ಟೀವಿ ರಾಮಾ​ಯ​ಣದ ರಾಮ ಬಿಜೆ​ಪಿ ಸೇರ್ಪ​ಡೆ: ದೀದಿ ವಿರುದ್ಧ 100 ರಾರ‍ಯಲಿ

Kannadaprabha News   | Asianet News
Published : Mar 19, 2021, 03:01 PM IST
ಟೀವಿ ರಾಮಾ​ಯ​ಣದ ರಾಮ ಬಿಜೆ​ಪಿ ಸೇರ್ಪ​ಡೆ: ದೀದಿ ವಿರುದ್ಧ 100 ರಾರ‍ಯಲಿ

ಸಾರಾಂಶ

ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈ ಶ್ರೀ ರಾಮ ಘೋಷ​ಣೆ​ಗ​ಳಿಗೆ ಆಕ್ಷೇಪ ವ್ಯಕ್ತ​ಪ​ಡಿ​ಸುತ್ತಿ​ರುವ ಬೆನ್ನಲ್ಲೇ, ರಾಮಾ​ಯ​ಣದ ಟೀವಿ ಧಾರ​ವಾ​ಹಿಯಲ್ಲಿ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕಿರು​ತೆರೆ ನಟ ಅರುಣ್‌ ಗೋವಿಲ್‌ ಅವರು ಬಿಜೆ​ಪಿಗೆ ಸೇರ್ಪ​ಡೆ​ಯಾ​ಗಿ​ದ್ದಾರೆ.

ನವ​ದೆ​ಹ​ಲಿ(ಮಾ.19):  ಹಿರಿಯ ಬಿಜೆಪಿ ಮುಖಂಡ ಅರುಣ್‌ ಸಿಂಗ್‌ ಅವರ ಸಮ್ಮು​ಖ​ದಲ್ಲಿ ಗುರು​ವಾರ ಅರುಣ್‌ ಗೋವಿಲ್‌ ಅವ​ರನ್ನು ಪಕ್ಷಕ್ಕೆ ಬರ​ಮಾ​ಡಿ​ಕೊ​ಳ್ಳ​ಲಾ​ಯಿತು. ಅಲ್ಲದೆ ಬಂಗಾ​ಳ​ದಲ್ಲಿ ದೀದಿ ಆಡ​ಳಿ​ತಕ್ಕೆ ಕೊನೇ ಆಡಲು ಯತ್ನಿ​ಸು​ತ್ತಿ​ರುವ ಬಿಜೆಪಿ ಪರ​ವಾಗಿ ಗೋವಿಲ್‌ ಅವರು 100 ರಾರ‍ಯಲಿ​ಗ​ಳಲ್ಲಿ ಭಾಗಿಯಾಗಿ, ಮತ​ದಾ​ರ​ರನ್ನು ಸೆಳೆ​ಯ​ಲಿ​ದ್ದಾರೆ ಎನ್ನಲಾ​ಗಿದೆ. 

ಮಮತಾ ಆಟಕ್ಕೆ ಅಂತಿಮ ದಿನಾಂಕ ಫಿಕ್ಸ್ ಮಾಡಿದ ಮೋದಿ 

ಬಿಜೆಪಿ ಸೇರ್ಪಡೆ ಬಳಿಕ ಮಾತ​ನಾ​ಡಿದ ನಟ ಅರುಣ್‌ ಗೋವಿಲ್‌, ‘ನನಗೆ ಮೊದ​ಲಿಂದಲೂ ರಾಜ​ಕೀ​ಯ​ದಲ್ಲಿ ಆಸಕ್ತಿ ಇರ​ಲಿ​ಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ​ವೈ​ಖರಿ ಮತ್ತು ಜೈ ಶ್ರೀ ರಾಮ್‌ ಘೋಷ​ಣೆಗೆ ಮಮತಾ ಬ್ಯಾನರ್ಜಿ ಅವರ ಆಕ್ಷೇಪ ವಿಚಾ​ರ​ಗಳು ನನ್ನನ್ನು ರಾಜ​ಕೀ​ಯ​ದತ್ತ ಸೆಳೆ​ದ​ವು. ಜೈ ಶ್ರೀ ರಾಮ್‌ ಘೋಷ​ಣೆಯು ರಾಜ​ಕೀಯ ಘೋಷ​ವಾ​ಕ್ಯ​ವಲ್ಲ. ಬದ​ಲಿಗೆ ಇದೊಂದು ಜೀವನ ಪದ್ಧ​ತಿ​ಯಾ​ಗಿದ್ದು, ನಮ್ಮ ಸಂಸ್ಕೃ​ತಿ​ಯನ್ನು ಪ್ರತಿ​ಬಿಂಬಿ​ಸು​ತ್ತದೆ’ ಎಂದು ಹೇಳಿ​ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