ಮಹಿಳೆಯರು ವಾಷ್​ರೂಮ್​ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ

Published : Sep 07, 2023, 03:27 PM ISTUpdated : Sep 07, 2023, 03:43 PM IST
ಮಹಿಳೆಯರು ವಾಷ್​ರೂಮ್​ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ

ಸಾರಾಂಶ

ಮಹಿಳೆಯರು ಹೆಚ್ಚು ಹೊತ್ತು ವಾಷ್​ರೂಮ್​ನಲ್ಲಿ ಇರುವುದು ಏಕೆ? ಪುರುಷರನ್ನು ಸಾಮಾನ್ಯವಾಗಿ ಕಾಡುತ್ತಿರೋ ಈ ಪ್ರಶ್ನೆಗೆ ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಹೀಗೆ ಉತ್ತರಿಸಿದ್ದಾರೆ.   

ಪುರುಷರಿಗೆ ಹೋಲಿಸಿದರೆ ಮಹಿಳೆಯರು ರೆಡಿ ಆಗಲು ಲೇಟು, ವಾಷ್​ರೂಮ್​ಗೆ ಹೋದ್ರೆ ಅಲ್ಲೂ ಲೇಟು ಎಂದೆಲ್ಲಾ ಸಾಮಾನ್ಯವಾಗಿ ಆಡಿಕೊಳ್ಳುತ್ತಾರೆ. ಇಂದಿನ ಸ್ಥಿತಿ ಬದಲಾದರೂ ಈ ಮಾತು ಮಾತ್ರ ಇಂದಿಗೂ ಜನಜನಿತ. ಮಹಿಳೆಯರ ಮೇಕಪ್​ ಸಾಮಗ್ರಿಗಳಂತೆ ಪುರುಷರು ಮೇಕಪ್​  ಮಾಡಿಕೊಳ್ಳುವುದರಲ್ಲಿ ಹಿಂದಿಲ್ಲ.  ಕನ್ನಡಿ ಮುಂದೆ ನಿಂತರೆ ತಯಾರಾಗಲು ಕೆಲವು ಪುರುಷರು ಮಹಿಳೆಯರಿಗಿಂತಲೂ ಹೆಚ್ಚಿನ ಟೈಂ ತೆಗೆದುಕೊಳ್ಳುವುದು ಇದೆ. ಅದೇನೆ ಇದ್ದರೂ ಪುರುಷರು ಇಂದಿಗೂ ಹೇಳುವ ಮಾತು ಒಂದೇ. ರೆಡಿಯಾಗಲು ಮಹಿಳೆಯರು ಲೇಟು ಎನ್ನುವುದು. ಇದು ಸುಳ್ಳಾದರೂ ಕೆಲವೊಂದು ವೇಳೆ ಈ ಮಾತು ನಿಜವಾಗುವುದೂ ಇದೆ. ಅದರಲ್ಲಿಯೂ ವಾಷ್​ರೂಮ್​ಗೆ ಹೋದಾಗಲೂ ಮಹಿಳೆಯರು ಲೇಟು ಮಾಡುವುದು ಏಕೆ, ಅಲ್ಲಿ ಹೆಚ್ಚು ಹೊತ್ತು ಇರುವುದು ಯಾಕೆ ಎಂದೂ ಕೆಲವರಿಗೆ ಅನ್ನಿಸುವುದು ಉಂಟು. ಇದಕ್ಕೆ ಸತ್ಯ ಸೀರಿಯಲ್​ ಕೀರ್ತನಾ (Keerthana) ರೀಲ್ಸ್​ ಮಾಡಿ ಇದಕ್ಕೆ ಕಾರಣ ತಿಳಿಸಿದ್ದಾರೆ.

