ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!

Published : Dec 09, 2025, 03:55 PM ISTUpdated : Dec 09, 2025, 08:34 PM IST
leela Manju

ಸಾರಾಂಶ

ಡ್ರೈವರ್ ಮಂಜು ಮತ್ತು ಲೀಲಾ ಅವರ ವಿವಾದಾತ್ಮಕ ಕೌಟುಂಬಿಕ ಗೊಂದಲ ಸುಖಾಂತ್ಯ ಕಂಡಿದೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು, ಪ್ರೇಮಿ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿದೆ ಕೊನೆಯ ವಿಡಿಯೋ..

ನೀನು ನನ್ನ ಪ್ಲೇವರ್ ಚಿನ್ನೀ, ಬಂದು ಬಿಡು ಬಂಗಾರೀ.., ನಿನ್ನ ರಾಣಿ ಥರ ನೊಡ್ಕೋತೀನಿ ಬಂದುಬಿಡು ಲೀಲಾ ಎಂದು ಗೋಳಾಡಿದ್ದ ಮಂಜನಿಗೆ ಇದೀಗ ಲೀಲಾ ಸಿಕ್ಕಾಗಿದೆ. ಡ್ರೈವರ್ ಗಂಡ ಮಂಜು ಹಾಗೂ ಮೂರು ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಲೀಲಾಳ ಸ್ಟೋರಿ ಇದೀಗ ಸುಖಾಂತ್ಯಗೊಂಡಿದೆ. ಮೀಡಿಯಾಗಳಲ್ಲಿ ಕೌಟುಂಬಿಕ ವಿಚಾರದ ಬಗ್ಗೆ ಚರ್ಚೆ ಮಾಡಿ ಇವರ ದಾಂಪತ್ಯ ಮತ್ತು ಟ್ರೈಯಾಂಗಲ್ ಲವ್ ಸ್ಟೋರಿ ಭಾರೀ ವೈರಲ್ ಆಗಿತ್ತು. ಕೋರ್ಟ್ ಮೆಟ್ಟಿಲೇರಿದ ನಂತರವೂ ಇದೀಗ ಮಂಜು ಮತ್ತು ಲೀಲಾ ಮೂವರು ಮಕ್ಕಳಿಗಾಗಿ ಒಂದಾಗಿದ್ದಾರೆ.

ಲೀಲಾ ಬಂದುಬಿಡಮ್ಮೂ, ನಿನ್ನ ದೇವತೆಗಿಂತ ಹೆಚ್ಚಾಗಿ ಚೆನ್ನಾಗಿ ನೋಡ್ಕೋತೀನಿ. ಇನ್ನೂ ಬಂಗಾರದ ರಾಣಿ ಥರಹ ಸಾಕ್ತೀನಿ. ತುಂಬಾ ದೂರ ಹೋಗಿಬಿಡೋಣ ಬಾ.. ನೀನು ಇಲ್ಲ ಅಂದ್ರೆ ನಂಗೆ ಪ್ರಪಂಚನಾ ಇಲ್ಲ. ಅದೆಲ್ಲಾ ಮರೆತುಬಿಟ್ಟು ಬಂದುಬಿಡು. ಪ್ರಪಂಚ ದೊಡ್ಡದಿದೆ, ನಾನೊಬ್ಬನೇ ಇದೀನಿ ಬಂದುಬಿಡು ಅಮ್ಮು.. ನೀನು ನನ್ನ ಬಂಗಾರಿ, ನನ್ನ ಚಿನ್ನಿ ನಿನ್ನ ಎಲ್ಲಾ ತಪ್ಪನ್ನು ಕ್ಷಮಿಸಿ ಚೆನ್ನಾಗಿ ನೋಡ್ಕೋತೀನಿ ಬಂದುಬಿಡು ಎಂದು ಮಂಜು ಗೋಳಾಡಿ ಅತ್ತು ಕರೆದಿದ್ದನು.

