ಭಾಗ್ಯಲಕ್ಷ್ಮಿಗೆ ಮಂತ್ರವಾದಿ ಎಂಟ್ರಿ! ಉಗುರಲ್ಲಿ ಹೋಗೋದಕ್ಕೆ ಕೊಡ್ಲಿ ಬೇಕಿತ್ತಾ? ನೆಟ್ಟಿಗರ ಅಸಮಾಧಾನ

By Suchethana DFirst Published Jul 26, 2024, 1:22 PM IST
Highlights

ಶ್ರೇಷ್ಠಾ ಮತ್ತು ತಾಂಡವ್​ ವಿಷಯ ಭಾಗ್ಯಳಿಗೆ ತಿಳಿಸುವುದಕ್ಕಾಗಿ ಪೂಜಾ ಮಾಡಿರುವ ಮಂತ್ರವಾದಿ ಪ್ಲ್ಯಾನ್​ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏನಿದು ಪ್ಲ್ಯಾನ್​?
 

ತಾಂಡವ್​ ಮತ್ತು ಶ್ರೇಷ್ಠಾಳ ಸಂಬಂಧವನ್ನು ನೇರವಾಗಿ ಹೇಳಲಾಗದೇ ಒದ್ದಾಡುತ್ತಿದ್ದಾಳೆ ಪೂಜಾ. ಆದ್ದರಿಂದ ಹೇಗಾದರೂ ಮಾಡಿ ಅದನ್ನು ಪರೋಕ್ಷವಾಗಿ ತನ್ನ ಅಕ್ಕ ಭಾಗ್ಯಳಿಗೆ ತಿಳಿಸುವ ಪ್ರಯತ್ನ ಆಕೆಯದ್ದು. ಅದೇ ಇನ್ನೊಂದೆಡೆ ತಾಂಡವ್​ನ ನಕಲಿ ಅಮ್ಮ ಆಗಿರುವ ಸುಂದ್ರಿ ಕೂಡ ಪೂಜಾಳ ಕೈಜೋಡಿಸಿದ್ದಾಳೆ. ಅದೇ ಇನ್ನೊಂದೆಡೆ, ತಾಂಡವ್​ ಮತ್ತು ಶ್ರೇಷ್ಠಾ ಮದುವೆಯವರೆಗೂ ಬಂದಿದ್ದಾರೆ. ನಿಶ್ಚಿತಾರ್ಥವೂ ಆಗಿದೆ, ಪ್ರೀ ವೆಡ್ಡಿಂಗ್​ ಶೂಟ್​ ಕೂಡ ಆಗಿದೆ. ಅದೇ ಇನ್ನೊಂದೆಡೆ ಪದೇ ಪದೇ ಭಾಗ್ಯಳಿಗೆ ಡಿವೋರ್ಸ್​ ಕೊಡು ಎಂದು ಪೀಡಿಸುತ್ತಿದ್ದಾನೆ ತಾಂಡವ್​. ಭಾಗ್ಯ ತನಗೆ ವಿಚ್ಛೇದನ ಕೊಡಲಿ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾನೆ. ಆಕೆಗೆ ಕೋಪ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆಕೆಯನ್ನು ಪ್ರವೋಕ್​  ಮಾಡುತ್ತಿದ್ದಾನೆ. ಆದರೆ ಭಾಗ್ಯ ವಿಚ್ಛೇದನಕ್ಕೆ ಸುತರಾಂ ಒಪ್ಪುತ್ತಿಲ್ಲ.ತನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಡಿವೋರ್ಸ್​ ಕೊಡುವುದೇ ಇಲ್ಲ ಎಂದು ಕಡ್ಡಿ ತುಂಡು ಮಾಡಿ ಹೇಳಿದ್ದಾಳೆ. ಕುಸುಮಾ ಕೂಡ ಭಾಗ್ಯಳಿಗೆ ಸಪೋರ್ಟ್​ ಮಾಡುತ್ತಿದ್ದಾಳೆ. 

ಇಷ್ಟಾದರೂ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಾಂಡವ್​ಗೆ ಇನ್ನೊಂದು ಸಂಬಂಧ ಇದೆ ಎನ್ನುವುದು ಗೊತ್ತಾಗುತ್ತಲೇ ಇಲ್ಲ.ಆತನ ಬಿಹೇವಿಯರ್​ನಲ್ಲಿ ಎಷ್ಟೊಂದು ಬದಲಾವಣೆ ಆಗಿದ್ದರೂ ಅದು ಯಾಕೆ ಎಂದು ನೋಡುವ ಗೋಜಿಗೂ ಹೋಗುತ್ತಿಲ್ಲ.  ಶ್ರೇಷ್ಠಾ ಒಳ್ಳೆಯವಳಲ್ಲ ಎನ್ನುವುದು ಭಾಗ್ಯಳಿಗೆ ತಿಳಿದಿದ್ದರೂ, ತನ್ನ ಗಂಡನನ್ನೇ ಆಕೆ ಬುಟ್ಟಿಗೆ  ಹಾಕಿಕೊಂಡಿರುವ ವಿಷಯ ತಿಳಿಯುತ್ತಿಲ್ಲ. ಶ್ರೇಷ್ಠಾಳ ಮದುವೆ ಎನ್ನುವುದು ಗೊತ್ತು. ಆದರೆ ಅದು ತಾಂಡವ್​ ಜೊತೆ ಎಂದು ಇದುವರೆಗೆ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಿಳಿದಿಲ್ಲ. ಪೂಜಾಗೆ ತಿಳಿದಿದ್ದರೂ ಅದನ್ನು ಹೇಗೆ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಪೂಜಾ, ಸುಂದರಿ ಮತ್ತು ಹಿತಾ ಸೇರಿ ಸದ್ಯ ಏನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ಅದೀಗ ವರ್ಕ್​ಔಟ್​ ಆಗಿದೆ.

