ಕನ್ನಡ ಸೀರಿಯಲ್​ನಲ್ಲೇ ದಾಖಲೆ ಸೃಷ್ಟಿಸಿದ ಮುಕ್ತ ಮುಕ್ತ ಮತ್ತೆ ನೋಡುವ ಅವಕಾಶ- ಇಲ್ಲಿದೆ ಡಿಟೇಲ್ಸ್​

Published : Aug 16, 2024, 04:53 PM IST
ಕನ್ನಡ ಸೀರಿಯಲ್​ನಲ್ಲೇ ದಾಖಲೆ ಸೃಷ್ಟಿಸಿದ ಮುಕ್ತ ಮುಕ್ತ ಮತ್ತೆ ನೋಡುವ ಅವಕಾಶ- ಇಲ್ಲಿದೆ ಡಿಟೇಲ್ಸ್​

ಸಾರಾಂಶ

ಕನ್ನಡ ಸೀರಿಯಲ್​ನಲ್ಲೇ ದಾಖಲೆ ಸೃಷ್ಟಿಸಿದ ಟಿ.ಎನ್​.ಸೀತಾರಾಮ್​ ಅವರ ಮುಕ್ತ ಮುಕ್ತ ಧಾರಾವಾಹಿ ಮತ್ತೆ ನೋಡುವ ಅವಕಾಶ ಕಲ್ಪಿಸಲಾಗಿದೆ. ಇಲ್ಲಿದೆ ಡಿಟೇಲ್ಸ್​  

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ... ಕೇಳುತ್ತಿದ್ದಂತೆಯೇ 16 ವರ್ಷಗಳ ಹಿಂದೆ ಮನಸ್ಸು ಜಾರುತ್ತದೆ. 2008 ರಿಂದ 2013ರವರೆಗೆ  ಒಟ್ಟು 1,204 ಕಂತುಗಳಷ್ಟು ದೀರ್ಘವಾಗಿ ಮುಕ್ತ ಮುಕ್ತ ಸೀರಿಯಲ್​ ಈ-ಟಿವಿಯಲ್ಲಿ  ಪ್ರಸಾರ ಆಗಿತ್ತು. ಕನ್ನಡ ಸೀರಿಯಲ್​ ಮಟ್ಟಿಗೆ ಇದೊಂದು ದಾಖಲೆಯೇ. ಅದಕ್ಕೂ ಮುಂಚೆ ಬಂದ 'ಮುಕ್ತ' ಸೀರಿಯಲ್​ನ ಮುಂದುವರಿದ ಭಾಗದಂತೆ ಮೂಡಿಬಂದ 'ಮುಕ್ತಮುಕ್ತ' ರೂಪುಗೊಂಡಿತ್ತು. ಇದಕ್ಕೆ ಕಾರಣ, ಅದರಲ್ಲಿದ್ದ ವಾಸ್ತವಿಕ ಚಿತ್ರಣಗಳು. ನೀತಿಗೆಟ್ಟ ರಾಜಕಾರಣ, ಅಕ್ರಮ ಭೂ ಒತ್ತುವರಿ, ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ, ವಿಶೇಷ ಆರ್ಥಿಕ ವಲಯ, ರಾಜಕಾರಣಿ ಹಾಗೂ ಉದ್ಯಮಿಗಳ ಸಂಬಂಧ... ಹೀಗೆ ಹಲವು  ವಸ್ತುಗಳೇ ಈ ಕಥೆಯನ್ನು ಅಷ್ಟೂ ವರ್ಷ ಜನರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದದ್ದು.  