ಅವನು ಸಂತು ಅನ್ನೋನು ರಾತ್ರಿ 8.30ಕ್ಕೆ ಮನೆಗೆ ಬಂದು ಅಲ್ಲೇ ಇರುತ್ತಿದ್ದ. ನನ್ನ ದೊಡ್ಡ ಮಗ ಎಲ್ಲಾ ನೋಡಿದ್ದಾನೆ. ಮಕ್ಕಳಿಗೆ ರಾತ್ರಿ 8 ಗಂಟೆಯೊಳಗೆ ಊಟ ಮಾಡಿಸಿ ಮಲಗಿಸುತ್ತಿದ್ದಳು. ಆಮೇಲೆ ಸಂತು ಬಂದಾಗ ಅವರಿಬ್ಬರೂ ರೂಮಿನೊಳಗೆ ಸೇರಿಕೊಳ್ಳುತ್ತಿದ್ದರು. ಒಂದು ವೇಳೆ ಮಕ್ಕಳು ಏನಾದರೂ ಎದ್ದು ಬಂದರೆ ಸಂತು ಮಕ್ಕಳಿಗೆ ಹೊಡೆಯುತ್ತಿದ್ದನು. ನನ್ನ ಹೆಂಡತಿಗೆ ನಾನು ಎಲ್ಲ ಬೆರಳಿಗೂ ಉಂಗುರ ಹಾಕಿ ಚಿನ್ನ ನೋಡ್ಕೊಂಡಂಗೆ ನೋಡಿಕೊಂಡಿದ್ದೀನಿ. ಈಗ ಕಷ್ಟ ಬಂದಾಗ ಚಿನ್ನ ಅಡವಿಟ್ಟುದ್ದು, ಕ್ಯಾಬ್ ಡ್ರೈವರ್ ಆಗಿ ದುಡಿದು ಎಲ್ಲವನ್ನೂ ಬಿಡಿಸಿ ಕೊಡ್ತೇನೆ ಎಂದು ಮಂಜು ಹೇಳಿದ್ದರು.

 

ಕುಡಿಯೋದು ಬಿಡ್ತೀನಿ, ಹೆಂಗಸರ ಸಹವಾಸ ಬಿಡ್ತೀನಿ

ನನಗೋಸ್ಕ ಇಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ನಾವು ಒಂದಾಗೋಣ. ಲೀಲಾ ಬಾರಮ್ಮಾ.., ನನ್ನ ಮಾತು ಕೇಳಿ ಬಾರೆ. ನಿನ್ನ ಎಷ್ಟು ಚೆನ್ನಾಗಿ ಸಾಕಿದ್ದೀನಿ, ಇನ್ಮೇಲೆ ಅದರ ಅಪ್ಪನಂಗೆ ನೋಡಿಕೊಳ್ತೀನಿ. ನಾನು ನಿಂಗೋಸ್ಕರ ಕುಡಿಯೋದು ಬಿಡ್ತೀನಿ, ಬೇರೆ ಹೆಣ್ಣಿನ ಸಹವಾಸ ಇದ್ದರೂ ಬಿಡ್ತೀನಿ. ನಾವಿಬ್ಬರೂ ಒಂದಾಗಿರೋಣ, ಕಾಲು ಹಿಡ್ಕೋತೀನಿ ಲೀಲಾ ಬಾ ಎಂದು ಟಿವಿಯ ಎದುರಿಗೆ ನಿಂತು ಗೋಳಾಡಿದ್ದನು. ನೀನು ಬೇಕಾದರೆ ನನ್ನ ಮಕ್ಕಳನ್ನು ಕಳಿಸಿಬಿಡು, ನಾನು ನಿನ್ನ ಜೊತೆಗೆ ಬರಲ್ಲ ಎಂದು ಹೇಳಿದ್ದಳು. ಇದೀಗ ಕೊನೆಗೆ ಕಾನೂನಿನ ರೀತಿಯಲ್ಲಿ ದೂರವಾಗಲು ಕೋರ್ಟ್ ಮೆಟ್ಟಿಲೇರಿದ್ದರು.

ಇನ್ನು ಕೋರ್ಟಿನ ವಿಚಾರಗಳ ನಡುವೆಯೂ ಇದೀಗ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವುದಾಗಿ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಸಂತೋಷ್ ಕೂಡ ಸಾಥ್ ಕೊಟ್ಟಿದ್ದು, ಅವರಿಬ್ಬರೂ ಪ್ರತ್ಯೇಕವಾಗಿ ಮಕ್ಕಳನ್ನು ನೋಡಿಕೊಂಡು ಹೋಗುವುದಕ್ಕೆ ದಂಪತಿ ಸಮ್ಮತಿ ತೋರಿಸಿದ್ದಾನೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೂ ನಿಮ್ಮ ಕುಟುಂಬ, ಸಂಸಾರವನ್ನು ನೋಡಿಕೊಂಡು ಹೋಗಿ. 'ಎಲ್ಲರ ಮನೆ ದೋಸೆನೂ ತೂತು' ಇರುತ್ತದೆ ಎಂದು ಬುದ್ಧಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