
ಲೇಖಕ, ಪತ್ರಕರ್ತ ರವಿಬೆಳಗೆರೆ ಅವರ ಬಹು ಜನಪ್ರಿಯ ಪ್ರೇಮ ಕಾದಂಬರಿ ‘ಹೇಳಿ ಹೋಗು ಕಾರಣ’ ಶೀಘ್ರದಲ್ಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿಯಾಗಿ ಮೂಡಿ ಬರಲಿದೆ.
ಹಿಮವಂತ, ಪ್ರಾರ್ಥನಾ, ಊರ್ಮಿಳಾ ಪಾತ್ರಗಳ ತ್ರಿಕೋನ ಪ್ರೇಮದ ಕತೆಯುಳ್ಳ ಜನಪ್ರಿಯ ಕಾದಂಬರಿ ‘ಹೇಳಿ ಹೋಗು ಕಾರಣ’ ಕಾದಂಬರಿ ಆಧರಿಸಿದ ಧಾರಾವಾಹಿಯನ್ನು ಕೋರಮಂಗಲ ಅನಿಲ್ ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ಎಲೆಕೊಪ್ಪ ಛಾಯಾಗ್ರಾಹಣ ಮಾಡುತ್ತಿದ್ದು, ಚೇತನ್ ಆರ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ರಾಘವ ದ್ವಾರ್ಕಿ ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದಾರೆ.
ಈಗಾಗಲೇ ಸಕಲೇಶಪುರ, ಸಿಗಂದೂರು ಮುಂತಾದ ಕಡೆ ಈಗಾಗಲೇ ಚಿತ್ರೀಕರಣ ಆಗಿದೆ. ಹಸಿರು, ಮಳೆ, ಮಂಜು, ಹಿತವಾದ ಸಂಭಾಷಣೆಗಳೊಂದಿಗೆ ಧಾರಾವಾಹಿಯ ಪಾತ್ರಧಾರಿಗಳಾದ ಹಿಮವಂತ ಹಾಗೂ ಪ್ರಾರ್ಥನಾಳ ದೃಶ್ಯಗಳು ಮೂಡಿ ಬಂದಿರುವುದು ಪ್ರೋಮೋಗಳ ಹೈಲೈಟ್. ಸುರೇಂದ್ರನಾಥ್ ಸಂಗೀತ ನೀಡಿದ್ದಾರೆ.
ತಾರಾಗಣದಲ್ಲಿ ಹಿಮವಂತನ ಪಾತ್ರದಲ್ಲಿ ಸೂರಜ್, ಪ್ರಾರ್ಥನಾ ಪಾತ್ರದಲ್ಲಿ ರಕ್ಷಾ ನಟಿಸುತ್ತಿದ್ದಾರೆ. ಉಳಿದಂತೆ ಮೆರಿನಾ ತಾರಾ, ಸಿಂಧುಶ್ರೀ, ಲಕ್ಷ್ಮಣ್ ಮುಂತಾದವರು ನಟಿಸಿದ್ದಾರೆ. ಊರ್ಮಿಳಾ ಹಾಗೂ ದೇಬಶಿಶ್ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.