Latest Videos

ಬೇರೆ ಸಿಮ್​ ತಗೋ...ನಿನ್​ ಜೊತೆ ನಾವಿದ್ದೇವೆ... ತಾಂಡವ್​ ಬೆಂಬಲಕ್ಕೆ ನಿಂತ ಅಭಿಮಾನಿಗಳು!

ಹಿತಾ ಮಂತ್ರವಾದಿ ವೇಷ ತೊಟ್ಟಿದ್ದಾಳೆ. ಶ್ರೇಷ್ಠಾಳನ್ನು ಆ ಜಾಗಕ್ಕೆ ಸುಂದ್ರಿ ಕರೆದುಕೊಂಡು ಬಂದಿದ್ದಾಳೆ. ಪೂಜಾ ಹೇಗೇಗೋ ಅಕ್ಕ ಭಾಗ್ಯಳನ್ನು ಪುಸಲಾಯಿಸಿ ಮಂತ್ರವಾದಿ ಇರುವಲ್ಲಿಗೆ ಕರೆಸಿದ್ದಾಳೆ. ಅಲ್ಲಿ ಮಂತ್ರವಾದಿ ಶ್ರೇಷ್ಠಾಳ ಮದುವೆಯ ಬಗ್ಗೆ ಭಾಗ್ಯಳಿಗೆ ತಿಳಿಯುವ  ಹಾಗೆ ಹೇಳಿದ್ದಾಳೆ. ಇದರಿಂದ ಭಾಗ್ಯ ಗಾಬರಿ ಬಿದ್ದಿದ್ದಾಳೆ. ಮಂತ್ರವಾದಿ ಹಿತಾ ಏನು ಹೇಳಿದ್ದಾಳೆ ಎನ್ನುವುದು ಕುತೂಹಲವಾಗಿದ್ದರೂ ಸದ್ಯ ಇಷ್ಟೇ ಪ್ರೊಮೋ ಈಗ ಬಿಡುಗಡೆಯಾಗಿದೆ. ಆದರೆ ಇದರ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೆಲ್ಲ ಬೇಕಿತ್ತ. ತಲೆ ಇಲ್ಲದ ಡೈರೆಕ್ಟರ್. ಈ ವಿಷ್ಯದಲ್ಲಿ. ಕಾಮಿಡಿ ಅಗತ್ಯ ಇರಲಿಲ್ಲ. ಕುಸುಮಾ ಮೊಬೈಲ್ ಕಬೋಡ್. ಎಲ್ಲಾ ಕಡೆ ಸಾಕ್ಷಿ ಇದೆ. ಭಾಗ್ಯಳಿಗೆ ತಿಳಿಯದ ಹಾಗೆ ಹ್ಯಾಂಡಲ್ ಮಾಡಬೋದಿತ್ತು ಏನಿದು ಅಸಹ್ಯ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಉಗುರಲ್ಲಿ ಹೋಗೋದಕ್ಕೆ ಕೊಡ್ಲಿ ತಗೋತಿದ್ದಾರೆ ಡೈರೆಕ್ಟರ್​ ಎಂದು ಆಶಾಲತಾ ಎನ್ನುವವರು ಕಮೆಂಟ್​ ಮಾಡಿದ್ದಾರೆ. ಮದುವೆ ಇನ್​ವಿಟೇಷನ್​ ಮನೆಯಲ್ಲಿಯೇ ಇದೆ, ಅದನ್ನೇ ಇಟ್ಟುಕೊಂಡು ಈ ವಿಷಯ ತಿಳಿಸಬಹುದಿತ್ತಲ್ಲಾ ಎನ್ನುವುದು ಬಹುತೇಕ ಕಮೆಂಟಿಗರ ಅಭಿಮತ. ಸೀರಿಯಲ್​ ಎಳೆಯುವುದಕ್ಕೆ ಇಂಥ ಕಾಮಿಡಿಗಳು ಬೇಕಿರಲಿಲ್ಲ. ನಿಜ ಜೀವನದಲ್ಲಿ ಎಷ್ಟೋ ಮಂದಿ ಸೀರಿಯಲ್​ಗಳಿಂದ ಪ್ರಭಾವಿತರಾಗುತ್ತಾರೆ. ಅಂಥದ್ದರಲ್ಲಿ ಈ ಮಂತ್ರವಾದಿಗಳನ್ನೆಲ್ಲಾ ಕರೆಸಿ ಅಸಹ್ಯ ಮಾಡುವುದು ಬೇಕಿರಲಿಲ್ಲ ಎನ್ನುವುದು ನೆಟ್ಟಿಗರ ಮಾತು. 

ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್​ ಶೆಟ್ಟಿ!


click me!