ಅದಕ್ಕಿಂತಲೂ ಹೆಚ್ಚಾಗಿ, ಟಿ.ಎನ್​.ಸೀತಾರಾಮ್​ ಅವರ ಕೋರ್ಟ್​ ದೃಶ್ಯಗಳು ಈ ಸೀರಿಯಲ್​ಗೆ ಮತ್ತಷ್ಟು ಕಳೆಕೊಟ್ಟಿದ್ದಂತೂ ಸುಳ್ಳಲ್ಲ. ಹಾಗೆ ನೋಡಿದರೆ ಸೀತಾರಾಮ್​ ಅವರ ಸೀರಿಯಲ್​ಗಳಲ್ಲಿ ಕೋರ್ಟ್​ ದೃಶ್ಯಗಳು ಸರ್ವೇ ಸಾಮಾನ್ಯ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಇದೊಂದು ಮಾರ್ಗವೂ ಹೌದು. ಆದರೂ ಕೊನೆಯವರೆಗೂ ಸೀರಿಯಲ್​ ಕುತೂಹಲ ಇಟ್ಟುಕೊಂಡು ಅಪಾರ ಪ್ರೇಕ್ಷಕರ ವರ್ಗವನ್ನು ಪಡೆದಿತ್ತು. 2008ರಿಂದ ಆರಂಭವಾದ ಸೀರಿಯಲ್​ 2013ರಲ್ಲಿ ಮುಕ್ತಾಯಗೊಂಡಿತ್ತು.  ಸಿ.ಎಸ್​.ಪಿ ಪಾತ್ರದಲ್ಲಿ ಖುದ್ದು ಟಿ.ಎನ್​ ಸೀತಾರಾಮ್ ಸೇರಿದಂತೆ ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಇತರ ಪಾತ್ರವರ್ಗಗಳು ಸೀರಿಯಲ್​ ಪ್ರೇಮಿಗಳಲ್ಲಿ ಇಂದಿಗೂ ಹಚ್ಚ ಹಸಿರೇ.

ಡಾಕ್ಟರ್​ ಹೆಸರು ಕೇಳ್ತಿದ್ದಂತೆಯೇ ಕೈಕೊಯ್ದುಕೊಂಡ ಸೀತಾ! ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಯ ಗುಟ್ಟು ರಟ್ಟು?
 
ಈ ಸೀರಿಯಲ್​ ನೋಡದ ಇಂದಿನವರಿಗೆ ಅದನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ಕಲ್ಪಿಸಿದ್ದಾರೆ ನಿರ್ದೇಶಕ ಟಿ.ಎನ್​.ಸೀತಾರಾಮ್​ ಅವರು. ಈ ಧಾರಾವಾಹಿಯನ್ನು ಮತ್ತೊಮ್ಮೆ ನೋಡುವ ಆಸೆ ವ್ಯಕ್ತಪಡಿಸಿ ಹಲವಾರು ಮಂದಿ ಅವರಲ್ಲಿ ಕೇಳಿಕೊಂಡಿದ್ದರು. ಆದ್ದರಿಂದ ಅವರ ಮನವಿಗೆ ಸೀತಾರಾಮ್​ ಅವರು ಸ್ಪಂದಿಸಿದ್ದಾರೆ. ಈ ಸೀರಿಯಲ್​ ಪ್ರಸಾರ ಆಗುತ್ತಿದ್ದ ಸಂದರ್ಭದಲ್ಲಿ ಡಿಜಿಟಲ್​ ಮೀಡಿಯಾ ಇಷ್ಟೊಂದು ಆ್ಯಕ್ಟೀವ್​ ಇರದ ಹಿನ್ನೆಲೆಯಲ್ಲಿ ಸೀರಿಯಲ್​ ರೆಕಾರ್ಡಿಂಗ್​ ಸಮಸ್ಯೆಗಳು ಸೆರಿದಂತೆ ತಾಂತ್ರಿಕ ಸಮಸ್ಯೆಗಳು ಇದ್ದವು. ಆದ್ದರಿಂದ ಇದರ ಪ್ರಸಾರಕ್ಕೆ ವಿಳಂಬ ಆಯಿತು ಎನ್ನುತ್ತಲೇ ಸೀರಿಯಲ್​ ಮರುಪ್ರಸಾರದ ಅಪ್​ಡೇಟ್​ ನೀಡಿದ್ದಾರೆ ಟಿ.ಎನ್​.ಸೀತಾರಾಮ್​ ಅವರು.

ಅಂದಹಾಗೆ ಈ ಸೀರಿಯಲ್​ ಯೂಟ್ಯೂಬ್​ನಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್​ 29ರಿಂದ ಗುರುವಾರ, ಶುಕ್ರವಾರ ಪ್ರತಿವಾರ ಎರಡು ಕಂತುಗಳಲ್ಲಿ ಸೀರಿಯಲ್​ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ತಮ್ಮ ತಂಡದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎನ್ನುತ್ತಲೇ ಇದನ್ನು ವೀಕ್ಷಿಸುವಂತೆ ಟಿ.ಎನ್​.ಸೀತಾರಾಮ್​ ಅವರು ತಿಳಿಸಿದ್ದಾರೆ.  
 

ಸತ್ಯ+ ಪಾರು= ಬ್ರಹ್ಮಗಂಟು! ಹಳಸಲು ಕಥೆಯನ್ನೇ ಎಷ್ಟಂತ ಕೊಡ್ತೀರಾ? ಸ್ಟೋರಿನೇ ಸಿಗಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​