ಕಿಲಾಡಿ ಅಜ್ಜಿ ಹೇಳಿದ ಸುಳ್ಳು ವರ್ಕ್​ಔಟ್​ ಆಗತ್ತಾ? ಅಸಲಿಯತ್ತು ಗೊತ್ತಾಗಿ ಫಸ್ಟ್​ ನೈಟ್​ ಠುಸ್​ ಆಗುತ್ತಾ?

Published : Jun 04, 2024, 12:13 PM IST
ಕಿಲಾಡಿ ಅಜ್ಜಿ ಹೇಳಿದ ಸುಳ್ಳು ವರ್ಕ್​ಔಟ್​ ಆಗತ್ತಾ? ಅಸಲಿಯತ್ತು ಗೊತ್ತಾಗಿ ಫಸ್ಟ್​ ನೈಟ್​ ಠುಸ್​ ಆಗುತ್ತಾ?

ಸಾರಾಂಶ

ಗೌತಮ್​  ಮತ್ತು ಭೂಮಿಕಾ ಫಸ್ಟ್​ ನೈಟ್​ಗೆ ಅಜ್ಜಿ ಮುಹೂರ್ತ ಫಿಕ್ಸ್ ಮಾಡಿಯಾಗಿದೆ. ಇಬ್ಬರೂ ಇದಕ್ಕೆ ಸಮ್ಮತಿ ಸೂಚಿಸಿಯೂ ಆಗಿದೆ. ಮುಂದೆ?  

ಭೂಮಿಕಾ  ಮತ್ತು ಗೌತಮ್​ ಈ ಜನ್ಮದಲ್ಲಿ ಒಂದಾಗಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಗೊತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ದಂಪತಿಯಂತೆ ಬಾಳಲ್ಲ, ಇಬ್ಬರೂ ನಾಚಿಕೆಯಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದಾರೆ ಎಂದು ತಿಳಿದಿದೆ. ಇದೇ ಕಾರಣಕ್ಕೆ ಅಜ್ಜಿ ಇಬ್ಬರನ್ನೂ ಹನಿಮೂನ್​ಗೆ ಕಳಿಸಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಭೂಮಿಕಾಳ ಕೊಲೆ ಮಾಡಲು ಶಕುಂತಲಾ ದೇವಿ ಸಂಚು ಹೂಡಿದ್ದಳು. ನಂತರ ಭೂಮಿಕಾ ಅಪಹರಣವಾಗಿತ್ತು. ಅವಳನ್ನು ಹುಡುಕಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ಹರಸಾಹಸ ಪಟ್ಟು ಗೌತಮ್​ ಉಳಿಸಿಕೊಂಡದ್ದು ಆಯಿತು. ಇನ್ನೆಲ್ಲಿಯ ಹನಿಮೂನ್​? ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯದ ಅರಿವಾಗಿ ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಲು ಪ್ಲ್ಯಾನ್​ ಮಾಡಿದಳು.

ಇದೇ ಕಾರಣಕ್ಕೆ  ಅಜ್ಜಿ ಮುಹೂರ್ತನೂ ಫಿಕ್ಸ್​ ಮಾಡಿಬಿಟ್ಟಿದ್ದಾಳೆ. ಈ ಮುಹೂರ್ತ ಯಾಕೆ ಎಂದು ಗೌತಮ್​ ಪ್ರಶ್ನಿಸಿದಾಗ ಅಜ್ಜಿ ನಿಮ್ಮಿಬ್ಬರ ಸೋಬಾನಕ್ಕೆ ಅಂದಿದ್ದಾಳೆ. ಗೌತಮ್​ಗೆ ಶಾಕ್​ ಆಗಿದೆ. ಇದೆಲ್ಲಾ ಯಾಕೆ ಎಂದಿದ್ದಾನೆ. ಆದರೆ ಅಜ್ಜಿ ಇದು ನಿಮಗಲ್ಲ, ನಿಮ್ಮಮ್ಮ ಶಕುಂತಲಾಗಾಗಿ. ಅವಳಿಗೋಸ್ಕರ ನೀವಿಬ್ಬರೂ ಒಂದಾಗಬೇಕು, ಇಲ್ಲದಿದ್ರೆ ಸತ್ತೇ ಹೋಗ್ತಾಳೆ ಅಂದಿದ್ದಾಳೆ. ಪಾಪ ಅವಳಿಗೇನು ಗೊತ್ತು, ಇವರಿಬ್ಬರು ಒಂದಾದರೆ ಅವಳು ಶಾಕ್​ನಿಂದ ಸಾಯಬಹುದು ಎಂದು. ಆದರೆ ಗೌತಮ್​ ಫಸ್ಟ್​ ನೈಟ್​ ಹಾಂ ಹೂಂ ಏನೂ ಹೇಳದೇ ಹೋಗಿದ್ದಾನೆ.

ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆ: ಶ್ರುತಿ ಹರಿಹರನ್​ ಓಪನ್​ ಮಾತು​...

