
ಕೊರೋನಾ ಲಾಕ್ಡೌನ್ನಿಂದಾಗಿ ಕಿರುತೆರೆಯ ಬಹುತೇಕ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಸಲಾಗುತ್ತಿದೆ. ಆರೋಗ್ಯದ ಕಾಳಜಿಯಿಂದ ಕೆಲವರು ಚಿತ್ರೀಕರಣದಲ್ಲಿ ಭಾಗಿಯಾಗದ ಕಾರಣ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಹೀಗಾಗಿ ಅನೇಕ ಹೊಸ ಪಾತ್ರಗಳ ಎಂಟ್ರಿ ಆಗುತ್ತಿವೆ. ವೀಕ್ಷಕರು ಆಸಕ್ತಿ ಹೆಚ್ಚಿಸಲು ಎಂದು ಬಹುತೇಕ ಎಲ್ಲ ಕಥೆಗಳಿಗೂ ಹೊಸ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ.
ಹೌದು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳಗೌರಿ ಮದುವೆ'ಯಲ್ಲಿ ಹೊಸ ಪಾತ್ರಧಾರಿಯ ಎಂಟ್ರಿ ಆಗಿದೆ. ಹೆಸರು ರಾಜೇಶ್ವರಿ, ಹಳ್ಳಿಯಲ್ಲಿರುವ ಹೆಚ್ಚು ಪ್ರಭಾವಿಶಾಲಿ ಮಹಿಳೆ. ಮಂಗಳಾ ಮತ್ತು ರಾಜೀವ್ ಈಕೆಯಿಂದ ಯಾವ ರೀತಿಯ ಸಹಾಯ ಪಡೆದುಕೊಳ್ಳುತ್ತಾರೆ ಅಥವಾ ಈಕೆಯಿಂದ ತೊಂದರೆ ಎದುರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಮನದ `ಅಂತರಾಳ' ತೆರೆದ ನಟಿ ಮಾನಸ ಜೋಶಿ
'ರಾಜೇಶ್ವರಿ. ನಾನು ಪ್ರತಿ ಸಲವೂ ವಿಭಿನ್ನ ಪಾತ್ರ ಹಾಗೂ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವೆ. ನೀವು ರಾಜೇಶ್ವರಿ ಎಂಟ್ರಿಗೆ ತೋರಿಸಿದ ಪ್ರೀತಿಗೆ ಧನ್ಯವಾದಗಳು,' ಎಂದು ಮಾನಸ ಜೋಶಿ ಬರೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ 'ಮಹಾದೇವಿ' ಧಾರಾವಾಹಿಯಲ್ಲಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾನಸ ವೃತ್ತಿಯಲ್ಲಿ ನೃತ್ಯಗಾರ್ತಿ, ಬೆಂಗಳೂರಿನಲ್ಲಿ ತಮ್ಮದೇ ಕಥಕ್ ನೃತ್ಯ ಶಾಲೆ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.