ಕಿರುತೆರೆಯ ಭರವಸೆ ನಟ ಸಿದ್ಧಾರ್ಥ್ ವೇಣುಗೋಪಾಲ್ ಇನ್ನಿಲ್ಲ; ಸಾವಿನ ಹೋರಾಟದಲ್ಲಿ ಗೆದ್ದ ಕ್ಯಾನ್ಸರ್!

Published : Apr 17, 2026, 06:55 PM IST
siddharth venugopal

ಸಾರಾಂಶ

ಕಿರುತೆರೆ ನಟ ಸಿದ್ದಾರ್ಥ್ ವೇಣುಗೋಪಾಲ್ ಅವರು ಕ್ಯಾನ್ಸರ್‌ನೊಂದಿಗೆ ಎರಡು ವರ್ಷಗಳ ಹೋರಾಟದ ನಂತರ ನಿಧನರಾಗಿದ್ದಾರೆ. ಹಿರಿಯ ನಟಿ ಸೀಮಾ ಜಿ ನಾಯರ್ ಅವರು ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದು, 'ಕಸ್ತೂರಿಮಾನ್' ಖ್ಯಾತಿಯ ನಟನ ಅಕಾಲಿಕ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

ಕಿರುತೆರೆ ಲೋಕದ ಭರವಸೆಯ ನಟ ಸಿದ್ದಾರ್ಥ್ ವೇಣುಗೋಪಾಲ್ (Siddharth Venugopal) ಇನ್ನಿಲ್ಲ. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್ (Cancer) ರೋಗದೊಂದಿಗೆ ಕಠಿಣ ಹೋರಾಟ ನಡೆಸುತ್ತಿದ್ದ ಸಿದ್ದಾರ್ಥ್, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇವರ ಅಕಾಲಿಕ ನಿಧನವು ಮಲಯಾಳಂ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಸೀಮಾ ಜಿ ನಾಯರ್ ಅವರ ಭಾವುಕ ಪೋಸ್ಟ್:

ಸಿದ್ದಾರ್ಥ್ ಅವರ ನಿಧನದ ಸುದ್ದಿಯನ್ನು ಖ್ಯಾತ ಹಿರಿಯ ನಟಿ ಸೀಮಾ ಜಿ ನಾಯರ್ ಅವರು ಅತ್ಯಂತ ನೋವಿನಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಅವರನ್ನು ಉಳಿಸಿಕೊಳ್ಳಲು ಸೀಮಾ ಅವರು ಕಳೆದ ಎರಡು ವರ್ಷಗಳಿಂದ ಹಗಲಿರುಳು ಶ್ರಮಿಸಿದ್ದರು. ಆರ್ಥಿಕ ಮತ್ತು ಮಾನಸಿಕವಾಗಿ ಅವರ ಬೆನ್ನೆಲುಬಾಗಿ ನಿಂತಿದ್ದ ಸೀಮಾ, 'ಎಲ್ಲಾ ಭರವಸೆಗಳು ಮುಗಿದುಹೋದವು... ಸಿದ್ದಾರ್ಥ್ ಈಗ ನೋವಿಲ್ಲದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ನಿನ್ನನ್ನು ಉಳಿಸಿಕೊಳ್ಳಲು ನಾನು ನಡೆಸಿದ ಎರಡು ವರ್ಷಗಳ ಹೋರಾಟ ವ್ಯರ್ಥವಾಯಿತು. ಮನಸ್ಸು ಮತ್ತು ದೇಹ ದಣಿದಿದ್ದರೂ ನಿನ್ನ ಜೀವ ಉಳಿಸಲು ನಾನು ಓಡುತ್ತಿದ್ದೆ. ಆದರೆ ನೀನು ಇನ್ನಷ್ಟು ನೋವು ಅನುಭವಿಸುವುದು ದೇವರಿಗೆ ಇಷ್ಟವಿರಲಿಲ್ಲ ಅನಿಸುತ್ತೆ. ನನಗೀಗ ಕುಸಿದು ಹೋದಂತಾಗುತ್ತಿದೆ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಕಿರುತೆರೆಯ ನೆಚ್ಚಿನ ನಟ:

