ಇಬ್ರನ್ನೂ ಬೇಗ ಒಂದ್ಮಾಡಿ ಎಂದು ಗೋಳಾಡ್ತಿದ್ದವರೇ ಈಗ ಸೀರಿಯಲ್​ ಬೋರ್​ ಆಗ್ತಿದೆ ಅಂತಿದ್ದಾರಲ್ಲಪ್ಪ!

Published : Jun 12, 2024, 05:12 PM IST
ಇಬ್ರನ್ನೂ ಬೇಗ ಒಂದ್ಮಾಡಿ ಎಂದು ಗೋಳಾಡ್ತಿದ್ದವರೇ ಈಗ ಸೀರಿಯಲ್​ ಬೋರ್​ ಆಗ್ತಿದೆ ಅಂತಿದ್ದಾರಲ್ಲಪ್ಪ!

ಸಾರಾಂಶ

ಸೀರಿಯಲ್​ಗಳಲ್ಲಿ ನಾಯಕ-ನಾಯಕಿಯನ್ನು ಒಂದು ಮಾಡಿ ಎಂದು ದಿನನಿತ್ಯ ಕಮೆಂಟ್​ ಹಾಕುತ್ತಿದ್ದವರು ಅವರು ಒಂದಾದ ಮೇಲೆ ಇನ್ನೂ ತೃಪ್ತರಾಗ್ತಿಲ್ಲ. ಏನಾಗ್ತಿದೆ ಸೋಷಿಯಲ್​  ಮೀಡಿಯಾದಲ್ಲಿ?  

'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...' ಎಂಬ ಗೋಪಾಲ ಕೃಷ್ಣ ಅಡಿಗರ ಮಾತು ಪ್ರತಿ ಕ್ಷಣದಲ್ಲಿಯೂ ಮನುಷ್ಯನ ಸ್ವಭಾವವನ್ನು ತೋರಿಸುತ್ತದೆ.  ಮನುಷ್ಯ ಎಷ್ಟು ಅತೃಪ್ತ ಎಂದು ಹೇಳುವ ಈ ಸಾಲುಗಳು ಅದೆಷ್ಟು ನಿಜ ಅಲ್ಲವೆ? ಏನೇ ಇದ್ದರೂ, ಬೇಕೆಂದಿದ್ದೆಲ್ಲಾ ಸಿಕ್ಕರೂ ಅದು ಸಿಕ್ಕರೆ ಎಷ್ಟು ಚೆನ್ನಾಗಿತ್ತು, ಅದೊಂದು ಇಲ್ಲ, ಅವರಿಗೆ ಸಿಕ್ಕಿಬಿಟ್ಟಿತು-ನಮಗೆ ಸಿಕ್ಕಿಲ್ಲ... ಹೀಗೆ ದಿನನಿತ್ಯವೂ ಕೊರಗುವ ದೊಡ್ಡ ವರ್ಗವೇ ಇದೆ. ಅದು ಬೇಕೆಂದಾಗ ಅದು ಸಿಕ್ಕರೂ, ಇಲ್ಲದೇ ಇರುವ ಕಡೆ ಮನಸ್ಸು ಹೋಗಿ ಮತ್ತೆ ಕೊರಗುವುದು ಬಹುತೇಕ ಮಂದಿಯ ನಿತ್ಯದ ಬದುಕೇ ಆಗಿದೆ. ಈ ಮಾತು ಸೀರಿಯಲ್​ಗಳಿಗೂ ಅನ್ವಯ ಆಗುತ್ತಿದೆ.

