ಈ ಬಾರಿಯ ಬಿಗ್‌ ಬಾಸ್ ನನಗೆ 'ತುಂಬಾ ಅನುಕೂಲ'.. ಗ್ರೇಟ್ ಸೀಕ್ರೆಟ್ ಬಿಚ್ಚಿಟ್ಟು ಶಾಕ್ ಮೂಡಿಸಿದ ಕಿಚ್ಚ ಸುದೀಪ್!

Published : Aug 30, 2026, 07:18 PM IST
Bigg Boss Kannada 13

ಸಾರಾಂಶ

"ಮುಂದಿನ ಬೇಟೆ" (Next Hunt) ಎಂಬ ಪದದ ಬಗ್ಗೆ ಕೇಳಿದಾಗ, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಸದ್ಯಕ್ಕೆ ಬಿಗ್ ಬಾಸ್ ಮೇಲೆ ಮಾತ್ರ ಗಮನವಿರಲಿ. ನನ್ನ ಮುಂದಿನ ಸಿನಿಮಾ ಮತ್ತು ಬೇಟೆಯ ಬಗ್ಗೆ ಸರಿಯಾದ ಸಮಯ ಬಂದಾಗ ಖಂಡಿತಾ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.

Bigg Boss Kannada Season 13 Press Meet-Kichcha Sudeep told about BBK Weekend Shoots Secret- ಕಿಚ್ಚನ ದರ್ಬಾರ್‌ಗೆ ಬಿಗ್ ಬಾಸ್ ಮನೆ ಸಜ್ಜಾಗ್ತಿದೆ: ಈ ಬಾರಿಯ ಸೀಸನ್ ಸುದೀಪ್ ಪಾಲಿಗೆ ಏಕೆ ಸ್ಪೆಷಲ್? ಇಲ್ಲಿದೆ ಇಂಟರೆಸ್ಟಿಂಗ್ ಸಮಾಚಾರ!

ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 'ಬಿಗ್ ಬಾಸ್' ಎಂದರೆ ಅಲ್ಲಿ ಕೇವಲ ಸ್ಪರ್ಧಿಗಳ ಕಿರಿಕ್ ಮಾತ್ರವಲ್ಲ, ವೀಕೆಂಡ್‌ನಲ್ಲಿ ಬರುವ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಖದರ್ ಮತ್ತು ಕೌನ್ಸೆಲಿಂಗ್ ಕೂಡ ಅಷ್ಟೇ ಮುಖ್ಯ. ಈ ಬಾರಿಯ ಸೀಸನ್ ಆರಂಭಕ್ಕೂ ಮುನ್ನವೇ ಕಿಚ್ಚ ಹಲವು ಸ್ವಾರಸ್ಯಕರ ಹಾಗೂ ಗುಟ್ಟಿನ ವಿಷಯಗಳನ್ನು ಹಂಚಿಕೊಂಡಿದ್ದು, ಸಿನಿರಸಿಕರಲ್ಲಿ ಕುತೂಹಲದ ಕಿಚ್ಚು ಹಚ್ಚಿದ್ದಾರೆ.

ಶೂಟಿಂಗ್ ಸೆಟ್‌ನಿಂದ ಕೇವಲ 15 ನಿಮಿಷದ ದಾರಿ!

ಸಾಮಾನ್ಯವಾಗಿ ಬಿಗ್ ಬಾಸ್ ನಡೆಯುವಾಗ ಸುದೀಪ್ ಅವರಿಗೆ ಸಿನಿಮಾಗಳ ಶೂಟಿಂಗ್ ಮತ್ತು ಈ ಶೋ ಮ್ಯಾನೇಜ್ ಮಾಡುವುದು ಬೆಟ್ಟ ಎತ್ತಿದಷ್ಟೇ ಕಷ್ಟದ ಕೆಲಸವಾಗಿತ್ತು. ಕಳೆದ ಸೀಸನ್‌ನ ನೆನಪುಗಳನ್ನು ಮೆಲುಕು ಹಾಕಿದ ಸುದೀಪ್, "ಒಮ್ಮೆ ನಾನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿಂದ ಹರಸಾಹಸ ಪಟ್ಟು ಬೆಂಗಳೂರು ಏರ್‌ಪೋರ್ಟ್‌ಗೆ ಬಂದು, ಜೆ.ಪಿ. ನಗರದ ಟ್ರಾಫಿಕ್ ಸೀಳಿಕೊಂಡು ಸೆಟ್‌ಗೆ ಬರಬೇಕಿತ್ತು. ಅದು ದೈಹಿಕವಾಗಿ ತುಂಬಾ ದಣಿವಿನ ಕೆಲಸವಾಗಿತ್ತು" ಎಂದಿದ್ದಾರೆ.