ಸಿದ್ದಾರ್ಥ್ ವೇಣುಗೋಪಾಲ್ ಅವರು 'ಕಸ್ತೂರಿಮಾನ್' ಮತ್ತು 'ಭಾಗ್ಯಜಾತಕಂ' ಅಂತಹ ಸೂಪರ್ ಹಿಟ್ ಮಲಯಾಳಂ ಸೀರಿಯಲ್‌ಗಳ ಮೂಲಕ ಪ್ರತಿ ಮನೆಗೂ ಪರಿಚಿತರಾಗಿದ್ದರು. ಕೇವಲ ನಟನೆಯಲ್ಲದೆ, ಅದ್ಭುತ ನಿರೂಪಕರೂ ಆಗಿದ್ದ ಅವರು ತಮ್ಮ ಕಂಚಿನ ಕಂಠದಿಂದ ಜನಮನ ಗೆದ್ದಿದ್ದರು. ಕಾಲೇಜು ದಿನಗಳಲ್ಲೇ ವೃತ್ತಿಪರ ನಾಟಕಗಳಲ್ಲಿ ಸಕ್ರಿಯರಾಗಿದ್ದ ಸಿದ್ದಾರ್ಥ್, ನಟನೆಯನ್ನೇ ಉಸಿರಾಗಿಸಿಕೊಂಡಿದ್ದರು. ಖಾಸಗಿ ವಾಹಿನಿಗಳಲ್ಲಿ ಆಂಕರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಸೀರಿಯಲ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಚಿತ್ರರಂಗದ ಸಂತಾಪ:

ನಟ ಕಿಶೋರ್ ಸತ್ಯ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವು ಗಣ್ಯರು ಸಿದ್ದಾರ್ಥ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಸಿದ್ದಾರ್ಥ್ ಒಬ್ಬ ಅದ್ಭುತ ಕಲಾವಿದ ಮಾತ್ರವಲ್ಲ, ಸಜ್ಜನ ವ್ಯಕ್ತಿಯೂ ಆಗಿದ್ದರು. ಸೀಮಾ ಜಿ ನಾಯರ್ ಅವರು ಸಿದ್ದಾರ್ಥ್ ಅವರನ್ನು ಸ್ವಂತ ಮಗನಂತೆ ಆರೈಕೆ ಮಾಡಿದ್ದರು. ಇಂತಹ ಕಲಾವಿದರ ಅಕಾಲಿಕ ಮರಣವು ಕಲಾಲೋಕಕ್ಕೆ ತುಂಬಲಾರದ ನಷ್ಟ' ಎಂದು ಕಂಬನಿ ಮಿಡಿದಿದ್ದಾರೆ.

ತ್ರಿಶೂರ್‌ನ ಚಾಲಕುಡಿ ನಿವಾಸಿಯಾಗಿದ್ದ ಸಿದ್ದಾರ್ಥ್, ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಸದ್ಯ ಅವರ ಕುಟುಂಬದಲ್ಲಿ ತಾಯಿ ಮತ್ತು ಒಬ್ಬ ತಮ್ಮ ಇದ್ದಾರೆ. ನಟನೆಯ ಮೂಲಕ ಎಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದ ಸಿದ್ದಾರ್ಥ್ ಅವರ ಸಾವು ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ತೀವ್ರ ನೋವನ್ನು ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹನಿಮೂನ್​ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್​ ಲವ್​ಸ್ಟೋರಿಗೆ ನಾಚಿದ Amruthadhaare ಭೂಮಿಕಾ
ನಾಯಕಿಯಾಗೋದಕ್ಕೂ ಮುನ್ನ ಧಾರಾವಾಹಿಯಲ್ಲಿ ಕೆಲಸದವಳಾಗಿ ನಟಿಸಿದ್ದ ನಮೃತಾ ಗೌಡ!