ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀರಸ್ತು ಶುಭಮಸ್ತು ಸೊಸೆ ಸಿರಿ ಹೇಳಿದ್ದಾರೆ ಕೇಳಿ...

Published : Nov 11, 2023, 06:39 PM ISTUpdated : Nov 11, 2023, 06:45 PM IST
ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀರಸ್ತು ಶುಭಮಸ್ತು ಸೊಸೆ ಸಿರಿ ಹೇಳಿದ್ದಾರೆ ಕೇಳಿ...

ಸಾರಾಂಶ

ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀಮಸ್ತು ಶುಭಮಸ್ತು ಸೊಸೆ ಸಿರಿ ಕೊಟ್ಟ ಟಿಪ್ಸ್​ ಕೇಳಿ   

ಜೀ ಕುಟುಂಬ ಧಾರಾವಾಹಿಯ ನಟ-ನಟಿಯರಿಗೆ ಹಾಗೂ ಹಿನ್ನೆಲೆ ವರ್ಗದವರಿಗೆ ನೀಡುವ ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ನಿನ್ನೆ ಅಂದರೆ ನವೆಂಬರ್​ 10ರಿಂದ  ಶುರುವಾಗಿದ್ದು, ಇವತ್ತೂ ನಡೆಯಲಿದೆ. ಇದಾಗಲೇ ಕೆಲವರಿಗೆ ಅವಾರ್ಡ್​ ನೀಡಲಾಗಿದೆ. ಭರ್ಜರಿಯಾಗಿ ನಡೆದಿರೋ ಈ ಕಾರ್ಯಕ್ರಮದಲ್ಲಿ ಜೀ ವಾಹಿನಿಯ ಎಲ್ಲಾ ಧಾರಾವಾಹಿಗಳ ಬಹುತೇಕ ಕಲಾವಿದರನ್ನು ಒಟ್ಟಿಗೇ ನೋಡುವ ಭಾಗ್ಯವನ್ನು ಧಾರಾವಾಹಿ ಪ್ರಿಯರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.  ಒಂದೆಡೆ ಅವಾರ್ಡ್​ ಫಂಕ್ಷನ್​ ಶುರುವಾಗಿದ್ದರೆ ಇನ್ನೊಂದೆಡೆ, ಕಲಾವಿದರ ಸಂದರ್ಶನ ನಡೆಸಲಾಗುತ್ತಿದೆ. ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪಾತ್ರ ಸೊಸೆಯದ್ದು. ಸಿರಿ ಪಾತ್ರದ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿರುವ ಈ ಸೊಸೆಯ ರಿಯಲ್​ ಹೆಸರು ಚಂದನಾ ರಾಘವೇಂದ್ರ.  ಅವರ ಗಂಡ ಸಮರ್ಥ್​. ಇವರ ಅಸಲಿ ಹೆಸರು ದರ್ಶಿತ್‌ ಗೌಡ. ಇವರಿಬ್ಬರೂ ಈಗ ಜೀ ಕುಟುಂಬ ಅವಾರ್ಡ್ಸ್​ ಸಂದರ್ಭದಲ್ಲಿ ಮಾತನಾಡಿದ್ದಾರೆ.