ಅಂದಹಾಗೆ ಕೀರ್ತನಾ ಎಂದೇ ಫೇಮಸ್​ ಆಗಿರೋ ನಟಿ, ಅನು ಜನಾರ್ದನ (Anu Janardhana). ಇವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ದಿನನಿತ್ಯವೂ ಚಿಕ್ಕ ಚಿಕ್ಕ ರೀಲ್ಸ್​ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ.   ಇದೀಗ ಅವರು ವಾಷ್​ರೂಮ್​ನಲ್ಲಿ ಮಹಿಳೆಯರು ಏಕೆ ಹೆಚ್ಚು ಹೊತ್ತು ಇರುತ್ತಾರೆ ಎಂದು ಪುರುಷರು ಕೇಳುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದಕ್ಕೆ ಕಾರಣ ನೀಡಿರೋ ನಟಿ, ವಾಷ್​ರೂಮ್​ನಲ್ಲಿ ಲೈಟಿಂಗ್​ ತುಂಬಾ ಅನುಕೂಲವಾಗಿರುತ್ತದೆ. ಇಲ್ಲಿ ಇರಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.  ಅಂದಹಾಗೆ ನಟಿಯರು ಸದಾ ಶೂಟಿಂಗ್​ನಲ್ಲಿ ಪ್ರಖರ ಲೈಟ್​ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಹಿತವಾದ ಲೈಟ್​ ಅವರಿಗೆ ಬೇಕಾಗುತ್ತದೆ. ಇಂಥದ್ದೊಂದು ಅನುಕೂಲ ಕಲ್ಪಿಸುವುದು ವಾಷ್​ರೂಮ್​ನಲ್ಲಿ ಮಾತ್ರ ಸಾಧ್ಯ ಎನ್ನುವುದು ಅವರ ಮಾತು. ಇದು ನಟಿಯರ ಮಾತಾಯಿತು. ಸಾಮಾನ್ಯ ಮಹಿಳೆಯರಿಗೆ ವಾಷ್​ರೂಮ್​ ಚೆನ್ನಾಗಿದ್ದರೆ,  ಅಲ್ಲಿಯ ಕನ್ನಡಿ ಮುಂದೆ ನಿಂತರೆ  ಟೈಂ ಆಗಿದ್ದೇ ತಿಳಿಯುವುದಿಲ್ಲ. ಇದಕ್ಕೆ ನಟಿಯರೂ ಹೊರತಾಗಿಲ್ಲ. ಅದಕ್ಕಾಗಿಯೇ ಅಲ್ಲಿ ಹೆಚ್ಚು ಹೊತ್ತು ಇರುವುದು ಎಂದು ಹಲವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ. 

'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್​ 'ಕೀರ್ತನಾ'!

ಅಂದಹಾಗೆ, ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿಯಲ್ಲಿ ಕೀರ್ತನಾ ವಿಲನ್​ ಪಾತ್ರಧಾರಿ.  ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ.  ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವುದು ಈಕೆಯ ಕೆಲಸ.


 ಭಾರತನಾಟ್ಯ ಕಲಾವಿದೆಯೂ ಆಗಿರುವ ಅನು ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ  ಆಸಕ್ತಿ.  ಶ್ರೀ ವಿಷ್ಣು, ಜೈ ಹನುಮಾನ್​ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಳಿಕ 'ರಂಗನಾಯಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಅನು,  ಬ್ರಹ್ಮಗಂಟ, ಅಮ್ನೋರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸತ್ಯ ಅವರಿಗೆ ಸಕತ್​ ಹೆಸರು ತಂದುಕೊಟ್ಟಿದೆ. ಸತ್ಯ ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅನು ಬಳಕುವ ಬಳ್ಳಿಯಂತೆ ಇರುವುದನ್ನು ನೋಡಬಹುದು. ಆದರೆ ಅನು ಮೊದಲು ಹೀಗಿರಲಿಲ್ಲವಂತೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ತಾವು ದಪ್ಪ ಆಗಿದ್ದು, ಆಮೇಲೆ ಸಕತ್​ ಡಯಟ್​ ಮಾಡಿ ಒಂದು ವರ್ಷಗಳ ಸತತ ಪರಿಶ್ರಮದ ನಂತರ ತೆಳ್ಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮಿಡಲ್ ಕ್ಲಾಸಲ್ಲಿ ಮಗಳ ಮದುವೆ ಕನಸು, ಸಂಬಂಧದ ಬಾಂಡಿಂಗ್‌ ವ್ಯಾಖ್ಯಾನಿಸಿದ ಅಮೃತಧಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Annayya Serial: ಯಾರೂ ಊಹಿಸದ ಅದ್ಭುತವೊಂದು ನಡೀತು; ರಶ್ಮಿಗೆ ದಿಗ್ಭ್ರಮೆ; ಇದು ಹೊಸ ಪರ್ವದ ಸೂಚನೆಯೇ?
Karna Serial: ಅನ್ನವನ್ನು ಅವಮಾನಿಸಿದ್ದ ರಮೇಶ್ ಅಹಂಕಾರವನ್ನೇ ತುಳಿದ ಕರ್ಣ; ಶಿಳ್ಳೆ ಹೊಡೆದ ವೀಕ್ಷಕರು!