ಕಿಲಾಡಿ ಅಜ್ಜಿ ಸುಮ್ಮನಾಗಲಿಲ್ಲ. ಭೂಮಿಕಾಳನ್ನು ಕರೆದಿದ್ದಾಳೆ.  ಆದರೆ ಗೌತಮ್​ ಇದಕ್ಕೆ ಒಪ್ಪಲ್ಲ ಎನ್ನುವುದು ಭೂಮಿಕಾಗೆ  ಗೊತ್ತು. ಕೊನೆಗೆ ಅಜ್ಜಿ ಸುಳ್ಳಿ ಹೇಳಿ, ಗೌತಮ್​ ಇದಕ್ಕೆ ಓಕೆ ಅಂದಿದ್ದಾನೆ ಎಂದ ಮೇಲೆ ಅವರು ಓಕೆ ಅಂದ್ರೆ ನನಗೂ ಓಕೆ ಎಂದಿದ್ದಾಳೆ. ಒಟ್ಟಿನಲ್ಲಿ ಇವರಿಬ್ಬರೂ ಸೋಬಾನ ಫಿಕ್ಸ್ ಆಗಿದೆ.  ಪ್ರೀತಿಯ ನಿವೇದನೆ ಮಾಡಿಕೊಳ್ಳಲಿಕ್ಕೇ ವರ್ಷವಾಗುತ್ತಾ ಬಂತು. ಇನ್ನು ಪತಿ-ಪತ್ನಿಯಂತೆ ಬಾಳಲು ಇನ್ನೆಷ್ಟು ಕಾಲ ಬೇಕೋ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದರು. ಒಟ್ಟಿನಲ್ಲಿ ಫಸ್ಟ್​ನೈಟ್​ ಫಿಕ್ಸೇ  ಆಗೋಗಿದೆ.  ಆದರೆ?
 
ಭೂಮಿಕಾ ಹಾಲು ತೆಗೆದುಕೊಂಡು ಫಸ್ಟ್​ ನೈಟ್​ ಕೋಣೆಗೆ ಹೋಗಿದ್ದಾಳೆ. ಗೌತಮ್​ ಹರಳೆಣ್ಣೆ ಕುಡಿದವರ ಥರ ಇದ್ದಾನೆ. ಕಿಲಾಡಿ ಆನಂದ್​, ಗೆದ್ದು ಬಾ ಗೆಳೆಯ ಎಂದು ಹೇಳಿ ಕಳಿಸಿದ್ದಾನೆ. ಭೂಮಿಕಾ ನಾಚುತ್ತಲೇ ಬಂದಿದ್ದಾನೆ. ಆದರೆ ನಿಜವಾಗಿಯೂ ಇವರ ಫಸ್ಟ್​ ನೈಟ್​ ಆಗುತ್ತಾ ಎನ್ನುವುದೇ ಅಭಿಮಾನಿಗಳಿಗೆ ಡೌಟ್​ ಶುರುವಾಗಿದೆ. ಮಾತುಕತೆಯಲ್ಲಿ ಫಸ್ಟ್​ ನೈಟ್​ಗೆ ನಾನು ಒಪ್ಪಲಿಲ್ಲ ನೀವೇ ಒಪ್ಪಿದ್ದು ಎಂದು ಅವನು, ನೀವು ಹೂಂ ಅಂದಿದ್ದಕ್ಕೆ ನಾನು ಹೂಂ ಅಂದಿದ್ದರು ಎಂದು ಇವಳು... ಹೀಗೆ ಇಬ್ಬರ ನಡುವೆ ಜಟಾಪಟಿಯಾಗಿ ಫಸ್ಟ್​ನೈಟ್​ ಠುಸ್​ ಆಗಿ ಹೋಗುತ್ತಾ ಎನ್ನುವ ಗುಮಾನಿಯಲ್ಲಿದ್ದಾರೆ ಅಭಿಮಾನಿಗಳು, ಏನಾಗುತ್ತೋ ಎಂದು ಕಾತರದಿಂದ ಕಾಯುತ್ತಿದ್ದಾರೆ. 

ಮದುವೆಗೂ ಮುನ್ನವೇ ಇದೇ ಮಗು ಬೇಕು ಎಂದಿದ್ದ ವರುಣ್​ ಧವನ್​: ಅಪ್ಪ-ಅಮ್ಮನಾದ ಸೆಲೆಬ್ರಿಟಿ ಸ್ಟಾರ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ವೈರಲ್​ ಮಾಡಿದ್ರಲ್ವಾ, ಈಗ ನಾವು ಹೇಳೋದನ್ನು ಕೇಳಿಸ್ಕೊಳ್ಳಿ: ಲೈವ್​ನಲ್ಲಿ ಗೀತಾಭಾರತಿ ಗರಂ
ಸಿನಿಮಾ ಹೀರೋ ಆದ ಗಿಲ್ಲಿ ನಟ, ಶ್ರೀಲೀಲಾ ಹೀರೋಯಿನ್; ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಜೂ.21ರಂದು ಮುಹೂರ್ತ!