ಇದರಲ್ಲಿ ಒಂದು ಪಂಚಿಂಗ್​ ಡೈಲಾಗ್​ ಹೇಳುವಂತೆ ದರ್ಶಿತ್​ ಗೌಡ ಅಂದ್ರೆ ಸೀರಿಯಲ್​ನ ಸಮರ್ಥ್​ ಅವರಿಗೆ ಕೇಳಲಾಯಿತು. ಆಗ ಅವರು ಸಿರಿಯನ್ನು ಉದ್ದೇಶಿಸಿ ತುಂಬಾ ಸುಸ್ತಾಯ್ತಾ ಅಂತ ಕೇಳಿದ್ರು. ಅದಕ್ಕೆ ಸಿರಿ ಇಲ್ಲ ಯಾಕೆ ಅಂದಾಗ, ಆಗಿಂದಲಿಂದಲೂ ನೀನೇ ನನ್ನ ಮೈಂಡ್​ನಲ್ಲಿ ಓಡ್ತಾ ಇದ್ಯಾ ಎಂದಾಗ ಸಿರಿ ಈಗ ಸುಸ್ತಾಯ್ತು ಅಂದ್ರು. ಆಮೇಲ ಇನ್ನೊಂದು ಪಂಚಿಂಗ್​ ಡೈಲಾಗ್​ ಹೇಳಲು ಕೇಳಿದಾಗ ನಿಮ್​ ಡ್ಯಾಡಿ ಏನು ಟೆರರಿಸ್ಟಾ ಅಂತ ಸಿರಿಯನ್ನು ಕೇಳಿದ್ರು. ಅದಕ್ಕೆ ಯಾಕೆ ಅಂದಾಗ, ಅವ್ರು ಬಾಂಬ್​ ತಯಾರಿಸಿದ್ರಲ್ಲಾ ಅದಕ್ಕೆ ಅಂದ್ರು. 

ಅವಳ ಡ್ರೆಸ್ಸು, ಆಭರಣ ಇಷ್ಟ ಆಗಲ್ಲ: ಸೀತಾರಾಮದ ವಿಲನ್​ ಭಾರ್ಗವಿಯ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?
 

ನಂತರ ಸಿರಿಯ ರೀತಿಯಲ್ಲಿ ಅತ್ತೆಯನ್ನು ಇಂಪ್ರೆಸ್​ ಮಾಡುವುದು ಹೇಗೆ ಎಂದು ಸಿರಿಯನ್ನು ಕೇಳಿದಾಗ, ಅದೇನು ದೊಡ್ಡದಲ್ಲ. ಮಗ ಅಮ್ಮನನ್ನು ಸಪೋರ್ಟ್​ ಮಾಡದೇ ಇದ್ದಾಗ ಸೊಸೆಯಾದವಳು ಮಾಡಿದ್ರೆ ಮುಗಿದು ಹೋಯ್ತು. ಹೀರೋ ಆಗ್ತಾಳೆ ಎಂದರು. ಆಮೇಲೆ ಜೀ ಕುಟುಂಬದ ಅವಾರ್ಡ್​ ಬಗ್ಗೆ ಕೇಳಿದ ಪ್ರಶ್ನೆಗೆ, ಅವಾರ್ಡ್​ ಬಂದರೆ ತುಂಬಾ ಖುಷಿ ಎಂದರು ಇಬ್ಬರು. 

ಅವಾರ್ಡ್​ ಬಗ್ಗೆ ಮಾತನಾಡಿದ ಸಿರಿ, ಪ್ರಶಸ್ತಿ ಬಂದರೆ ತುಂಬಾನೇ ಖುಷಿ. ಆದರೆ ಇದಕ್ಕಿಂತಲೂ ದೊಡ್ಡ ಅವಾರ್ಡ್​ ನಟರಿಗೆ ಅಭಿಮಾನಿಗಳಿಂದ ಸಿಗುತ್ತದೆ. ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ. ಅತ್ತೆ-ಸೊಸೆ ಎಂದ್ರೆ ಹೀಗಿರಬೇಕು. ನಿಮ್ಮನ್ನು ನೋಡಿ ನಾವೂ ಕಲಿಯೋದು ಇದೆ ಎಂದೆಲ್ಲಾ ಹೇಳಿದಾಗ ಬದುಕು ಸಾರ್ಥಕವಾಯಿತು ಎನ್ನಿಸುತ್ತದೆ ಎಂದರೆ, ಸಾರ್ಥಕ್​ ಅವರು, ಇದು ನಿಜ. ಜನರ  ಮನಸ್ಸಿನಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಳ್ಳೋದು ತುಂಬಾನೇ ಮುಖ್ಯ. ಅದು ಸಿಕ್ಕರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದರು. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!