ಸೀರಿಯಲ್​ಗಳು ಎಂದರೆ ಸಾಮಾನ್ಯವಾಗಿ 2-3 ವರ್ಷ ಇದ್ದೇ ಇರುತ್ತದೆ. ಒಂದಿಷ್ಟು ಗಂಟೆಗಳಲ್ಲಿ ಹೇಳಬೇಕಾದ ಕಥೆಯನ್ನು 2-3 ವರ್ಷ ಕೆಲವೊಮ್ಮೆ 8-10 ವರ್ಷ ಎಳೆಯುವುದೇ ಸೀರಿಯಲ್​ಗಳು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದರಲ್ಲಿಯೂ ಟಿಆರ್​ಪಿ ಹೆಚ್ಚಾಗುತ್ತಿದ್ದಂತೆಯೇ ಜಾಹೀರಾತುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಸಹಜವಾಗಿ ಸೀರಿಯಲ್​ಗಳನ್ನೂ ಎಳೆಯುವುದು ಅನಿವಾರ್ಯವಾಗುತ್ತದೆ. ಇದರಿಂದಲೇ ಆರಂಭದಲ್ಲಿ ಸ್ವಾರಸ್ಯದಿಂದ ಕೂಡಿರುವ ಬಹುತೇಕ ಧಾರಾವಾಹಿಗಳು ಬರುಬರುತ್ತಾ ತೀರಾ ಸಪ್ಪೆ ಅನ್ನಿಸುವುದು ಉಂಟು, ಕೆಲವೊಮ್ಮೆ ಆರಂಭಕ್ಕೂ ಅಂತ್ಯಕ್ಕೂ ಸಂಬಂಧವೇ ಇರುವುದಿಲ್ಲ. ಇದೀಗ ಸೋಷಿಯಲ್​ ಮೀಡಿಯಾ ತುಂಬಾ ಸ್ಟ್ರಾಂಗ್​ ಆಗಿರುವ ದಿನಗಳಲ್ಲಿ, ಸೀರಿಯಲ್​ಗಳ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಕಮೆಂಟ್​ಗಳ ಸುರಿಮಳೆಯಾಗುತ್ತದೆ.

ಅಮೃತಧಾರೆಗೆ 300: ಭೂಮಿಕಾ-ಗೌತಮ್​ ರೀಲ್​ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್​

ಕಲರ್ಸ್​ ಕನ್ನಡ, ಜೀ ಕನ್ನಡ ವಾಹಿನಿಗಳಲ್ಲಿ ಪ್ರಸಾರ ಆಗ್ತಿರೋ  ಹಲವು ಸೀರಿಯಲ್​ಗಳು ಮಹತ್ವದ ಘಟ್ಟ ತಲುಪಿದೆ. ಸೀತಾ ರಾಮ ಯಾವಾಗ ಒಂದಾಗ್ತಾರೆ ಎಂದು ಕಾಯುತ್ತಿದ್ದವರಿಗೆ ಸೀತಾ-ರಾಮ ಮದುವೆಯ ತನಕ ಬಂದಿದೆ. ಅಮೃತಧಾರೆಯಲ್ಲಿ ದಂಪತಿ ಯಾವಾಗ ದಾಂಪತ್ಯ ಜೀವನ ನಡೆಸುತ್ತಾರೆ ಎಂದು ಕಾದು ಕುಳಿತವರಿಗೆ ಗೌತಮ್​-ಭೂಮಿಕಾ ಲವ್​ಸ್ಟೋರಿ ಫಸ್ಟ್​ನೈಟ್​ ಮುಗಿಯವವರೆಗೂ ಬಂದಿದೆ. ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ-ಕಂಠಿ ಯಾವಾಗ ಒಬ್ಬರನ್ನೊಬ್ಬರು ದಂಪತಿಯಂತೆ ಪ್ರೀತಿಸ್ತಾರೆ ಎಂದು ಕಾಯುತ್ತಿದ್ದವರಿಗೆ ಆ ಸನ್ನಿವೇಶಗಳೂ ಮುಗಿದು ಹೋಗಿವೆ, ಮಾತ್ರವಲ್ಲದೇ ಹಾವು-ಮುಂಗುಸಿಯಂತಿದ್ದ ಸ್ನೇಹಾ ಮತ್ತು ಬಂಗಾರಮ್ಮನನ್ನು ಒಂದು ಮಾಡಿ ಎಂದು ಹೇಳುತ್ತಿದ್ದ ಪ್ರೇಕ್ಷಕರ ಆಸೆಯೂ ಈಡೇರಿದೆ. ಸತ್ಯ ಸೀರಿಯಲ್​ನಲ್ಲಿಯೂ ಅತ್ತೆ-ಸೊಸೆ ಒಂದಾಗಿದ್ದಾರೆ. ಇನ್ನು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಭಾಗ್ಯಳ ಗೋಳು ನೋಡಲಾಗ್ತಿಲ್ಲ, ತಾಂಡವ್​ ಹಿಂಸೆ ಸಾಕು ಮಾಡಿ ಎಂದೆಲ್ಲಾ ದಿನನಿತ್ಯವೂ ಸೋಷಿಯಲ್​  ಮೀಡಿಯಾಗಳಲ್ಲಿ ಬೈಯುವವರೇ ಹೆಚ್ಚಾಗಿದ್ದಾರೆ. ಈಗ ಒಂದು ಹಂತದಲ್ಲಿ ಭಾಗ್ಯಳಿಗೆ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕು ಸೀರಿಯಲ್​ನಲ್ಲಿ ಟ್ವಿಸ್ಟ್​ ಬಂದಿದೆ. ಇನ್ನೇನಿದ್ದರೂ ಭಾಗ್ಯ ಮತ್ತು ತಾಂಡವ್​ ಒಂದಾಗಬೇಕಷ್ಟೇ. ಇವೆಲ್ಲಾ ಸೀರಿಯಲ್​ ಪ್ರಿಯರು ಅಂದುಕೊಂಡದ್ದು ಮುಗಿದ ಮೇಲೆ ಸೀರಿಯಲ್​ಗಳಲ್ಲಿ ಇನ್ನೇನಿದೆ ಸ್ವಾರಸ್ಯ? ಸೀರಿಯಲ್​ಗಳಲ್ಲಿ ಇರಬೇಕಾದದ್ದೇ ನಾಯಕ-ನಾಯಕಿ ಒಂದಾಗುವುದು. ಅದು ಯಾವಾಗ ಎಂದು ಸೀರಿಯಲ್​ ಪ್ರಿಯರು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಯಾಗಿತ್ತು. 

