ಶಿವರಾಜ್ ಕುಮಾರ್ ಜೊತೆ 'ಅಮೃತಧಾರೆ' ಸೀರಿಯಲ್​ ಭೂಮಿಕಾ! ಏನಿದು ವಿಷ್ಯ?

Published : Oct 02, 2023, 02:42 PM ISTUpdated : Oct 02, 2023, 02:43 PM IST
ಶಿವರಾಜ್ ಕುಮಾರ್ ಜೊತೆ 'ಅಮೃತಧಾರೆ' ಸೀರಿಯಲ್​ ಭೂಮಿಕಾ! ಏನಿದು ವಿಷ್ಯ?

ಸಾರಾಂಶ

ಒಂದೇ ವೇದಿಕೆಯಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಮತ್ತು ಅಮೃತಧಾರೆ ಸೀರಿಯಲ್​ ಖ್ಯಾತಿಯ ಛಾಯಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಏನಿದು ಹೊಸ ವಿಷ್ಯ?  

ಭೂಮಿಕಾ (Bhoomika) ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರೋ ಛಾಯಾ ಸಿಂಗ್​ ಆಗಾಗ್ಗೆ ಕೆಲವೊಂದು ರೀಲ್ಸ್​ ಮಾಡುತ್ತಿರುತ್ತಾರೆ, ಕೆಲವೊಂದು ಮಾಹಿತಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರ ಜೊತೆಗೆ ಹೇಳಿರುವ ಡೈಲಾಗ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿ ಛಾಯಾ ಸಿಂಗ್​ ಬೆಳ್ಳಿ ಪರದೆಯ ಮೇಲೆ ಮತ್ತೆ ಎಂಟ್ರಿ ಕೊಡಲಿದ್ದಾರಾ ಎನ್ನುವ ಪ್ರಶ್ನೆ ಏಳುತ್ತಿದೆ. ಈ ಡೈಲಾಗ್​ ನೋಡಿದರೆ ಶಿವರಾಜ್​ ಕುಮಾರ್​ ಅವರ ತಂಗಿಯ ಪಾತ್ರದಲ್ಲಿ ಛಾಯಾ ನಟಿಸಿರುವುದು ತಿಳಿಯುತ್ತದೆ. ಹಾಗಿದ್ದರೆ ಇದೇನಿದು ಡೈಲಾಗ್​? ಇವರಿಬ್ಬರೂ ಅಣ್ಣತಂಗಿಯಾಗಿ ಹೊಸ ಸಿನಿಮಾದಲ್ಲಿ ಆ್ಯಕ್ಟ್​ ಮಾಡಲಿದ್ದಾರಾ ಎನ್ನುವ ಸಂಶಯ ಮೂಡುವುದು ಸಹಜ.

ಅಸಲಿಗೆ ಇದು ಹೊಸ ಸಿನಿಮಾದ ಅಪ್​ಡೇಟ್​ ಅಲ್ಲ. 2017ರಲ್ಲಿ ಬಿಡುಗಡೆಯಾಗಿದ್ದ ಮಫ್ತಿ ಚಿತ್ರದ ಡೈಲಾಗ್​, ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಪುನಃ ಆ ಚಿತ್ರದ ಡೈಲಾಗ್​ ಹೇಳಿದ್ದು, ಅದನ್ನೀಗ ಪುನಃ ಛಾಯಾ ಸಿಂಗ್​ ಶೇರ್​ ಮಾಡಿಕೊಂಡಿದ್ದಾರೆ. ಅದು ಸಕತ್​ ವೈರಲ್​ ಆಗುತ್ತಿದೆ.   ಅಂದಹಾಗೆ ಶಿವರಾಜ್ ಕುಮಾರ್ ಜೊತೆ ಛಾಯಾ ಸಿಂಗ್ ರೌಡಿ ಅಳಿಯ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ   ಸೂಪರ್ ಹಿಟ್ ಮಫ್ತಿ ಸಿನಿಮಾದಲ್ಲೂ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್ ಮಿಂಚಿದ್ದರು. ಅಣ್ಣ-ತಂಗಿಯ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು.  

GHOST: ಸಾಮಾನ್ಯವಾಗಿ ಯಾರ್​ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್​ ಪಂಚ್​

