ಕಲಾಗಂಗೋತ್ರಿಯ ಸುವರ್ಣ ರಂಗಹಬ್ಬದಲ್ಲಿ ಮತ್ತೆ ಮುಖ್ಯಮಂತ್ರಿ ನಾಟಕ!

Kannadaprabha News   | Asianet News
Published : Apr 02, 2021, 10:14 AM IST
ಕಲಾಗಂಗೋತ್ರಿಯ ಸುವರ್ಣ ರಂಗಹಬ್ಬದಲ್ಲಿ ಮತ್ತೆ ಮುಖ್ಯಮಂತ್ರಿ ನಾಟಕ!

ಸಾರಾಂಶ

ಕಲಾಗಂಗೋತ್ರಿ ತಂಡಕ್ಕೆ 50 ವರ್ಷ ತುಂಬಿದ ಸವಿನೆನಪಿಗೆ ಸುವರ್ಣ ರಂಗಹಬ್ಬ ನಡೆಯಲಿದೆ. ಈ ಪ್ರಯುಕ್ತ ಏ.2ರಿಂದ ಏ.4ರವರೆಗೆ ಮೂರು ನಾಟಕಗಳ ಪ್ರದರ್ಶನವಿದೆ.

ಇಂದು (ಏ.2) ಮುಖ್ಯಮಂತ್ರಿ ಚಂದ್ರು ಅಭಿನಯದ ಮುಖ್ಯಮಂತ್ರಿ, ಏ.3ರಂದು ಜನಪ್ರಿಯ ಸಂಸಾರಿಕ ನಾಟಕ ಮೈಸೂರು ಮಲ್ಲಿಗೆ, ಏ.4ಕ್ಕೆ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದಲ್ಲಿ ಅಭಿನಯಿಸುವ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಕಾಣಲಿದೆ.

ಸೇತೂರಾಂಗೆ ಜೀವಮಾನ ರಂಗ ಗೌರವ ಪ್ರಶಸ್ತಿ 

ಈ ನಾಟಕೋತ್ಸವದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಮುಖ್ಯಮಂತ್ರಿ ಚಂದ್ರು, ‘ಮುಖ್ಯಮಂತ್ರಿ ನಾಟಕ ಪ್ರದರ್ಶನ ಆರಂಭವಾದದ್ದು 1980ರಲ್ಲಿ. ಈವರೆಗೆ ಸುಮಾರು 14 ಜನ ಕರ್ನಾಟಕದ ಮುಖ್ಯಮಂತ್ರಿಗಳು ಈ ನಾಟಕ ವೀಕ್ಷಿಸಿದ್ದಾರೆ. ಎಲ್ಲಾ ಸಂದರ್ಭಕ್ಕೂ ಈ ನಾಟಕ ಕನೆಕ್ಟ್ ಆಗುತ್ತೆ. ಹೊಸ ನಾಟಕ ‘ಮತ್ತೆ ಮುಖ್ಯಮಂತ್ರಿ’ ನಾಟಕದಲ್ಲಿ ನಾವು ಕಾಣಬಯಸುವ ಉದಾತ್ತ ನಾಯಕ ಮುಖ್ಯಮಂತ್ರಿಯಾಗುವುದರ ಕಲ್ಪನೆಗೆ ನೀರೆರೆಯಲಾಗಿದೆ. ಹಿರಿಯ ನಾಟಕಕಾರ ಕೆವೈ ನಾರಾಯಣ ಸ್ವಾಮಿ ಈ ನಾಟಕದ ರಚನಕಾರರು’ ಎಂದರು.

ರಂಗಭೂಮಿಯೇ ವರವಾಯ್ತು ಅಂತಾರೆ `ವರಲಕ್ಷ್ಮೀ' ಮಾಲಿನಿ ಪಿ. ರಾವ್ 

‘ಭ್ರಷ್ಟಾಚಾರ, ಹಗೆತನ, ಸ್ವಾರ್ಥಗಳಿಂದ ತುಂಬಿದ ಇಂದಿನ ರಾಜಕಾರಣದಲ್ಲಿಸ್ವಲ್ಪ ಮಟ್ಟಿನ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ನಾಟಕ ರೂಪಿಸಲಾಗಿದೆ. ಪ್ರೇಕ್ಷಕರನ್ನು ಮನರಂಜಿಸುತ್ತಲೇ ಮನೋಚಿಂತನೆಗೆ ಹಚ್ಚುವ ಪ್ರಯತ್ನ ಇದಾಗಿದೆ’ ಎಂದೂ ಮುಖ್ಯಮಂತ್ರಿ ಚಂದ್ರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಬಿ ವಿ ರಾಜಾರಾಂ ಉಪಸ್ಥಿತರಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