ಇದೀಗ ಮೇಲೆ ತಿಳಿಸಿದ ಎಲ್ಲಾ ಸೀರಿಯಲ್​ಗಳಲ್ಲಿ ಇಬ್ಬರೂ ಒಂದಾದ ಮೇಲೆ ಸೀರಿಯಲ್​ಗಳು ಬೇರೆ ದಿಕ್ಕಿನತ್ತ ಸಾಗುತ್ತಿವೆ. ಈಗ ಪ್ರತಿಯೊಂದು ಸೀರಿಯಲ್​ಗಳ ಪ್ರೊಮೋ ಹಾಕಿದಾಗ ನೆಟ್ಟಿಗರು ಅಯ್ಯೋ ಈಗ ಸೀರಿಯಲ್​ ನೋಡಲು ತುಂಬಾ ಬೋರ್​ ಅನ್ನಿಸ್ತಾ ಇದೆ, ಬೇಗ ಮುಗಿಸಿ ಎಂದು ಒಂದೇ ಸಮನೆ ಗೋಳು ತೋಡಿಕೊಳ್ಳುತ್ತಿದ್ದಾರೆ. ಸುಖಾ ಸುಮ್ಮನೆ ಸೀರಿಯಲ್​ ಎಳೆಯಲಾಗುತ್ತಿದೆ. ಇಬ್ಬರೂ ಒಂದಾದ ಮೇಲೆ ಇನ್ನೇನಿದೆ, ಸೀರಿಯಲ್​ ಯಾಕೋ ಸಪ್ಪಗೆ ಅನ್ನಿಸ್ತಿದೆ, ಇದನ್ನು ನೋಡಲು ಆಗ್ತಿಲ್ಲ ಎಂಬೆಲ್ಲಾ ಕಮೆಂಟ್ಸ್​ಗಳು ದಿನನಿತ್ಯ ಮಾಮೂಲಾಗಿ ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಕೆಲವರು ನಿಮಗೆ ನೋಡಲು ಆಗಲ್ಲ ಎಂದರೆ ಯಾಕೆ ನೋಡ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ.  ಹೀಗೆ ಸೀರಿಯಲ್​ಗಳ ಕುರಿತು ಟೀಕೆ-ಟಿಪ್ಪಣೆ, ಪ್ರತಿಕ್ರಿಯೆ ತುಂಬಿ ಹೋಗುತ್ತಿದೆ. 

ಮನೋಕಾಮನೆ ಈಡೇರಬೇಕೆಂದರೆ 3,6,9ರ ಟಿಪ್ಸ್​ ಫಾಲೋ ಮಾಡಿ: ಸೀತಾರಾಮ ವೈಷ್ಣವಿ ಗೌಡ ಸಲಹೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು