ಸತ್ಯಳ ಅತ್ತೆ ಸೀತಂಗೆ ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆದ ಆಸಾಮಿ! ಮುಂದೇನಾಯ್ತು ನೋಡಿ...

Published : Dec 31, 2023, 04:41 PM IST
ಸತ್ಯಳ ಅತ್ತೆ ಸೀತಂಗೆ ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆದ ಆಸಾಮಿ! ಮುಂದೇನಾಯ್ತು ನೋಡಿ...

ಸಾರಾಂಶ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್​ 1 ಷೋನಲ್ಲಿ ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆಯುವ ಸೀನ್​ ಕ್ರಿಯೇಟ್​ ಮಾಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ...   

ಬಸ್​ಸ್ಟ್ಯಾಂಡ್​ನಲ್ಲಿ ನಿಂತಾಗ ಯಾರೋ ಬಂದು ಲೈನ್​ ಹೊಡೆಯುವುದು, ಇನ್ನಾರೋ ಬಂದು ಹೀರೋ ಆಗಿ ತಪ್ಪಿಸೋದು  ಇವೆಲ್ಲವೂ ಆಗ್ಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಬಸ್‌ಸ್ಟ್ಯಾಂಡ್‌ನಲ್ಲಿ ನಡೆಯೋ ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನ ನೀವು ಯಾವತ್ತೂ ನೋಡಿಲ್ಲ ಬಿಡಿ ಅಂತ ಶೀರ್ಷಿಕೆ ಕೊಟ್ಟು ಇದನ್ನೇ ಮರುರೂಪಿಸಿದೆ ಜೀ ಕನ್ನಡ ವಾಹಿನಿಯ ಜೋಡಿ ನಂ.1 ಕಾರ್ಯಕ್ರಮ. ಅಷ್ಟಕ್ಕೂ ಇಲ್ಲಿ ಲೈನ್​ ಹೊಡೆಸಿಕೊಳ್ಳುವವರು ಬೇರೆ ಯಾರೂ ಅಲ್ಲ, ಸತ್ಯ ಸೀರಿಯಲ್​ ಸತ್ಯನ ಅತ್ತೆ ಸಂಪ್ರದಾಯಸ್ಥ ಮಹಿಳೆ ಸೀತಾ ಅರ್ಥಾತ್​ ಮಾಲತಿ ಸರ್​ದೇಶ್​ಪಾಂಡೆ. ಈ ಬಾರಿ ಜೋಡಿ ನಂಬರ್​-1 ನಲ್ಲಿ ಸತ್ಯ ಸೀರಿಯಲ್​ನಲ್ಲಿ ಸೀತಾಳ ಮೈದುನ ಲಕ್ಷ್ಮಣ ಪಾತ್ರಧಾರಿ ಅಭಿಜಿತ್​ ಅವರೂ ಹಾಜರಿದ್ದು ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆಯುವ ದೃಶ್ಯವನ್ನು ಹಾಸ್ಯದ ರೂಪದಲ್ಲಿ ಬಿಂಬಿಸಲಾಗಿದೆ.

ಇದೇ ವೇದಿಕೆಯ ಮೇಲೆ ಅಭಿಜಿತ್​ ಅವರು ಮಾಲತಿ ಸರ್​ದೇಶಪಾಂಡೆ ಕುರಿತು ಮಾತನಾಡಿದ್ದಾರೆ. ಅವರು ತುಂಬಾ ದೊಡ್ಡ ಕಲಾವಿದೆ. ಇವತ್ತಿನವರೆಗೂ ಸೆಟ್​ನಲ್ಲಿ ಯಾರೊಬ್ಬರನ್ನೂ ನೋವು ಉಂಟು ಮಾಡಿಲ್ಲ. ಅವರನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ ಎಂದಿದ್ದರೆ, ಅಭಿಜಿತ್​ ಅವರನ್ನು ಹೊಗಳಿದ ಮಾಲತಿ ಅವರು, ಸರ್​ ಅವರನ್ನು ನೋಡಿಯೇ ನಾವು ಬೆಳೆದದ್ದು. ವಿಷ್ಣು ಸರ್​ ಜೊತೆ ಇವರ ಆ್ಯಕ್ಟಿಂಗ್​ ಅದನ್ನು ನೋಡಿ ಬೆಳೆದಿದ್ದೆ. ಇನ್ನೊಂದು ಚೂರು ಬೇಗ ಹುಟ್ಟಿದ್ದರೆ ಬಹುಶಃ ಎಲ್ಲರ ಜೊತೆ ಆ್ಯಕ್ಟ್​ ಮಾಡುತ್ತಿದ್ದೆ.  ಆದರೆ ಮಿಸ್​  ಮಾಡಿಕೊಂಡೆ ಎಂದರು. 

ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್​.. ಕಂಟ್ರೋಲ್​ ಅಂತಿದ್ದಾರೆ ಫ್ಯಾನ್ಸ್​!

ಸತ್ಯ ಸೀರಿಯಲ್​ ಬಗ್ಗೆ ಹೇಳಿದ ಮಾಲತಿ ಸರ್​ದೇಶಪಾಂಡೆ ಅವರು, ಸತ್ಯ ಸೀರಿಯಲ್​ನಲ್ಲಿ ಇವರು ನನ್ನ ಮೈದುನನ ಪಾತ್ರ ಮಾಡುತ್ತಾರೆ ಎಂದಾಗ ಅಂಥ ಕಲಾವಿದನ ಜೊತೆ ನಾನು ಪಾರ್ಟ್​ ಮಾಡುವುದು ಕೇಳಿ ತುಂಬಾ ಸಂತೋಷವಾಯಿತು. ಅವರು ತುಂಬಾ ಒಳ್ಳೆಯ ಸಿಂಗರ್ ಕೂಡ ಎಂದರು. ಇಷ್ಟಾಗುತ್ತದ್ದಂತೆಯೇ ಆ್ಯಂಕರ್​ ಶ್ವೇತಾ ಅವರು ಬಸ್​ಸ್ಟ್ಯಾಂಡ್​ ಲವ್​ ಸೀನ್​ ಕ್ರಿಯೇಟ್​ ಮಾಡಿ ಅಲ್ಲಿ ಸಕತ್​ ತಮಾಷೆ ಮಾಡಿದರು. 

ಮಾಲತಿ ಸರ್​ದೇಶಪಾಂಡೆ ಅವರು ತಮ್ಮ ಪತಿ ರಂಗಭೂಮಿ ಕಲಾವಿದ  ಸರ್​ದೇಶಪಾಂಡೆ ಅವರೊಂದಿಗೆ ಜೋಡಿ ನಂ.1 ಷೋನಲ್ಲಿ ಭಾಗವಹಿಸಿದ್ದು, ಹಲವು ವಾರಗಳು ಕಳೆದಿವೆ. ಇನ್ನು ಸರ್​ದೇಶಪಾಂಡೆ ಕುರಿತು ಹೇಳುವುದಾದರೆ, ಇವರು,  ನಾಟಕ, ಸಿನಿಮಾ, ಸೀರಿಯಲ್‌ನಲ್ಲಿಯೂ ಮಿಂಚು ಹರಿಸಿ ನಗು ಉಕ್ಕಿಸುವವರು.  ಈ ಷೋನಲ್ಲಿ ಈ ಜೋಡಿ ಇದಾಗಲೇ ತಮ್ಮ ಹಲವು ರೋಚಕ ಘಟನೆಗಳನ್ನು  ತಿಳಿಸಿದ್ದು,   ಬಾಲ್ಯದಲ್ಲಿಯೇ ಕಳುವು ಮಾಡುತ್ತಿದ್ದ ಬಗ್ಗೆ ಯಶವಂತ್​ ಅವರು ಹಾಸ್ಯದ ಲೇಪ ಕೊಟ್ಟು ಹೇಳಿ ಕೆಲ ವಾರಗಳ ಹಿಂದೆ ನಗು ಉಕ್ಕಿಸಿದ್ದರು. 

ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್​ನಟ್​ ಕೇಕ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?