂದು ನಿಮಗೆ ತಿಳಿದಿದೆಯೇ? ಅದರಲ್ಲೂ ಒಡೆದ ಕನ್ನಡಿ ಇಲ್ಲವೇ ಗಾಜು ವಾಸ್ತು ದೋಷದ ಸೂಚನೆ. ಒಡೆದ ಗಾಜು ಮತ್ತು ಕನ್ನಡಿಗಳಿಗೆ ಸಂಬಂಧಿಸಿದ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದಿರಬೇಕು. 

ಪಂಚತತ್ತ್ವದ ಆಧಾರದ ಮೇಲೆ ವಾಸ್ತು ಶಾಸ್ತ್ರ(Vastu Shastra)ದಲ್ಲಿ, ಮನೆಗೆ ಸಂಬಂಧಿಸಿದ ಎಲ್ಲದಕ್ಕೂ ಸರಿಯಾದ ನಿರ್ದೇಶನ ಮತ್ತು ಅಗತ್ಯ ನಿಯಮಗಳನ್ನು ನೀಡಲಾಗಿದೆ. ಅದನ್ನು ಅನುಸರಿಸಿದರೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ(luck) ಹೆಚ್ಚಾಗುತ್ತದೆ. ಮನೆಯ ಗೋಡೆಯ ಮೇಲೆ ಬಳಸುವ ಕನ್ನಡಿ(mirrors) ಅಥವಾ ಕಿಟಕಿಗಳಲ್ಲಿ ಬಳಸುವ ಗಾಜು ಇತ್ಯಾದಿಗಳು ಕೂಡಾ ವಾಸ್ತುವಿನಲ್ಲಿ ವಿಶೇಷ ಪಾತ್ರ ಹೊಂದಿವೆ. ಅವುಗಳನ್ನು ವಾಸ್ತು ಪ್ರಕಾರ ಇಡದಿದ್ದರೆ ಅಥವಾ ಆಕಸ್ಮಿಕವಾಗಿ ಒಡೆದರೆ ಉಂಟಾಗುವ ಶುಭ ಮತ್ತು ಅಶುಭ ಫಲಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ನಿಮ್ಮ ಮನೆಯ ಯಾವ ಮೂಲೆಯಲ್ಲಿ ಕನ್ನಡಿಯು ಶುಭಫಲಗಳನ್ನು ನೀಡುತ್ತದೆ ಮತ್ತು ಅದು ಒಡೆದರೆ ದೋಷವನ್ನು ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ನೋಡೋಣ.

ಮುರಿದ ಕನ್ನಡಿಗಳು(Broken mirrors) ಯಾವಾಗಲೂ ದುರದೃಷ್ಟಕರವೆಂದು ಪರಿಗಣಿಸಲಾಗಿದೆ. ಅವು ನಕಾರಾತ್ಮಕ ಶಕ್ತಿಯ ಕೇಂದ್ರಬಿಂದುಗಳಾಗಿ ಬಿಡುತ್ತವೆ. ಒಡೆದ ವಸ್ತುಗಳನ್ನು (ಕನ್ನಡಿಗಳು, ಪಾತ್ರೆಗಳು ಇತ್ಯಾದಿ) ಇಟ್ಟುಕೊಳ್ಳುವುದು ಮಾನಸಿಕ ಒತ್ತಡ(mental stress)ಕ್ಕೂ ಕಾರಣವಾಗುತ್ತದೆ. ಅವು ನಿಮ್ಮ ಮಗುವಿನ ಅಧ್ಯಯನದಲ್ಲಿ ಅಡಚಣೆಯಾಗಿ ಕಾರ್ಯ ನಿರ್ವಹಿಸುತ್ತವೆ, ಕೆಲಸವನ್ನು ವಿಳಂಬಗೊಳಿಸುತ್ತವೆ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹೀಗಾಗಿ, ಒಡೆದ ಗಾಜಿನ ವಿಚಾರವಾಗಿ ಈ ವಿಷಯ ನೆನಪಿಡಿ.
 
1. ನಿಮ್ಮ ವಾಹನವು ಒಡೆದಿರುವ ವಿಂಡ್ ಶೀಲ್ಡ್/ಕಿಟಕಿಯನ್ನು ಹೊಂದಿದ್ದರೆ, ತಕ್ಷಣವೇ ಅದನ್ನು ಬದಲಾಯಿಸಿ. ಏಕೆಂದರೆ ಅದರಿಂದ ಅಪಘಾತಗಳು(accidents) ಹೆಚ್ಚಬಹುದು. ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚಕ್ಕೆ ಕಾರಣವಾಗಬಹುದು.

2. ಒಡೆದ ಕನ್ನಡಿಯಲ್ಲಿ ನಿಮ್ಮನ್ನು ಎಂದಿಗೂ ನೋಡಿಕೊಳ್ಳಬೇಡಿ; ಈ ಕ್ರಿಯೆಯು ಮುಂಬರುವ ಸಮಸ್ಯೆಯನ್ನು ಸಂಕೇತಿಸುತ್ತದೆ.

ಹರಿದ ಲಕ್ಕಿ ಪರ್ಸನ್ನು ಈ ರೀತಿ ಬಳಸಿದ್ರೆ, ಹಣ ಎಂದಿಗೂ ಖಾಲಿಯಾಗೋದಿಲ್ಲ!!