ಆದರೆ ಈ ಬಾರಿ ಕಿಚ್ಚನಿಗೆ ಆ ಟೆನ್ಷನ್ ಇಲ್ಲ! ಯಾಕೆಂದರೆ ಅವರ ಬಹುನಿರೀಕ್ಷಿತ ಬೃಹತ್ ಸಿನಿಮಾ ‘ಬಿಲ್ಲ ರಂಗ ಭಾಷಾ’ ಚಿತ್ರದ ಸೆಟ್ ಮತ್ತು ಬಿಗ್ ಬಾಸ್ ಸ್ಟುಡಿಯೋ ಎರಡೂ ಪಕ್ಕಪಕ್ಕದಲ್ಲೇ ಇವೆ. "ಈ ಬಾರಿ ಶೂಟಿಂಗ್ ಮುಗಿಸಿ ಕೇವಲ 15 ನಿಮಿಷದಲ್ಲೇ ಬಿಗ್ ಬಾಸ್ ವೇದಿಕೆಗೆ ಬಂದುಬಿಡಬಹುದು" ಎಂದು ಸುದೀಪ್ ಸಂಭ್ರಮದಿಂದ ಹೇಳಿದ್ದಾರೆ. ಅತ್ತ 'ಬಿಲ್ಲ'ನಾಗಿ ಅಬ್ಬರಿಸಿ, ಇತ್ತ 'ಬಿಗ್ ಬಾಸ್' ಸಾರಥಿಯಾಗಿ ಮಿನುಗಲು ಸುದೀಪ್ ಈಗ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಅಪಮಾನಗಳೇ ಯಶಸ್ಸಿನ ಮೆಟ್ಟಿಲು!

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಆಡಿಷನ್ಸ್‌ಗಳಲ್ಲಿ ನಡೆಯುತ್ತಿರುವ 'ಅಗ್ನಿಪರೀಕ್ಷೆ' ಮತ್ತು ಜಡ್ಜ್‌ಗಳ ಕಟು ವರ್ತನೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಿಚ್ಚ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. "ಶಾಲೆಯಲ್ಲಿ ಮಾಸ್ಟರ್ 'ಗೆಟ್ ಔಟ್' ಅಂದಾಗ ನಮಗೆ ಆ ಕ್ಷಣಕ್ಕೆ ಕಹಿಯೆನಿಸಬಹುದು, ಆದರೆ ಅದು ನಮ್ಮ ಬದುಕನ್ನು ತಿದ್ದಲು ಇರುತ್ತದೆ. ಇಲ್ಲಿ ಜಡ್ಜ್‌ಗಳ ನಡವಳಿಕೆಗಿಂತ, ಆ ವೇದಿಕೆಯಲ್ಲಿ ರಿಜೆಕ್ಟ್ ಆದವರಿಗೆ ಸಿಗುವ ಹೈಪ್ ಗಮನಿಸಿ. ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ನಾವು ಉತ್ತಮ ಮನರಂಜನೆ ನೀಡೋಣ. ಒಮ್ಮೆ ತಿರಸ್ಕೃತರಾದ ತಕ್ಷಣ ಬದುಕಿನ ಬಾಗಿಲು ಮುಚ್ಚುವುದಿಲ್ಲ" ಎನ್ನುವ ಮೂಲಕ ಸ್ಪರ್ಧಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.

ಕಿಚ್ಚನ 'ಮುಂದಿನ ಬೇಟೆ' ಯಾವುದು?

ಎಲ್ಲದಕ್ಕಿಂತ ಹೆಚ್ಚಾಗಿ ಸುದೀಪ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಕುತೂಹಲವಿದೆ. ಅದರಲ್ಲೂ ಅವರ "ಮುಂದಿನ ಬೇಟೆ" (Next Hunt) ಎಂಬ ಪದದ ಬಗ್ಗೆ ಕೇಳಿದಾಗ, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಸದ್ಯಕ್ಕೆ ಬಿಗ್ ಬಾಸ್ ಮೇಲೆ ಮಾತ್ರ ಗಮನವಿರಲಿ. ನನ್ನ ಮುಂದಿನ ಸಿನಿಮಾ ಮತ್ತು ಬೇಟೆಯ ಬಗ್ಗೆ ಸರಿಯಾದ ಸಮಯ ಬಂದಾಗ ಖಂಡಿತಾ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.

ಒಟ್ಟಾರೆಯಾಗಿ, ಈ ಬಾರಿಯ ಬಿಗ್ ಬಾಸ್ ಕಿಚ್ಚನಿಗೆ ವೈಯಕ್ತಿಕವಾಗಿ ತುಂಬಾ ಸುಲಭ ಮತ್ತು ವಿಶೇಷವಾಗಿರಲಿದೆ. ಅತ್ತ ಬೃಹತ್ ಸಿನಿಮಾದ ಕೆಲಸಗಳು, ಇತ್ತ ರಿಯಾಲಿಟಿ ಶೋನ ಜವಾಬ್ದಾರಿ - ಎರಡನ್ನೂ ಕಿಚ್ಚ ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಬಿಗ್ ಬಾಸ್ ಮನೆಯ ಹೊಸ ಆಟ ಶುರುವಾಗಲು ವೇದಿಕೆ ಸಜ್ಜಾಗಿದೆ, ಇನ್ನು ಕಿಚ್ಚನ ಎಂಟ್ರಿಯೊಂದೇ ಬಾಕಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ: ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು
Bigg Bossನಲ್ಲಿ ಗೆಲ್ಲಲು ಬೇಕಿರೋದು ಏನು? ಪತ್ರಕರ್ತರ ಪ್ರಶ್ನೆಗೆ ಅಚ್ಚರಿಯ ಉತ್ತರ ಕೊಟ್ಟ ಸುದೀಪ್​