
ಬಿಗ್ ಬಾಸ್ 7 ಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಸಾಕಷ್ಟು ಹೆಸರುಗಳು ಕೇಳಿ ಬರುತ್ತಿವೆ. ಆದರೆ ಯಾವೂದೂ ಇನ್ನೂ ಪಕ್ಕಾ ಆಗಿಲ್ಲ.
ಬಿಗ್ ಬಾಸ್ 7 ಗೆ ಸರ್ವಸಂಗ ಪರಿತ್ಯಾಗಿ: ದೊಡ್ಮನೆ ಶೋನಲ್ಲಿ ಗುರುಲಿಂಗ ಸ್ವಾಮಿ ಭಾಗಿ !
ರಾಜಾ ರಾಣಿ ಧಾರಾವಾಹಿಯ ಚುಕ್ಕಿ ಅಲಿಯಾಸ್ ಚಂದನ ಅನಂತಕೃಷ್ಣ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ರಾಜಾ ರಾಣಿ ಧಾರಾವಾಹಿಯನ್ನು ತರಾತುರಿಯಲ್ಲಿ ಮುಗಿಸಲಾಗಿದೆ. ಹಾಗಾಗು ಚುಕ್ಕಿ ಹೋಗುವುದು ಹೆಚ್ಚು ಕಡಿಮೆ ಪಕ್ಕಾ ಅಂತಾನೇ ಹೇಳಬಹುದಾಗಿದೆ.
ರಾಜಾ ರಾಣಿ ಧಾರಾವಾಹಿ ಕುತೂಹಲಗಳನ್ನು ನೀಡುತ್ತಾ ಎಲ್ಲಿಯೂ ಬೋರ್ ಹೊಡೆಸದಂತೆ ಚೆನ್ನಗಿ ಮೂಡಿ ಬರುತ್ತಿದೆ ಎನ್ನುತ್ತಿರುವಾಗಲೇ ದಿಢೀರನೇ ಮುಗಿಸಿರುವುದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ.
ಚುಕ್ಕಿ- ಓಂಕಾರ್ ನಡುವಿನ ನವಿರಾದ ಪ್ರೀತಿ, ತಾಜಾತನದ ಅನುಭೂತಿ ನೀಡುವ ಕಥೆ, ನವಿರಾದ ನಿರೂಪಣೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.