ಅಷ್ಟಕ್ಕೂ ಈ ಸಿನಿಮಾದಲ್ಲಿರುವ ಈ ಡೈಲಾಗ್​ನಲ್ಲಿ ಛಾಯಾ (Chaya Singh), ಅಣ್ಣಾ ನಿನ್ನ ಗಂಡ ಕೆಟ್ಟವನು, ಅದಕ್ಕೆ ಕೊಂದೆ ಅಂತ ಒಂದು ಮಾತನ್ನಾದರೂ ಹೇಳ್ಬೋದಿತ್ತಲ್ಲ ಅಣ್ಣ ಎನ್ನುತ್ತಾರೆ, ಅದಕ್ಕೆ ಶಿವರಾಜ್​ ಕುಮಾರ್​, ಹೇಗಂತ ಹೇಳಲಿ? ನಿನ್ನ ಗಂಡ ಕೆಟ್ಟವನು ಅಂತ ಹೇಳಿದ್ರೆ ನಿನ್ನ ಮನಸ್ಸು ಎಷ್ಟು ನೋವಾಗತ್ತೆ? ಅದಕ್ಕಿಂತ ನಿಮ್ಮಣ್ಣನೇ ಕೆಟ್ಟವನು ಎನ್ನುವುದು ಒಳ್ಳೆಯದು ಎನ್ನಿಸಿತು ಎನ್ನುತ್ತಾರೆ. ಆಗ ಛಾಯಾ ಅಣ್ಣನ ಪಾತ್ರಧಾರಿಯ ಕಾಲಿಗೆ ಬಿದ್ದು ಕಣ್ಣೀರು ಸುರಿಸುತ್ತಾಳೆ. ಮಫ್ತಿ ಚಿತ್ರದ ಈ ದೃಶ್ಯವನ್ನು ವೇದಿಕೆಯ ಮೇಲೆ ಮರುಸೃಷ್ಟಿ ಮಾಡಲಾಗಿತ್ತು. ಅದೀಗ ಪುನಃ ವೈರಲ್​ ಆಗಿದೆ. ಅಣ್ಣನ ಜೊತೆ ಕೆಲಸ ಮಾಡುವಾಗ ಗ್ಲಿಸರಿನ್ ಹಾಕಿಕೊಳ್ಳೋದು ಏನ್ ಇಲ್ಲ. ಭಾವನೆಗಳು ಹಾಗೆ ಬರುತ್ತೆ ಎಂದೂ ಅಂದು ಛಾಯಾ ಹೇಳಿದ್ದರು.

ಸದ್ಯ ಶಿವರಾಜ್​ ಕುಮಾರ್​ (Shivarajkumar) ಅವರು, ಘೋಸ್ಟ್​ ಚಿತ್ರದ ಬಿಜಿಯಲ್ಲಿದ್ದಾರೆ. ಇದರ ಟ್ರೇಲರ್​ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಿವರಾಜ್​ಕುಮಾರ್​ ಅವರ ಯಂಗ್​ ಮತ್ತು ಈಗಿನ ಲುಕ್​ ಫ್ಯಾನ್ಸ್​ಗಳನ್ನು ಮರುಳು ಮಾಡಿದೆ. ಟ್ರೇಲರ್​ನಲ್ಲಿ ಶಿವಣ್ಣನವರ ಸಖತ್ ಲುಕ್,  ಥ್ರಿಲ್ಲಿಂಗ್ ಆ್ಯಕ್ಷನ್ಸ್ ಹೈಲೈಟ್ ಆಗಿದ್ದು, ಪಂಚಿಂಗ್​ ಡೈಲಾಗ್​ ಇದೆ.  ಇವರ ಗ್ಯಾಂಗ್‌ಸ್ಟರ್‌ ಲುಕ್‌, ಖಡಕ್‌ ಡೈಲಾಗ್‌ಗಳು ಹೈಲೈಟ್​ ಆಗಿವೆ. ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಡಲ್ಲ. ಸಾಮ್ರಾಜ್ಯ ಧ್ವಂಸ ಮಾಡುವ ನನ್ನಂಥವರನ್ನು ಸಮಾಜ, ಇತಿಹಾಸ ಎಂದೂ ಮರೆತಿಲ್ಲ ಎನ್ನುವ ಮೂಲಕ ಶುರುವಾಗುವ ಟ್ರೇಲರ್​ನಲ್ಲಿ ಶಿವರಾಜ್​ ಕುಮಾರ್​ ಅವರು ದೆ ಕಾಲ್​ ಮಿ ಘೋಷ್ಟ್ ಎನ್ನುತ್ತಾರೆ.  ಕನ್ನಡ, ತೆಲುಗು, ತಮಿಳಿನಲ್ಲಿ ಘೋಸ್ಟ್‌ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ತೆಲುಗು ಟ್ರೈಲರ್‌ ಅನ್ನು ರಾಜಮೌಳಿ ಬಿಡುಗಡೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ‘ಘೋಸ್ಟ್​’ ಸಿನಿಮಾದ  ಒರಿಜಿನಲ್​ ಗ್ಯಾಂಗ್​ಸ್ಟರ್​ ಮ್ಯೂಸಿಕ್​ ರಿಲೀಸ್​ ಆಗಿತ್ತು. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿಸಲಾಗಿತ್ತು. ಈಗ ಟ್ರೇಲರ್​ ಅಬ್ಬರಿಸುತ್ತಿದೆ.  ಶಿವರಾಜ್​ಕುಮಾರ್​ ಅವರ ಗೆಟಪ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

'ನಾನು ನಂದಿನಿ' ಹಾಡಿಗೆ ಕುಣಿದ ಸಾರಾ ಅಣ್ಣಯ್ಯ, ಅಮೃತಧಾರೆ ಸೀರಿಯಲ್ ಟೀಂ ಜೊತೆ ರೀಲ್ಸ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್‌ ಶೆಟ್ಟಿಯ ಸುಂದರ Home Tour
Bhagyalakshmi ವೀಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸೀರಿಯಲ್ ತಂಡ! ಮತ್ತೊಬ್ಬ ‘ಅನುಪಮಾ’ ಆಗ್ತಾಳ ಭಾಗ್ಯ