3. ಕನ್ನಡಿಯು ನಿಮ್ಮ ಸಂಪೂರ್ಣ ಮುಖ ಅಥವಾ ತಲೆಯನ್ನು ಪ್ರತಿಬಿಂಬಿಸುವ ಗಾತ್ರವನ್ನು ಹೊಂದಿರಬೇಕು, ಇಲ್ಲದಿದ್ದರೆ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ.

4. ನಿಖರವಾದ ಮತ್ತು ಸರಿಯಾದ ಪ್ರತಿಫಲನಗಳನ್ನು ತೋರಿಸದ ಕನ್ನಡಿಗಳನ್ನು ಬದಲಾಯಿಸಿ. ಉದಾಹರಣೆಗೆ, ನಿಮ್ಮ ಮುಖವು ತೆಳ್ಳಗೆ/ಕೊಬ್ಬು/ವಿರೂಪಗೊಂಡಂತೆ ಕಂಡುಬಂದರೆ ಅಥವಾ ನೆಲದ ಮಟ್ಟವು ಸಮತಟ್ಟಾಗಿ ಕಾಣಿಸದಿದ್ದರೆ, ಕನ್ನಡಿಯನ್ನು ಬದಲಾಯಿಸಲೇಬೇಕು.

5. ಕಿಟಕಿಯ ಫಲಕವು ಇದ್ದಕ್ಕಿದ್ದಂತೆ ಮುರಿದರೆ ಅಥವಾ ಬಿರುಕು ಬಿಟ್ಟರೆ, ಅದು ಮುಂಬರುವ ಸಮಸ್ಯೆಯನ್ನು ಸೂಚಿಸುತ್ತದೆ. ಹಾಗೆಯೇ ಪಾತ್ರೆಗಳನ್ನು ಒಡೆಯುವುದು ಕೂಡಾ ಮಾನಸಿಕ ಒತ್ತಡವನ್ನು ಸೂಚಿಸುತ್ತದೆ. ಕೂಡಲೇ ಅವನ್ನು ಎಸೆಯಬೇಕು ಇಲ್ಲವೇ ಸರಿ ಪಡಿಸಬೇಕು.

6. ಕೆಲಸದ ಸ್ಥಳದಲ್ಲಿ ಒಡೆದ ಗಾಜು ಇದ್ದರೆ ಕೆಲಸದಲ್ಲಿ ವಿಳಂಬ, ವ್ಯಾಪಾರದಲ್ಲಿ ನಷ್ಟ ಮತ್ತು ಗ್ರಾಹಕರ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಗಾಜನ್ನು ತಕ್ಷಣ ಬದಲಾಯಿಸಿ. ನೀವು ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಬಿಳಿ ಟೇಪ್ ಸಹಾಯದಿಂದ ಅದನ್ನು ತಾತ್ಕಾಲಿಕವಾಗಿ ಸರಿಪಡಿಸಿ.

7. ವಾಸ್ತು ಪ್ರಕಾರ, ಮನೆಯಲ್ಲಿ ಯಾವುದೇ ಗಾಜು ಒಡೆದರೆ, ಅದನ್ನು ತಕ್ಷಣವೇ ಮನೆಯಿಂದ ಹೊರಗೆ ಎಸೆಯಬೇಕು, ಅದನ್ನು ಎಂದಿಗೂ ಮನೆಯಲ್ಲಿ ಸಂಗ್ರಹಿಸಬಾರದು. ವಾಸ್ತುವಿನಲ್ಲಿ, ಒಡೆದ ಗಾಜನ್ನು ಪ್ರಮುಖ ದೋಷವೆಂದು ಪರಿಗಣಿಸಲಾಗುತ್ತದೆ.

ಪ್ರತಿ ದಿನ ಸೂರ್ಯದೇವನಿಗೆ ಅರ್ಘ್ಯ ಸಲ್ಲಿಸಿದ್ರೆ ಸಿಗೋ ಲಾಭ ಒಂದೆರಡಲ್ಲ..

8. ಮನೆಯಲ್ಲಿ ಅಳವಡಿಸಿರುವ ಗಾಜು ಅಥವಾ ಕನ್ನಡಿ ಆಕಸ್ಮಿಕವಾಗಿ ಒಡೆದರೆ, ಮನೆಯೊಳಗೆ ಬರುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಅಂದರೆ, ಬರಲಿರುವ ಆಪತ್ತನ್ನು ಕನ್ನಡಿ ಕೈಗೆತ್ತಿಕೊಂಡಿತು ಎಂದರ್ಥ. ಕನ್ನಡಿಯಿಂದ ಈ ಸಂಕೇತವನ್ನು ಪಡೆದ ನಂತರ, ಉದ್ಯಾನದಲ್ಲಿ ನಿರ್ಮಿಸಲಾದ ಕೊಳದಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಬೇಕು. ಹೀಗೆ ಮಾಡುವುದರಿಂದ ಒಡೆದ ಗಾಜು ಅಥವಾ ಮುಂಬರುವ ವಿಪತ್ತುಗಳಿಗೆ ಸಂಬಂಧಿಸಿದ ದೋಷಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಜೊತೆಗೆ, ಕನ್ನಡಿಯನ್ನು ಬಿಸಾಡಿ, ಹೊಸ ಕನ್ನಡಿ ತರಬೇಕು.

click me!