
ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಯಾರೂ ತೋರಿಸದ ವರ್ತನೆ ಚಕ್ರವರ್ತಿ ಚಂದ್ರಚೂಡ್ ತೋರಿಸಿದ್ದರು ಎಂದು ಮನೆಯಲ್ಲಿದ್ದ ಸದಸ್ಯರು, ವೀಕ್ಷಕರು ಹೇಳಿದರು ಆದರೆ ಹಿಂದಿನ ಎಪಿಡೋಸ್ ಒಂದರಲ್ಲಿ ಅರವಿಂದ್ ತೋರಿಸಿದ ಸನ್ನೆ ಮಾತ್ರ ಹೈಲೈಟ್ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹೌದು! ಗುಂಪಿನ ಆಟವೊಂದರಲ್ಲಿ ಎದುರಾಳಿ ತಂಡ ಎಸೆದ ಬಾಲನ್ನು ಹಿಡಿದುಕೊಂಡ ಅರವಿಂದ್ ಕೆಪಿ ಅವರಿಗೆ ಮಿಡಲ್ ಫಿಂಗರ್ ತೋರಿಸುತ್ತಾರೆ. ಈ ಸನ್ನಿಯನ್ನು ಆ ಎಪಿಸೋಡ್ ಪ್ರಸಾರವಾದಾಗಲೂ ತೋರಿಸಲಾಗಿದೆ ಆದರೆ ಕ್ಯಾಮೆರಾದಲ್ಲಿ ಅದನ್ನು ಹೈಲೈಟ್ ಮಾಡಿಲ್ಲ. ಒಬ್ಬರಿಗೆ ಒಂದು ನ್ಯಾಯ ಯಾಕೆ ಎಂದು ಟ್ರೋಲ್ ಪೇಜ್ಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರ ಹೋಗುವ ಮುನ್ನ ಚಕ್ರವರ್ತಿ ಚಂದ್ರಚೂಡ್ರನ್ನು ನೇರವಾಗಿ ನಾಮಿನೇಟ್ ಮಾಡಿದಕ್ಕೆ ಮಿಡಲ್ ಫಿಂಗರ್ ತೋರಿಸಿದ್ದನ್ನು ಕ್ಯಾಮೆರಾ ಝೂಮ್ ಮಾಡಿತ್ತು. ಆದರೆ ಈ ಘಟನೆಯನ್ನು ನಿರ್ಲಕ್ಷ್ಯ ಮಾಡಿದ್ದು ಯಾಕೆ? ಇದನ್ನು ಕೂಡ ಹೈಲೈಟ್ ಮಾಡಬಹುದಿತ್ತು. ನ್ಯಾಯದ ಪರವಾಗಿ ಮಾತನಾಡುವ ಸುದೀಪ್ ಇದನ್ನು ಪ್ರಶ್ನೆ ಮಾಡಲಿ ಎನ್ನುತ್ತಿದ್ದಾರೆ ನೆಟ್ಟಿಗರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.